• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಆರ್‌ಎಸ್‌ಎಸ್‌ ಶಾಲೆಗಳು: ಕೋಮುವಾದದ ಪಠ್ಯಪುಸ್ತಕಗಳುˌ ವಿಷ ಬಿತ್ತುವಿಕೆ- ಭಾಗ 5

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
July 18, 2023
in ಅಂಕಣ, ಅಭಿಮತ
0
ಮೋದಿ ಘೋಷಿಸಿದ ಯೋಜನೆಗಳಲ್ಲಿ ಎಷ್ಟು ಪೂರ್ಣಗೊಂಡಿವೆ?
Share on WhatsAppShare on FacebookShare on Telegram

ಡಾ. ಜೆ ಎಸ್ ಪಾಟೀಲ.

ADVERTISEMENT

’ಹರ ಬಾಲಾ ದೇವಿ ಕಿ ಪ್ರತಿಮಾ ಬಚ್ಚಾ ಬಚ್ಚಾ ರಾಮ್ ಹೈ ˌ
ಹರ ಶರೀರ ಮಂದಿರ ಸಾ ಪಾವನ ಹೈˌ
ಗಾಯ್ ಜಹಾಂ ಮಾಂ ಪ್ಯಾರಿ ಹೈ ˌ
ಇಸಕೆ ಸೈನಿಕ ಸಮರಭೂಮಿ ಪರ ಗಾಯಾ ಕರತೆ ಗೀತಾ ಥೇ.’ ಬೋಧಮಾಲಾ ೪ ರ ಈ ಸಾಲುಗಳು ಯುವ ಮನಸ್ಸುಗಳಲ್ಲಿ ಭಾರತವು ಹಿಂದೂ ರಾಷ್ಟ್ರವೆಂಬ ಚಿತ್ರಣವನ್ನು ನಿರ್ಮಿಸುತ್ತವೆ. ಹಿಂದೂ ಧರ್ಮದ ಧಾರ್ಮಿಕ ಚಿಹ್ನೆಗಳು ಮತ್ತು ಪರಿಕಲ್ಪನೆಗಳಾದ ದೇವಿ, ರಾಮ, ದೇವಾಲಯ, ಗೋವು ಮತ್ತು ಭಗವದ್ಗೀತೆ ಈ ಉಪಮೇಯಗಳು ಇಡೀ ರಾಷ್ಟ್ರವನ್ನು ವಿವರಿಸಲು ಬಳಸಲಾಗಿದೆ. ಅದರ ಮೊದಲ ನುಡಿಯಲ್ಲಿನ, ಈ ಸಾಲುಗಳು ಭಾರತವನ್ನು “ಪವಿತ್ರ ಪರ್ವತಗಳು, ಪವಿತ್ರ ನದಿಗಳು, ಅನೇಕ ತೀರ್ಥಕ್ಷೇತ್ರಗಳು, ದೇವಾಲಯಗಳು ಮತ್ತು ಗುರುದ್ವಾರಗಳನ್ನು ಕಾಲಕಾಲಕ್ಕೆ ಇಲ್ಲಿ ನಿರ್ಮಿಸಲಾಗಿದೆ, ಅದನ್ನು ನೋಡಿ ನಾವು ಇನ್ನೂ ಪವಿತ್ರವಾಗಿದ್ದೇವೆ ಹಾಗು ದೇವರ ಕೃಪೆಗೆ ಪಾತ್ರರಾಗಿದ್ದೇವೆ” ಎಂದು ಉಲ್ಲೇಖಿಸುತ್ತವೆ. ಬೋಧಮಾಲಾ ಸರಣಿಯ ಮಾದರಿಯಲ್ಲೆ, ಇತಿಹಾಸ್ ಗಾ ರಹಾ ಹೈ (IGRH) ಕೂಡ ವಿದ್ಯಾಭಾರತಿ ಶಾಲೆಗಳಲ್ಲಿ ಕಲಿಸುವ ಪೂರಕ ಪಠ್ಯಪುಸ್ತಕಗಳ ಸರಣಿಯಾಗಿದೆ ಎನ್ನುತ್ತದೆ ಸಿಎಬಿಇ ವರದಿ.

ಈ ಸಿಎಬಿಇ ಸಮಿತಿಯ ವರದಿಯು ಛತ್ತೀಸ್‌ಗಢದಲ್ಲಿ ಬೋಧಿಸಲಾದ IGRH ಸರಣಿಯ ಮೇಲೆ ಪ್ರಮುಖವಾದ ಅವಲೋಕನವನ್ನು ಮಾಡಿದೆ, “ಆರ್‌ಎಸ್‌ಎಸ್‌ನ ಕೇಂದ್ರ ವಿಚಾರಧಾರೆಗಳಲ್ಲಿ ಒಂದು ‘ಮಾತೃಭೂಮಿ’ಯೊಂದಿಗೆ ‘ಪವಿತ್ರಭೂಮಿ’ ಯನ್ನು ಸಮೀಕರಲಾಗಿದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಪವಿತ್ರಭೂಮಿಗಳನ್ನು ಈ ನೆಲದಿಂದ ಬೇರೆಡೆ ಹೊಂದಿರುವುದರಿಂದ, ಅವರು ಈ ದೇಶಕ್ಕೆ ಸಂಪೂರ್ಣ ನಿಷ್ಠರಾಗಿಲ್ಲವೆಂದು ಪ್ರತಿಪಾದಿಸುತ್ತದೆ. ಪಠ್ಯವು ಹಿಂದೂ ಮಕ್ಕಳು ಮತ್ತೊಮ್ಮೆ ಪರಕೀಯರ ಗುಲಾಮರಾಗದಂತೆ ನೆನಪಿಟ್ಟುಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಸಿಎಬಿಇ ವರದಿಯು ಸವಿವರಗಳನ್ನು ನೀಡಿದೆ. ಈ ಪುಸ್ತಕಗಳು ಬಹಳ ಜಾಣತನದಿಂದ, ‘ಈ ದೇಶ ಯಾರದ್ದು? ಇದು ಯಾರ ಮಾತೃ, ಪಿತೃ ಮತ್ತು ಪವಿತ್ರಭೂಮಿ?ˌ ಈ ನೆಲದ ಕೃಷಿ ಲಯ ಮತ್ತು ಹವಾಮಾನಕ್ಕೆ ಅನುಗುಣವಾಗಿ ಯಾವ ಧರ್ಮದ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ?ˌ ಯಾವ ಜನರು ಶಿವಾಜಿ, ರಾಣಾ ಪ್ರತಾಪ್, ಚಂದ್ರಗುಪ್ತ, ರಾಮ, ಕೃಷ್ಣ, ದಯಾನಂದರನ್ನು ತಮ್ಮ ಮಹಾನ್ ನಾಯಕರೆಂದು ಕರೆಯುತ್ತಾರೆ?’ ಎಂದು ಪ್ರಶ್ನಿಸುವ ಮೂಲಕ ಈದ್ ಮತ್ತು ಕ್ರಿಸ್‌ಮಸ್‌ನಂತಹ ಹಬ್ಬಗಳು ನಮ್ಮ ಹಬ್ಬಗಳಲ್ಲ ಎಂದು ಪರೋಕ್ಷವಾಗಿ ವಿದ್ಯಾರ್ಥಿಗಳನ್ನು ಎಚ್ಚರಿಸುತ್ತದೆ.

ಈ ಪುಸ್ತಕಗಳು ನಿರಂತರವಾಗಿ ‘ಭಾರತ ಮಾತೆ’ಯ ಗರ್ಭವನ್ನು ಉಲ್ಲೇಖಿಸುತ್ತಾ ಅದರಿಂದ ಅನೇಕ ವೀರ ಪುತ್ರರು ಜನಿಸಿದ್ದು, ಅವರು ಆಕೆಯನ್ನು ಪೂಜಿಸಿˌ ಆಕೆಯ ರಕ್ಷಣೆಗಾಗಿ ಮರಣಹೊಂದಿದ್ದಾರೆ, ಅವರ ಕೈಯಲ್ಲಿ ಗೀತೆ ಮತ್ತು ಅವರ ತುಟಿಗಳಲ್ಲಿ ವಂದೇ ಮಾತರಂ ಸದಾ ಇರುತ್ತಿತ್ತು” ಎಂದು ಬರೆಯಲಾಗಿದೆ. ಈ ಪುಸ್ತಕ ಸರಣಿಯಲ್ಲಿ ಹಿಂದೂ ಎಂದರೆ ಯಾರು ಎನ್ನುವ ಅನೇಕ ಬಗೆಯ ಸುಳ್ಳು ಪರಿಕಲ್ಪನೆಗಳನ್ನು ಹರಡಲಾಗಿದೆಯಂತೆ. ‘ಹಿಂದೂ ಎಂದರೆ ಯಾರು?’ ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸುವುದಷ್ಟೆ ಅಲ್ಲದೆ ಹಿಂದುತ್ವವು ಇಂದಿನ “ಆದರ್ಶ ಸಿದ್ಧಾಂತ” ಮತ್ತು “ಸಮಯದ ಅಗತ್ಯ” ಎಂದು ಸಾರುತ್ತವೆ. ೧೦ ನೇ ತರಗತಿಗೆ ಭೋಧಮಾಲಾ ಎಂಬ ಶೀರ್ಷಿಕೆಯು ಹಿಂದಿ ವಿಷಯದಲ್ಲಿ ‘ಹಿಂದೂ ಕೌನ್?’ ಎಂಬ ಶೀರ್ಷಿಕೆಯ ಪ್ರತ್ಯೇಕ ಪಾಠವನ್ನು ಹೊಂದಿದೆ. “ಹಿಂದುತ್ವವನ್ನು ವ್ಯಾಖ್ಯಾನಿಸುವಾಗ, ಡಾ ರಾಧಾಕೃಷ್ಣನ್ ಹಿಂದುತ್ವವು ಒಂದು ಜೀವನ ವಿಧಾನವಾಗಿದೆ, ಇದು ಸುಗಮ ಜೀವನ ಮತ್ತು ಸಮೃದ್ಧಿಗೆ ಕಾರಣವಾಗುವ ಹರಿವು ಮತ್ತು ಸಂಪ್ರದಾಯವಾಗಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಲಾಗಿದೆಯಂತೆ. ಮನುಷ್ಯರಿಂದ ಹಿಡಿದು ಪ್ರಾಣಿ, ಪಕ್ಷಿಗಳು ಮತ್ತು ಈ ಪ್ರಕೃತಿಯ ಎಲ್ಲವುಗಳ ಕಲ್ಯಾಣದ ಕುರಿತು ಯೋಚಿಸುವ ಆದರ್ಶ ಹಿಂದು ಧರ್ಮದಲ್ಲಿ ಮಾತ್ರ ಕಾಣಸಿಗೂತ್ತದೆ ಎಂದು ಬರೆಯಲಾಗಿದೆಯಂತೆ.

“ಇಡೀ ಜಗತ್ತಿಗೆ ಶಾಂತಿ, ಮನುಕುಲಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರಬಲ್ಲ ಏಕೈಕ ಶಕ್ತಿ ಹಿಂದುತ್ವ. ಇದು ಇಂದಿನ ಅಗತ್ಯವಾಗಿದೆ. ಇದು ಮನುಷ್ಯನಿಗೆ ಮನುಷ್ಯನಾಗಿ ಬದುಕಲು ಕಲಿಸುವ ಒಂದು ಅತ್ಯಂತ ಆದರ್ಶ ಜೀವನಶೈಲಿಯಾಗಿದೆ. ಹಿಂದೂ ಧರ್ಮವನ್ನು ಕೋಮುವಾದದ ಪದವೆಂದು ಪರಿಗಣಿಸುವುದು ಸರಿಯಲ್ಲ. [ಪಠ್ಯದಲ್ಲಿ ‘ಹಿಂದೂತ್ವ’ವನ್ನು ‘ಹಿಂದೂ ಧರ್ಮ’ ಎಂದು ಸೂಕ್ಷ್ಮವಾಗಿ ಬದಲಾಯಿಸಲಾಗಿದೆ]. “ಹಿಂದುತ್ವದ ಅಗತ್ಯತೆಗಳು” ಎಂಬ ಕರಪತ್ರದಲ್ಲಿ ಸಾವರಕರ್ ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು “ಹಿಂದುತ್ವ: ಹಿಂದೂ ಯಾರು” ಎಂದು ಮರುನಾಮಕರಣ ಮಾಡಿˌ ೧೯೨೮ ರಲ್ಲಿನ ಸಂಗತಿಯನ್ನು ಮರುಮುದ್ರಣ ಮಾಡಿ ಪುಸ್ತಕದಲ್ಲಿ “ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನು ಈ ದೇಶಕ್ಕೆ ಗೌರವಿಸಿದರೆ ಮಾತ್ರ ಆತ ಹಿಂದೂˌ ಮತ್ತು ಈ ಭೂಮಿಯು ಆತನ ಮಾತೃಭೂಮಿ, ಪಿತೃಭೂಮಿ, ಪವಿತ್ರಭೂಮಿ ಎಂದು ಪರಿಗಣಿಸಿಬೇಕು ಎಂದು
ಬರೆಯಲಾಗಿದೆಯಂತೆ. ಮುಖರ್ಜಿ ಹಾಗು ಮಹಾಜನ್ ಅವರ ಸಂಶೋಧನೆಯ ಪ್ರಕಾರˌ ಪ್ರತಿಯೊಂದು ಭೋದಮಾಲಾ ಪುಸ್ತಕ ಸರಣಿಯಲ್ಲಿ ಪ್ರಶ್ನೋತ್ತರ ವಿಭಾಗವನ್ನು ಸೇರಿಸಲಾಗಿದೆಯಂತೆ. ಆ ಪ್ರಶ್ನೆಗಳ ಕೆಲವು ಸ್ಯಾಂಪಲ್ ಗಳನ್ನು ಇಲ್ಲಿ ನೀಡಲಾಗಿದೆ.

ಪ್ರಶ್ನೆ: ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲಿ ನಿರ್ಮಿಸಿದ ಮೊದಲ ದೇವಾಲಯವನ್ನು ಯಾರು ಪತ್ತೆ ಹಚ್ಚಿದರು?
ಉತ್ತರ: ಶ್ರೀರಾಮನ ಮಗ ಮಹಾರಾಜ ಕುಶ.

ಪ್ರಶ್ನೆ: ಶ್ರೀರಾಮ ಮಂದಿರವನ್ನು ಧ್ವಂಸ ಮಾಡಿದ ಮೊದಲ ವಿದೇಶಿ ಆಕ್ರಮಣಕಾರ ಯಾರು?
ಉತ್ತರ: ಗ್ರೀಸ್‌ನ ಮೆನಾಂಡರ್ (೧೫೦ BC).

ಪ್ರಶ್ನೆ: ಪ್ರಸ್ತುತ ರಾಮ ಮಂದಿರವನ್ನು ನಿರ್ಮಿಸಿದವರು ಯಾರು?
ಉತ್ತರ: ಮಹಾರಾಜ ಚಂದ್ರಗುಪ್ತ ವಿಕ್ರಮಾದಿತ್ಯ (ಕ್ರಿ.ಶ. ೩೮೦–೪೧೩).

ಪ್ರಶ್ನೆ: ಕ್ರಿ.ಶ. ೧೦೩೩ ರಲ್ಲಿ ಅಯೋಧ್ಯೆಯಲ್ಲಿ ಯಾವ ಮುಸ್ಲಿಂ ಲೂಟಿಕೋರ ದೇವಾಲಯಗಳನ್ನು ಆಕ್ರಮಿಸಿದನು?
ಉತ್ತರ: ಮಹ್ಮದ್ ಘಜ್ನಿಯ ಸೋದರಳಿಯ ಸಲಾರ್ ಮಸೂದ್.

ಪ್ರಶ್ನೆ: ಕ್ರಿ.ಶ. ೧೫೨೮ ರಲ್ಲಿ ಯಾವ ಮೊಘಲ್ ಆಕ್ರಮಣಕಾರನು ರಾಮ ದೇವಾಲಯವನ್ನು ನಾಶಪಡಿಸಿದನು?
ಉತ್ತರ: ಬಾಬರ್

ಪ್ರಶ್ನೆ: ಬಾಬರಿ ಮಸೀದಿ ಏಕೆ ಮಸೀದಿ ಅಲ್ಲ?
ಉತ್ತರ. ಏಕೆಂದರೆ ಮುಸ್ಲಿಮರು ಇಂದಿಗೂ ಅಲ್ಲಿ ನಮಾಜ್ ಮಾಡಿರುವುದಿಲ್ಲ.

ಪ್ರಶ್ನೆ: ಕ್ರಿ.ಶ ೧೫೨೮ ರಿಂದ ೧೯೧೪ ರವರೆಗೆ ಎಷ್ಟು ರಾಮನ ಭಕ್ತರು ರಾಮ ಮಂದಿರ ವಿಮೋಚನೆಗೆ ತಮ್ಮ ಪ್ರಾಣವನ್ನು ಕಳೆದುಕೊಂಡರು?
ಉತ್ತರ: ಮೂರು ಲಕ್ಷದ ಐವತ್ತು ಸಾವಿರ.

ಪ್ರಶ್ನೆ: ಪರಕೀಯರು ಎಷ್ಟು ಬಾರಿ ಶ್ರೀ ರಾಮಜನ್ಮಭೂಮಿಯನ್ನು ಆಕ್ರಮಿಸಿದ್ದಾರೆ?
ಉತ್ತರ: ಎಪ್ಪತ್ತೇಳು ಬಾರಿ.

ಪ್ರಶ್ನೆ: ಶ್ರೀ ರಾಮ್ ಕರ ಸೇವಾ ಸಮಿತಿಯು ಕರಸೇವೆಯನ್ನು ಪ್ರಾರಂಭಿಸಲು ಯಾವ ದಿನವನ್ನು ನಿರ್ಧರಿಸಿತ್ತು?
ಉತ್ತರ: ಅಕ್ಟೋಬರ್ ೩೦, ೧೯೯೦.

ಪ್ರಶ್ನೆ: ಭಾರತದ ಇತಿಹಾಸದಲ್ಲಿ ೨ ನವೆಂಬರ್ ೧೯೯೦ ಅನ್ನು ಕಪ್ಪು ಅಕ್ಷರಗಳಲ್ಲಿ ಏಕೆ ಕೆತ್ತಲಾಗಿದೆ?
ಉತ್ತರ: ಏಕೆಂದರೆ ಅಂದು ಮುಖ್ಯಮಂತ್ರಿಗಳು ನಿಶ್ಶಸ್ತ್ರ ಕರಸೇವಕರನ್ನು ಗುಂಡಿಕ್ಕಿ ಕೊಲ್ಲಲು ಪೊಲೀಸರಿಗೆ ಆದೇಶ ನೀಡಿ ನೂರಾರು ಜನರನ್ನು ಕಗ್ಗೊಲೆ ಮಾಡಿದರು.

ಪ್ರಶ್ನೆ. ಶ್ರೀರಾಮ ಜನ್ಮಭೂಮಿಯಲ್ಲಿ ದೇವಾಲಯದ ಶಿಲಾನ್ಯಾಸಗಳನ್ನು ಯಾವಾಗ ಮಾಡಲಾಯಿತು?
ಉತ್ತರ: ೧ ನವೆಂಬರ್ ೧೯೮೯.

ಪ್ರಶ್ನೆ: ೩೦ ಅಕ್ಟೋಬರ್ ೧೯೯೦ ರಂದು ಪ್ರಾರಂಭವಾದ ರಾಮ ಜನ್ಮಭೂಮಿಯ ವಿಮೋಚನೆಗಾಗಿನ ಹೋರಾಟದ ಸಂಖ್ಯೆ ಎಷ್ಟು?
ಉತ್ತರ: ೭೮ ನೇ ಹೋರಾಟ.

ಇತರ ಇನ್ನೊಂದಷ್ಟು ಪ್ರಶ್ನೆಗಳು:

ಪ್ರಶ್ನೆ: ‘ರಾಮಭಕ್ತ ಕರ ಸೇವಕರು ಶ್ರೀ ರಾಮಜನ್ಮಭೂಮಿಯ ಮೇಲೆ ಕೇಸರಿ ಧ್ವಜವನ್ನು ಯಾವಾಗ ಹಾರಿಸಿದರು? ಕೇಸರಿ ಧ್ವಜವನ್ನು ಹಾರಿಸುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಯುವಕರ ಹೆಸರನ್ನು ಉಲ್ಲೇಖಿಸಿರಿ.

ಇವು ಆ ಭೋದಮಾಲಾ ಸರಣಿಯ ಪುಸ್ತಕದೊಳಗೆ ನೀಡಲಾದ ಕೆಲವು ಪ್ರಶ್ನೋತ್ತರಗಳ ಸ್ಯಾಂಪಲ್ ಗಳು.

ಮುಂದುವರೆಯುವುದು….

Tags: BJPHindutvaKalladka Prabhakar BhatRSS
Previous Post

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್

Next Post

ಉತ್ತರಾಧಿಕಾರ- ತೆರಿಗೆ ಕಾನೂನು- ಏಕರೂಪ ನಾಗರಿಕ ಸಂಹಿತೆ- ಭಾಗ 1

Related Posts

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
0

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರುವ ಬೆಡಗಿ ಎಂದೇ ಹೇಳಬಹುದು. ಇದೀಗ...

Read moreDetails

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025

Kannada Cinema: ಯಶೋಧರ ನಿರ್ದೇಶನದದಲ್ಲಿ ಅಭಿಮನ್ಯು ನಾಯಕನಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ .

July 2, 2025
Next Post
ಸಮತೋಲನದ ನ್ಯಾಯಯುತ ಸಂಹಿತೆ ಜಾರಿಯಾಗಬೇಕಿದೆ

ಉತ್ತರಾಧಿಕಾರ- ತೆರಿಗೆ ಕಾನೂನು- ಏಕರೂಪ ನಾಗರಿಕ ಸಂಹಿತೆ- ಭಾಗ 1

Please login to join discussion

Recent News

Top Story

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

by ಪ್ರತಿಧ್ವನಿ
July 2, 2025
Top Story

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

by ಪ್ರತಿಧ್ವನಿ
July 2, 2025
Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025

“ಕೊರಗಜ್ಜ” ಸಿನಿಮಾಗೆ ಕಾಸ್ಟ್ಯೂಮ್ ಮತ್ತು ಆರ್ಟ್ ಡೈರೆಕ್ಷನ್ ಗೆ ಟಿಪ್ಸ್ ನೀಡಿದ್ದೇ 96ವರ್ಷದ ಎಂ ಎಸ್ ಸತ್ಯು- ನಿರ್ದೇಶಕ ಸುಧೀರ್ ಅತ್ತಾವರ್

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada