• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ರೋಹಿಣಿ vs ರೂಪಾ: ಯಾರು ಸರಿ? ಯಾರು ತಪ್ಪು? ಮಹಿಳಾಧಿಕಾರಿಗಳ ಪರ-ವಿರೋಧ ಚರ್ಚೆ

ಪ್ರತಿಧ್ವನಿ by ಪ್ರತಿಧ್ವನಿ
February 19, 2023
in Top Story, ಕರ್ನಾಟಕ
0
ರೋಹಿಣಿ vs ರೂಪಾ: ಯಾರು ಸರಿ? ಯಾರು ತಪ್ಪು? ಮಹಿಳಾಧಿಕಾರಿಗಳ ಪರ-ವಿರೋಧ ಚರ್ಚೆ
Share on WhatsAppShare on FacebookShare on Telegram

 ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಂಧಾನ ಯತ್ನದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಹಿರಿಯ ಐಪಿಎಸ್‌ ಅಧಿಕಾರಿ ರೂಪಾ ಡಿ ಮೌದ್ಗಿಲ್‌, ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಖಾಸಗಿ ಚಿತ್ರಗಳನ್ನು ಹಿರಿಯ ಐಎಎಸ್‌ ಅಧಿಕಾರಿಗಳಿಗೆ ರೋಹಿನಿ ಕಳಿಸಿ ಅವರಿಗೆ ಉತ್ತೇಜನ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಈ ಆರೋಪದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳ ಪರ-ವಿರೋಧ ಚರ್ಚೆಗಲು ಶುರುವಾಗಿದೆ.

ADVERTISEMENT

ಏನೇ ಇದ್ದರೂ ಒಂದು ಮಹಿಳೆಯ ಖಾಸಗಿ ಫೋಟೋಗಳನ್ನು ಸಾರ್ವಜನಿಕಗೊಳಿಸಬಾರದು ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು, “ಮೇಲಾಧಿಕಾರಿಗಳಿಗೆ ಖಾಸಗಿ ಚಿತ್ರಗಳನ್ನು ಕಳುಹಿಸಿ ಯಾವೆಲ್ಲಾ ಪ್ರಯೋಜನೆ ಪಡೆದುಕೊಂಡಿದ್ದಾರೆ? ಇದೂ ಕೂಡಾ ಒಂದು ರೀತಿಯಲ್ಲಿ ಆಮಿಷವಲ್ಲವೇ?” ಎಂದು ಪ್ರಶ್ನಿಸಿ ರೂಪಾ ಅವರ ಪರ ನಿಂತಿದ್ದಾರೆ.

ಈ ನಡುವೆ, ದಿವಂಗತ ಡಿಕೆ ರವಿಯವರ ಪತ್ನಿ ಕಾಂಗ್ರೆಸ್‌ ನಾಯಕಿ ಕುಸುಮಾ ಹನುಮಂತರಾಯಪ್ಪ ಅಖಾಡಕ್ಕಿಳಿದಿದ್ದಾರೆ. ಡಿಕೆ ರವಿ ಸಾವಿನಲ್ಲಿ ರೋಹಿಣಿ ಪಾತ್ರವಿದೆ ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ ಕುಸುಮಾ ಅವರ ಎಂಟ್ರಿಯು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಡಿಕೆ ರವಿಗೆ ಮಾನಸಿಕ ಅಸ್ವಸ್ಥತೆ ಇರಲಿಲ್ಲ: ಕುಸುಮಾ

“ಐಎಎಸ್ ಮತ್ತ ಐಪಿಎಸ್ ವಾರ್ ಮಧ್ಯೆ ನಾನು ಬರೋದಿಲ್ಲ. ರವಿಯವರ ಹೆಸರು ಬಂದಿರೋದ್ರಿಂದ ನಾನು ಪ್ರತಿಕ್ರಿಯೆ ನೀಡುತ್ತಿದ್ದೇನೆ. ನಾನು ಅನುಭವಿಸರುವ ನೋವು, ಕಷ್ಟ ಯಾವ ಹೆಣ್ಣಿಗೂ ಆಗಬಾರದು. ಸಿಬಿಐ ರಿಪೋರ್ಟ ನಲ್ಲಿ ಮೆಸೆಜ್ ಚಾಟ್ ಮಾಡಿರೋ ವಿಚಾರ ಸ್ಪಷ್ಟವಾಗಿದೆ. ನನಗೆ ಸಿಬಿಐ ರಿಪೊರ್ಟ್ ಬಂದಮೇಲೆ ಯಾರೂ  ಡಿಸ್ಕರ್ಸ್ ಮಾಡಲೇ ಇಲ್ಲ. ತನಿಖೆ ಮಾಡಿದ ಮೇಲೆ ಯಾವ ಅಂಶಗಳಿವೆ ಅನ್ನೋದು ಯಾರೂ ಡಿಸ್ಕಸ್  ಮಾಡಿಲ್ಲ. ಡಿ ರೂಪ ಅವರ ಮಾಡ್ತಿರೋ ಹೋರಾಟ ಗಮನಸಿಕೊಂಡು ಬರುತ್ತಿದ್ದೇನೆ. ಕರ್ಮ ಯಾರನ್ನೂ ಬಿಡೊದಿಲ್ಲ ಹಾಗಾಗಿ ತಪ್ಪು ಮಾಡಿದವರು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಜವಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾಡಬಾರದು. ಡಿಕೆ ರವಿಗೆ ಮಾನಸಿಕ ಅಸ್ವಸ್ಥತನ ಇರಲಿಲ್ಲ.ಬೇರೆ ಅಧಿಕಾರಿಗಳಿಗೆ ಏನು ಕಳಿಸಿದ್ದಾರೆ ನನಗೆ ಗೊತ್ತಿಲ್ಲ. ಆದರೆ ನನಗೆ ಆದ ನೋವು ಯಾರಿಗೂ ಆಗಬಾರದು” ಎಂದು ಕುಸುಮಾ ಹೇಳಿದ್ದಾರೆ.

ಮೇಡಂ, ಉನ್ನತ ಹುದ್ದೆಯಲ್ಲಿ ಇರುವ ನೀವು ಕಾನೂನು ಅಡಿಯಲ್ಲಿ ಶ್ರೀಮತಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಯಾರೂ ಅಡ್ಡಿಪಡಿಸಿರಲಿಲ್ಲ. ನೀವು ಶಿಷ್ಟಾಚಾರ ಉಲ್ಲಂಘಿಸಿದ್ದೀರಿ ಅಂತ ಅನಿಸುತ್ತಿಲ್ಲವೇ? ಸಾರ್ವಜನಿಕವಾಗಿ ಈ ಜಗಳ ಯಾರಿಗೂ ಶೋಭೆ ತರುವುದಿಲ್ಲ. ತಪ್ಪು ಎಸಗಿದ್ದರೆ ಕಾನೂನು ಇದೆ ಅಲ್ಲವೇ???

— Ramamurthy (@rasomurthy) February 19, 2023

ರೂಪಾ ಅವರ ಆರೋಪದ ಕಾವು ತೀವ್ರಗೊಳ್ಳುತ್ತಿದ್ದಂತೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದ ದಿವಂಗತ ಐಎಎಸ್‌ ಅಧಿಕಾರಿ ಡಿಕೆ ರವಿಯವರ ಪತ್ನಿ ಕುಸುಮಾ ಹನುಮಂತರಾಯಪ್ಪ, “ತಕ್ಷಣ ಅಥವಾ ತಡವಾಗಿ, ಏನೇ ಆದರೂ ಕರ್ಮ ಹಿಂಬಾಲಿಸುತ್ತದೆ.” ಎಂದು ಟ್ವೀಟ್‌ ಮಾಡಿದ್ದರು.

  ಕುಸುಮಾ ಟ್ವೀಟ್‌ ಅನ್ನು ಮರು ಟ್ವೀಟ್‌ ಮಾಡಿದ ಡಿ. ರೂಪಾ, “’ಕುಸುಮಾ, ಒಬ್ಬ ಮಹಿಳೆಯಾಗಿ ನಾನು ನಿಮ್ಮ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ಈ ನೋವು ಹಲವು ಮಹಿಳೆಯರದ್ದೂ ಆಗಿದೆ (ಅದರಲ್ಲಿ ಕೆಲವರು ಐಎಎಸ್‌ನಲ್ಲೂ ಇದ್ದಾರೆ) ಆದರೂ ಅಸಹಯಕರಾಗಿದ್ದಾರೆ. ಒಂದಲ್ಲ ಒಂದು ದಿನ ಅಪರಾಧಿಯ ವಿರುದ್ಧ (ಅದು ಮಹಿಳೆಯಾಗಿದ್ದರೂ) ಈ ವಿಚಾರದಲ್ಲಿ ನಿಮ್ಮ ಜೊತೆ ಯಾರಾದರೂ ನಿಲ್ಲುತ್ತಾರೆ. ‘ಆಕೆ’ ಇಂತಹ ಕೆಲಸವನ್ನು ಪುನಃ ಮಾಡದಂತೆ ದೇವರು ಸಹಾನುಭೂತಿ ಮತ್ತು ಸದ್ಬುದ್ದಿ ನೀಡಲಿ” ಎಂದು ಎಂದಿದ್ದಾರೆ.

ಕಂಪ್ಲೀಟ್ ಸಾಕ್ಷಿ ಇದ್ರೆ ಬಿಡುಗಡೆ ಮಾಡಿ, ಅದು ಬಿಟ್ಟು ಈ ಫೋಟೋ ಇಟ್ಕೊಂಡು ತನಿಖೆ ಮಾಡಿ ಅನ್ನೋದು ಎಷ್ಟು ಸರಿ??

ರೋಹಿಣಿ ಅವ್ರು ಫೋಟೋ ಕಳ್ಸಿದ್ರೆ, ಯಾರಿಗೆ ಕಳ್ಸಿದ್ರು ಅನ್ನೋದು ಹೇಳಿ, ಅದು ಬಿಟ್ಟು ಗಿಮಿಕ್ ಮಾಡ್ಬೇಡಿ.

ಎಲೆಕ್ಷನ್ ಟಿಕೆಟ್ ಆಸೆ ಇದ್ರೆ ಮೊದ್ಲು ರಾಜೀನಾಮೆ ಕೊಟ್ಟು ರಾಜಕೀಯ ಸೇರ್ಕೊಳ್ಳಿ.

ಹುದ್ದೆಗೆ ಅವಮಾನ ಮಾಡ್ಬೇಡಿ

— Naresh G (@Naresha_g) February 19, 2023
https://twitter.com/Nascorb/status/1627355334552748035

ರೋಹಿಣಿ ಸಿಂಧೂರಿ ತಪ್ಪು ಮಾಡಿದಾಗ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ಬಚಾವ್ ಮಾಡುವುದಕ್ಕೆ ಯಾರಿದ್ದಾರೆ?

 ‘ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಾನು ಮಾಡಿರುವ ಕೆಲಸಕ್ಕೆ ಶಾಸಕನ ಹತ್ತಿರ ಸಂಧಾನಕ್ಕೆ ಹೋಗಿರುವುದು ಗೊತ್ತಾಗಿದ್ದು, ಇದನ್ನು ಬಹಿರಂಗಪಡಿಸಲಿ. ಜತೆಗೆ, ರಾಜ್ಯ ಸರಕಾರ ಈ ಸಂಬಂಧ ತನಿಖೆ ನಡೆಸಲಿ’ ಎಂದಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ೀ ಬಗ್ಗೆ ದೂರು ಸಲ್ಲಿಸಿದ್ದಾರೆ.

  ‘ರೋಹಿಣಿ ಸಿಂಧೂರಿ ಅವರು ಶಾಸಕ ಸಾ.ರಾ.ಮಹೇಶ್ ಅವರೊಂದಿಗೆ ರಾಜಿ ಸಂಧಾನ ಮಾಡಿಕೊಂಡಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಇವರು ಏಕೆ ಸಂಧಾನಕ್ಕೆ ಹೋದರು? ಏಕೆ ಹೋಗಬೇಕಿತ್ತು?’  

‘ಅಲ್ಲದೆ, ಯಾವ ಸರಕಾರಿ ನಿಯಮದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಗಳ ಜತೆ ರಾಜಕಾರಣಿಗಳ ಸಂದಾನಕ್ಕೆ ಅವಕಾಶವಿದೆ?. ಪ್ರಕರಣಗಳು ಸರಕಾರದ ಮಟ್ಟದಲ್ಲಿ ಇದ್ದಾಗ ಯಾಕೆ ಸಂಧಾನಕ್ಕೆ ಹೋಗಿದ್ದರು. ಏನಾದರು ತಪ್ಪು ಮಾಡಿದ್ದರಾ ಎಂದು ಪ್ರಶ್ನಿಸಿದ ಅವರು, ರಾಜಕಾರಣಿಗಳ ವಿಚಾರದಲ್ಲಿ ಸಂಧಾನ ಎಂದು ಬಂದರೆ ಮೈ ಉರಿಯಿತು. ಆ ರಾಜಕಾರಣಿಗೂ ರೋಹಿಣಿ ಸಿಂಧೂರಿ ವಿರುದ್ಧದ ಯಾವುದೋ ದಾಖಲೆ, ಫೋಟೊ ಸಿಕ್ಕಿರಬೇಕು. ಆದ್ದರಿಂದಲೇ ರಾಜಿ ಸಂಧಾನಕ್ಕೆ ಹೊರಟಿದ್ದಾರೆಯೇ?’  .

‘ಪ್ರತಿ ಬಾರಿಯೂ ರೋಹಿಣಿ ಸಿಂಧೂರಿ ತಪ್ಪು ಮಾಡಿದಾಗ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ಬಚಾವ್ ಮಾಡುವುದಕ್ಕೆ ಯಾರಿದ್ದಾರೆ, ಯಾರೆಲ್ಲಾ ಅವರನ್ನು ಬೆಂಬಲಿಸುತ್ತಾರೆ ನನಗೆ ತಿಳಿಯಬೇಕು. ಚಾಮರಾಜನಗರದಲ್ಲಿ 24 ಜನ ಆಕ್ಸಿಜನ್‍ನಿಂದ ಸತ್ತಾಗ ಈಕೆಯ ಮೇಲೆ ತನಿಖೆ ನಡೆಸದೆ ಪಾರಾದರು. ಕನ್ನಡದ ಹುಡುಗಿ ಐಎಎಸ್ ಶಿಲ್ಪ ನಾಗ್ ವಿರುದ್ಧ ಜಗಳ, ರಂಪ ಮಾಡಿದ್ದರು. ಡಿಕೆ ರವಿ ಪ್ರಕರಣ, ಐಪಿಎಸ್ ಹರೀಶ್ ಸಾವು, ಸಾರಾ ಮಹೇಶ್ ಜೊತೆಗಿನ ಗುದ್ದಾಟ, ಐಎಎಸ್ ಅಧಿಕಾರಿಗಳಾದ ಹರ್ಷ ಗುಪ್ತ ಜೊತೆ ಜಗಳ, ಮಣಿವಣ್ಣನ್ ಜೊತೆ ಜಗಳ ಮಾಡಿದ್ದರು. ಆಗೆಲ್ಲಾ ಬಜಾವ್ ಆಗಿದ್ದರು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ರೂಪಾ ಸರಕಾರವನ್ನು ಒತ್ತಾಯಿಸಿದರು.

‘ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳ ಮೂಲಕ ರೋಹಿಣಿ ಸಿಂಧೂರಿ ಅವರ ಮೇಲೆ ಆರೋಪಗಳ ಸುರಿಮಳೆ ಗೈದಿರುವ ರೂಪಾ ಅವರು, ಮೈಸೂರಿನ ಜಿಲ್ಲಾಧಿಕಾರಿ ಮನೆ, ಪಾರಂಪರಿಕ ಕಟ್ಟಡವಾದ್ದರೂ ಅಲ್ಲಿ ಕೋವಿಡ್ ಸಂದರ್ಭದಲ್ಲಿ ಟೈಲ್ಸ್ ಹಾಕಿದ್ದು, ಈಜುಕೋಳ ಮಾಡಿದ್ದು ಸರಿಯಲ್ಲ. ಮನುಷ್ಯತ್ವ ಇರುವವರು ಯಾರೂ ಹೀಗೆ ಮಾಡುತ್ತಿರಲಿಲ್ಲ’ ಎಂದು ಟೀಕಿಸಿದರು.

‘ಡಿ.ಕೆ.ರವಿ ತೀರಿ ಹೋದ ಕೆಲ ತಿಂಗಳು ಮುಂಚೆ ಕನ್ನಡದ ಹುಡುಗ, ಐಪಿಎಸ್ ಅಧಿಕಾರಿ ಎನ್. ಹರೀಶ್ ಅವರ ಜತೆ ರೋಹಿಣಿ ಮದುವೆಯಾಗಲಿದ್ದಾರೆ ಎಂಬ ವಿಚಾರ ಹರಿದಾಡಿತ್ತು. ಆದರೆ, ಆತ, ಈಕೆಗಾಗಿ ಕಾದು ಕಾದು ಆತ್ಮಹತ್ಯೆ ಮಾಡಿಕೊಂಡದ್ದು, ಎಂದು ಹಲವರು ಹೇಳಿದರೂ, ನಾನು ಅದನ್ನು ನಂಬಲಿಲ್ಲ, ಈಗೂ ನಂಬಿಲ್ಲ. ಅಲ್ಲದೆ, ಡಿ.ಕೆ.ರವಿ, ಸಂಭಾವಿತ ವ್ಯಕ್ತಿ. ಸಿಬಿಐ ರಿಪೋರ್ಟ್‍ನಲ್ಲಿ ಅವರ ಚಾಟ್ಸ್ ಬಗ್ಗೆ ಉಲ್ಲೇಖ ಇದ್ದು, ರವಿ ಅವರು ಎಂದಾದರೂ ಎಲ್ಲೆ ಮೀರಿ ಮೆಸೇಜ್ ಮಾಡಿದ ತಕ್ಷಣವೇ ಅವರನ್ನು ಬ್ಲಾಕ್ ಮಾಡಬಹುದಿತ್ತು. ಆದರೆ ರೋಹಿಣಿ, ಡಿ.ಕೆ.ರವಿ ಅವರನ್ನು ಶಾಶ್ವತವಾಗ ಬ್ಲಾಕ್ ಮಾಡಲಿಲ್ಲ. ಬ್ಲಾಕ್ ಮಾಡದೆ ಇದ್ದದ್ದು ಉತ್ತೇಜನ ಕೊಡುವ ಹಾಗೆ ಎಂಬಂತೆಯೇ ಕಾಣುತ್ತದೆ ಎಂಬುದು ಅನೇಕರ ಅಭಿಪ್ರಾಯ’  

‘ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವರಿಗೆ ರೋಹಿಣಿ ಸಿಂಧೂರಿ ಕಳಿಸಬಾರದಂತಹ ಫೋಟೊಗಳನ್ನು ಕಳುಹಿಸಿದ್ದಾರೆ. ಅವುಗಳು ನನಗೆ ಸಿಕ್ಕಿವೆ. ಅವೆಲ್ಲವನ್ನು ಸರಕಾರಕ್ಕೆ ನೀಡಿದ್ದೇನೆ. ಒಂದಿಷ್ಟು ಮಾದರಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇನೆ. ಈ ಬಗ್ಗೆಸೂಕ್ತ ತನಿಖೆಯಾಗಲಿ’ ಎಂದು ರೂಪಾ ಒತ್ತಾಯಿಸಿದ್ದಾರೆ.

Tags: ಐಎಎಸ್‌ಐಪಿಎಸ್‌ಕುಸುಮಾಡಿಕೆ ರವಿಮೌದ್ಗಿಲ್ರೂಪಾರೋಹಿಣಿ ಸಿಂಧೂರಿ
Previous Post

ರೂಪಾ vs ರೋಹಿಣಿ: ʼಡಿಕೆ ರವಿಗೆ ಮಾನಸಿಕ ಅಸ್ವಸ್ಥತೆ ಇರಲಿಲ್ಲʼ ಎಂದ ಕುಸುಮಾ

Next Post

ರೋಹಿಣಿ ತಪ್ಪು ಮಾಡಿದಾಗ ತಪ್ಪಿಸಿಕೊಳ್ಳುತ್ತಾರೆ, ಅವರನ್ನು ಬಚಾವ್ ಮಾಡುವುದಕ್ಕೆ ಯಾರಿದ್ದಾರೆ? ರೂಪಾ ಪ್ರಶ್ನೆ

Related Posts

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
0

ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿರುವವರ ಪೈಕಿ ನಟ ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ಒಬ್ಬರು. ಅವರ ತಾಯಿ ಪುಷ್ಪ ಅರುಣ್ ಕುಮಾರ್ ತಮ್ಮದೇ ಪಿಎ...

Read moreDetails
ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

June 20, 2025

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

June 20, 2025
Next Post
ರೋಹಿಣಿ ತಪ್ಪು ಮಾಡಿದಾಗ ತಪ್ಪಿಸಿಕೊಳ್ಳುತ್ತಾರೆ, ಅವರನ್ನು ಬಚಾವ್ ಮಾಡುವುದಕ್ಕೆ ಯಾರಿದ್ದಾರೆ? ರೂಪಾ ಪ್ರಶ್ನೆ

ರೋಹಿಣಿ ತಪ್ಪು ಮಾಡಿದಾಗ ತಪ್ಪಿಸಿಕೊಳ್ಳುತ್ತಾರೆ, ಅವರನ್ನು ಬಚಾವ್ ಮಾಡುವುದಕ್ಕೆ ಯಾರಿದ್ದಾರೆ? ರೂಪಾ ಪ್ರಶ್ನೆ

Please login to join discussion

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 
Top Story

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

June 20, 2025
ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

ಯುವ ‘ಎಕ್ಕ’ ಪ್ರಚಾರಕ್ಕೆ ಕಿಕ್ ಸ್ಟಾರ್ಟ್…ಜುಲೈ 18ಕ್ಕೆ ಚಿತ್ರ ರಿಲೀಸ್

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada