• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮಧ್ಯಸ್ಥಿಕೆಗೆ ಒಪ್ಪದ ರೋಹಿಣಿ ಸಿಂಧೂರಿ.. ಸುಪ್ರೀಂಕೋರ್ಟ್​ ಗರಂ..

ಪ್ರತಿಧ್ವನಿ by ಪ್ರತಿಧ್ವನಿ
November 8, 2024
in Top Story, ಇತರೆ / Others
0
Share on WhatsAppShare on FacebookShare on Telegram

ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ರದ್ದು ಮಾಡುವಂತೆ IPS ಅಧಿಕಾರಿ ಡಿ ರೂಪ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ನಲ್ಲಿ ಹಿಂಪಡೆದಿದ್ದಾರೆ ಡಿ.ರೂಪ. ಮಾನನಷ್ಟ ಮೊಕದ್ದಮೆ‌ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಾಪಸ್​ ಪಡೆದಿದ್ದಾರೆ.

ADVERTISEMENT

ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ‌ ಜಾಲತಾಣದಲ್ಲಿ ಆರೋಪ ಮಾಡಿದ್ದ ಕಾರಣಕ್ಕೆ IPS ಅಧಿಕಾರಿ ಡಿ.ರೂಪ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಪ್ರಕರಣ ಇತ್ಯರ್ಥಕ್ಕೆ ಮಧ್ಯವರ್ತಿಗಳ ನೇಮಕಕ್ಕೆ‌ ಡಿ.ರೂಪ ಮನವಿ ಮಾಡಿದರು. ಆದರೆ ಮಧ್ಯಸ್ಥಿಗೆ ರೋಹಿಣಿ ಸಿಂಧೂರಿ ಒಪ್ಪದೆ, ಕೋರ್ಟ್​ನಲ್ಲಿಯೇ ತೀರ್ಮಾನವಾಗಲಿ ಎಂದು ಪಟ್ಟು ಹಿಡಿದಿದ್ದಾರೆ.

ಉನ್ನತ ಅಧಿಕಾರಿಗಳು ಹೀಗೆ ಕಿತ್ತಾಡುವುದು ಆರೋಗ್ಯಕರವಲ್ಲ ಎಂದು ಸುಪ್ರೀಂಕೋರ್ಟ್ ಕೂಡ ಗರಂ ಆಗಿದ್ದು, ಮಧ್ಯಸ್ಥಿಕೆ ಒಪ್ಪದೆ ಇದ್ರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಪ್ರಕರಣದ ಅರ್ಹತೆ ಮೇಲೆ‌ ನಾವು ನಿರ್ಧರಿಸಬೇಕಾಗುತ್ತೆ ಎಂದಿದೆ.

ಇಬ್ಬರೂ ನ್ಯಾಯಾಲಯದಲ್ಲಿದ್ದಾರೆ, ದಯವಿಟ್ಟು ಏನು ಮಾಡಬೇಕೆಂದು ಸೂಚನೆಗಳನ್ನು ತೆಗೆದುಕೊಳ್ಳಿ. ಅವರು ಪರಸ್ಪರ ಮುಖಾಮುಖಿಯಾಗಿ ಮಾತನಾಡಬಹುದೇ..? ಎಂದು ಇಬ್ಬರು ಅಧಿಕಾರಿಗಳ ವಕೀಲರನ್ನು ಕೇಳಿದ್ದಾರೆ ಸುಪ್ರೀಂಕೋರ್ಟ್ ನ್ಯಾಯಾಧೀಶರು.ಈ ವೇಳೆ ಮಾತನಾಡಲು ಒಪ್ಪಿದ ಐಪಿಎಸ್ ಡಿ.ರೂಪ.

ಈ ವೇಳೆ ಇಬ್ಬರಿಗೂ ಮಾತನಾಡಲು ಸಮಯ ನೀಡಿದ ಸುಪ್ರೀಂಕೋರ್ಟ್, ಕೆಲಕಾಲ ವಿಚಾರಣೆ ಮಂದೂಡಿತ್ತು, ಇಬ್ಬರು ಅಧಿಕಾರಿಗಳ ಮಾತುಕತೆ ಬಳಿಕ ಮತ್ತೆ ವಿಚಾರಣೆ ಆರಂಭಿಸಿದ ಕೋರ್ಟ್, ಮಾತುಕತೆ ವಿವರ ಕೇಳಿತು. ಈ ವೇಳೆ ಮಾತುಕತೆ ನಡೆಸಿದೆವು, ಆದರೆ ಮಾತುಕತೆ ವ್ಯರ್ಥವಾಯಿತು ಎಂದು ಡಿ ರೂಪ ಹೇಳಿದ್ದಾರೆ.

ಮಾತುಕತೆ ಯಾಕೆ ವ್ಯರ್ಥವಾಯಿತು ಏನು ಸಮಸ್ಯೆ‌ ಎಂದು ನ್ಯಾಯಾಧೀಶರು ಕೇಳಿದಾಗ, ನಾನು ಬೇಷರತ್ ಕ್ಷಮೆ‌ಯಾಚಿಸಬೇಕು ಎಂದು ಸಿಂಧೂರಿ ಕೇಳುತ್ತಿದ್ದಾರೆ. ಹೌದು, ನಾವು ಬೇಷರತ್ ಕ್ಷಮೆ ಕೇಳುವಂತೆ ಹೇಳುತ್ತಿದ್ದೇವೆ ಎಂದು ರೋಹಿಣಿ ಸಿಂಧೂರಿ ಪರ ವಕೀಲರು ಕೋರ್ಟ್​ಗೆ ತಿಳಿಸಿದ್ದಾರೆ. ಹಾಗಾದ್ರೆ ಕ್ಷಮೆ ಕೇಳಬಹುದಲ್ಲ, ಇದೆ ಸರಿಯಾದ ಮಾರ್ಗ ಎಂದಿದ್ದಾರೆ ನ್ಯಾಯಾಧೀಶರು.

ಆದರೆ ಬೇಷರತ್​ ಕ್ಷಮೆಯಾಚನೆಗೆ ಒಪ್ಪದ ಡಿ.ರೂಪ, ಪರಸ್ಪರ ಕ್ಷಮೆ‌ ಅಗತ್ಯವಿದೆ ಎಂದಿದ್ದಾರೆ. ಇಬ್ಬರು ಅಧಿಕಾರಿಗಳು ನ್ಯಾಯಾಧೀಶರ ಮನವಿಗೂ ಬಗ್ಗದೆ ಇದ್ದಾಗ ವಿಚಾರಣಾಧೀನ ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಅರ್ಜಿ ವಜಾಗೊಳ್ಳುವುದನ್ನು ತಪ್ಪಿಸಲು ಅರ್ಜಿ ಹಿಂಪಡೆದಿದ್ದಾರೆ ಡಿ ರೂಪ. ಒಟ್ಟಾರೆ ಸುಪ್ರೀಂಕೋರ್ಟ್​ನಲ್ಲಿ‌ ಐಪಿಎಸ್ ಅಧಿಕಾರಿ ಡಿ. ರೂಪಗೆ ಹಿನ್ನಡೆ ಆದಂತಾಗಿದೆ.

Tags: defamation case against Rohini Sinduri.Rohini Sindhuri did not agreeSupreme Court to cancelSupreme Court..
Previous Post

ಕಾಂಗ್ರೆಸ್​ ಗ್ಯಾರಂಟಿ ತೆಗೆಯಲು ನಾಲ್ಕು ಜನ್ಮ ಎತ್ತಿದರೂ ಆಗದು..!!

Next Post

ವಕ್ಫ್​ ವಿಚಾರ ಮುಚ್ಚಿಡಲು ಕಾಂಗ್ರೆಸ್​ ಯತ್ನ.. ತೇಜಸ್ವಿ ತಿರುಗೇಟು..

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
Next Post

ವಕ್ಫ್​ ವಿಚಾರ ಮುಚ್ಚಿಡಲು ಕಾಂಗ್ರೆಸ್​ ಯತ್ನ.. ತೇಜಸ್ವಿ ತಿರುಗೇಟು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada