• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಎಲ್ಲೆಮೀರಿ ಹಿಗ್ಗುತ್ತಿರುವ ಹಣದುಬ್ಬರ, ಏಪ್ರಿಲ್ ತಿಂಗಳಲ್ಲಿ ಶೇ.7.79ಕ್ಕೆ ಜಿಗಿತ

ಪ್ರತಿಧ್ವನಿ by ಪ್ರತಿಧ್ವನಿ
May 12, 2022
in ದೇಶ
0
ಎಲ್ಲೆಮೀರಿ ಹಿಗ್ಗುತ್ತಿರುವ ಹಣದುಬ್ಬರ, ಏಪ್ರಿಲ್ ತಿಂಗಳಲ್ಲಿ ಶೇ.7.79ಕ್ಕೆ ಜಿಗಿತ
Share on WhatsAppShare on FacebookShare on Telegram

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿಸಿದ್ದಕ್ಕಿಂತಲೂ ಚಿಲ್ಲರೆ ದರ ಹಣದುಬ್ಬರ (ಸಿಪಿಐ) ಜಿಗಿದಿದ್ದು, ಏಪ್ರಿಲ್ ತಿಂಗಳಲ್ಲಿ ಶೇ.7.79ಕ್ಕೇರಿದೆ. ಆರ್ಬಿಐ ಸೇರಿದಂತೆ ಮಾರುಕಟ್ಟೆ ತಜ್ಞರೆಲ್ಲರೂ ಶೇ.7.5ರಷ್ಟಾಗಬಹುದು ಎಂದು ಅಂದಾಜಿಸಿದ್ದರು. ಎಲ್ಲಾ ಅಂದಾಜುಗಳನ್ನು ತಲಕೆಳಗು ಮಾಡಿ ಹಣದುಬ್ಬರ ಉಬ್ಬಿದೆ. ಇದು ಏಪ್ರಿಲ್ 2014ರಿಂದೀಚೆಗೆ ಅತಿ ಗರಿಷ್ಠ ಹಣದುಬ್ಬರ.

ADVERTISEMENT

ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ತೀವ್ರವಾಗಿ ಏರಿರುವ ಕಾರಣ ಚಿಲ್ಲರೆದರ ಹಣದುಬ್ಬರವು ತೀವ್ರವಾಗಿ ಏರುತ್ತಿದೆ. ಖಾದ್ಯ ತೈಲ ಹಣದುಬ್ಬರ ಶೇ.17ರಷ್ಟು, ತರಕಾರಿಗಳ ಹಣದುಬ್ಬರ ಶೇ.15.41ರಷ್ಟು ಇಂಧನದ ಹಣದುಬ್ಬರ ಶೇ.10.80ರಷ್ಟು ಜಿಗಿದಿದೆ. ಬಟ್ಟೆ ಮತ್ತು ಪಾದರಕ್ಷೆಗಳ ಹಣದುಬ್ಬರ ಶೇ.9.88, ಆಹಾರ ಶೇ.8.38, ಇತರೆ ಸರಕುಗಳು ಶೇ.8.3ರಷ್ಟು ಜಿಗಿದಿವೆ.

ಏಪ್ರಿಲ್ ತಿಂಗಳಲ್ಲಿ 6.9ಕ್ಕೆ ಜಿಗಿದಿದ್ದ ಚಿಲ್ಲರೆದರ ಹಣದುಬ್ಬರವು ಆರ್ಬಿಐಗೆ ತಲೆನೋವಾಗಿ ಪರಿಣಮಿಸಿತ್ತು. ಹಣದುಬ್ಬರವನ್ನು ನಿಯಂತ್ರಿಸುವುದು ಆರ್ಬಿಐ ಜವಾಬ್ದಾರಿ. ಶೇ.6ರಷ್ಟು ಗರಿಷ್ಠ ಮಿತಿಯನ್ನು ಕಾಯ್ದುಕೊಳ್ಳಲೇಬೇಕು. ಆದರೆ, ಜನವರಿಯಿಂದ ಸತತವಾಗಿ ನಿಗದಿತ ಮಿತಿ ಮೀರಿ ಹಣದುಬ್ಬರ ಜಿಗಿದಿದೆ.

ಹಣದುಬ್ಬರ ತಗ್ಗಿಸುವ ಅಂತಿಮ ಪ್ರಯತ್ನವಾಗಿ ಆರ್ಬಿಐ ಮೇ 4ರಂದು ಬಡ್ಡಿದರವನ್ನು ಏರಿಸಿತ್ತು. ಮತ್ತಷ್ಟು ಬಡ್ಡಿದರ ಏರಿಸುವ ಮುನ್ಸೂಚನೆಯನ್ನೂ ನೀಡಿದೆ. ಜೂನ್ ಆರಂಭದಲ್ಲಿ ನಡೆಯುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಬಡ್ಡಿದರ ಪರಿಷ್ಕರಣೆ ಆಗಲಿದೆ.

ಹಣದುಬ್ಬರ ಏರಿಕೆಗೆ ಜಾಗತಿಕ ರಾಜಕೀಯ ಕ್ಷೋಭೆಯಿಂದಾಗಿ ಕಚ್ಚಾ ತೈಲ ಮಾರುಕಟ್ಟೆಯಲ್ಲಾಗಿರುವ ತೀವ್ರ ಏರಿಕೆ ಮತ್ತು ಅಸ್ಥಿರತೆ, ಜತೆಗೆ ದೇಶೀಯ ಮಾರುಕಟ್ಟೆಯಲ್ಲಾಗುತ್ತಿರುವ ದರ ಏರಿಕೆ ಕಾರಣವಾಗಿದೆ.

ಕೇಂದ್ರ ಸರ್ಕಾರವಂತೂ ಹಣದುಬ್ಬರ ನಿಯಂತ್ರಿಸುವ ಜವಾಬ್ದಾರಿ ಆರ್ಬಿಐನದು ಎಂದುಕೊಂಡು ವಿವಿಧ ಸರಕು ಮತ್ತು ಸೇವೆಗಳ ದರವನ್ನು ಏರಿಸುತ್ತಲೇ ಇದೆ. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿ ಖಾದ್ಯ ತೈಲ, ಆಹಾರಧಾನ್ಯ ಮತ್ತಿತರ ದರಗಳ ಏರಿಕೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

ಹಣದುಬ್ಬರ ಏರಿಕೆ ನಿಯಂತ್ರಿಸದ ಮಟ್ಟಕ್ಕೆ ಬಂದಿದೆ ಎಂಬ ಕಾರಣಕ್ಕೆ ಆರ್ಬಿಐ ಬಡ್ಡಿದರ ಏರಿಸಿದ್ದರೆ, ಕೇಂದ್ರ ಸರ್ಕಾರ ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಎಲ್ಪಿಜಿ ಸಿಲಿಂಡರ್ ದರವನ್ನು 50 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಸಿಲಿಂಡರ್ ದರ ಈಗ 1000 ರೂಪಾಯಿ ಗಡಿ ದಾಟಿದೆ. 2020ರಿಂದೀಚೆಗೆ ಶೇ.75ರಷ್ಟು ಏರಿಕೆಯಾಗಿದೆ.

ಪರಿಸ್ಥಿತಿ ಹೀಗೆ ಮುಂದುವರೆದರೆ, ಜೂನ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆಗೆ ಮುನ್ನವೇ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಹಣದುಬ್ಬರದ ನಿಯಂತ್ರಣಕ್ಕೆ ಬಡ್ಡಿದರ ಏರಿಸಿದ ನಂತರ ರೂಪಾಯಿ ಡಾಲರ್ ವಿರುದ್ಧ ಕುಸಿಯುತ್ತಲೇ ಇದೆ. ಸಾರ್ವಕಾಲಿಕ ಕನಿಷ್ಟಮಟ್ಟವಾದ 77.60ಕ್ಕೆ ಕುಸಿದಿದೆ.

ರೂಪಾಯಿ ಮೌಲ್ಯ ಕುಸಿತದ ಜತೆಗೆ ಷೇರು ಮಾರುಕಟ್ಟೆಯಲ್ಲೂ ರಕ್ತದೋಕುಳಿ ನಡೆಯುತ್ತಿದ್ದು, ಬಡ್ಡಿದರ ಏರಿಕೆ ಮಾಡಿದ ಎಂಟು ದಿನಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.8ರಷ್ಟು ಕುಸಿತ ದಾಖಲಿಸಿವೆ. ಬಹುತೇಕ ಷೇರುಗಳು ವರ್ಷದ ಕನಿಷ್ಠ ಮಟ್ಟ ಮುಟ್ಟಿವೆ. ಈ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆ ಹಿಂಪಡೆಯುತ್ತಿದ್ದು ಷೇರುಪೇಟೆ ಮತ್ತಷ್ಟು ಕುಸಿತ ದಾಖಲಿಸಲಿದೆ.

ಬಡ್ಡಿ ಏರಿಕೆಯಿಂದಾಗಿ ಬೇಡಿಕೆ ಕುಸಿಯಲಿದ್ದು, ಒಟ್ಟಾರೆ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿಹಣದುಬ್ಬರ
Previous Post

ನಕಲಿ ದಾಳಿ ನಡೆಸಿದ ನಾಲ್ವರು ಸಿಬಿಐ ಅಧಿಕಾರಿಗಳು ಅರೆಸ್ಟ್!‌

Next Post

ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ!

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ!

ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ!

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada