ದಾವಣಗೆರೆ : ನನ್ನ ಹಾಗೂ ನನ್ನ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಬೇಡ ಎಂದು ಮಾಜಿ ಶಾಸಕ ಎಂಪಿ ರೇಣುಕಾಚರ್ಯ ಹೇಳಿದ್ದಾರೆ. ದಾವಣಗೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರುಮ ನನ್ನ ಬದಲು ಫ್ರೀ ಯೋಜನೆ ರಾಜ್ಯದ ಬಡವರಿಗೆ ಸಿಗಲಿ ಎಂದಿದ್ದಾರೆ.
ಕಾಂಗ್ರೆಸ್ನವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಹಾಕೋದಿಲ್ಲ ಎಂದಿದ್ರು. ಆದರೆ ಇದೀಗ ಷರತ್ತು ವಿಧಿಸುತ್ತಿದ್ದಾರೆ, ಇದು ಸರಿಯಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಚುನಾವಣೆ ಮೊದಲು ಹೇಳಿದಂತೆ ಕಾಂಗ್ರೆಸ್ನವರು ನಡೆದುಕೊಳ್ಳಬೇಕು. ಷರತ್ತು ಹಾಕಿ ಯೋಜನೆಗಳನ್ನು ಜಾರಿಗೆ ತರಬೇಡಿ. ಸುಮ್ಮನೇ ಜನರ ಕಿವಿಗೆ ಹೂವು ಇಡಬೇಡಿ ಎಂದಿದ್ದಾರೆ.