![](https://pratidhvani.com/wp-content/uploads/2024/07/did-kannada-actor-darshan-attack-pavithra-gowda-over-renuka-swamy-murder-case-110905218-1.webp)
ಬೆಂಗಳೂರು: ಪಟ್ಟಣಗೆರೆ ಶೆಡ್ನಲ್ಲಿ ಚಿತ್ರದುರ್ದ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರೆತಂದು ಹತ್ಯೆಗೈದ ಆರೋಪಿಗಳ ಗ್ಯಾಂಗ್ ಕೃತ್ಯವನ್ನು ಮುಚ್ಚಿ ಹಾಕಲು ಕಾರಿನಲ್ಲಿ ಶವ ಸಾಗಿಸಿ ಸುಮನಹಳ್ಳಿ ಬ್ರಿಡ್ಜ್ ಬಳಿಯ ರಾಜಕಾಲುವೆಗೆ ಎಸೆದಿದ್ದರು. ಈಗ ತನಿಖೆ ನಡೆಸುತ್ತಿರುವ ವಿಶೇಷ ಪೋಲೀಸ್ ತನಿಖಾ ತಂಡ ಶವ ಎಸೆದ ಜಾಗ ಸೇರಿದಂತೆ ಶೆಡ್ ನಿಂದ ರಾಜಕಾಲುವೆ ವರೆಗೆ ಸಮಗ್ರ ಬ್ಲೂ ಪ್ರಿಂಟ್ ರಚಿಸಿಕೊಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಪೊಲೀಸರು ಮನವಿ ಮಾಡಿದ್ದಾರೆ.
![](https://pratidhvani.com/wp-content/uploads/2024/07/images-22.jpeg)
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳು ಬಳಸುತ್ತಿದ್ದ ಸಿಮ್ಗಳು ಬೇರೆಯವರ ಹೆಸರಿನಲ್ಲಿದ್ದು, ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮುಂದಾಗಿದ್ದಾರೆ.
ದರ್ಶನ್ ಉಪಯೋಗಿಸುತ್ತಿದ್ದ ಮೊಬೈಲ್ ಸಿಮ್ ಹೇಮಂತ್ ಹೆಸರಿನಲ್ಲಿದ್ದರೆ, ಪವಿತ್ರಾ ಬಳಸುತ್ತಿದ್ದ ಸಿಮ್ ಮನೋಜ್ ಎಂಬವರ ಹೆಸರಿನಲ್ಲಿದೆ. ನಂದೀಶ್, ಪ್ರದೂಷ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ನಾಯಕ್ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸಿ ಬಳಸುತ್ತಿದ್ದರು. ಸಿಮ್ ಹೆಸರಿನಲ್ಲಿರುವ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಪೊಲೀಸರು ನೋಟಿಸ್ ಜಾರಿ ಮಾಡಲಿದ್ದಾರೆ.
![](https://pratidhvani.com/wp-content/uploads/2024/07/images-23.jpeg)
ಕೃತ್ಯದ ಸಂದರ್ಭಗಳಲ್ಲಿ ದರ್ಶನ್ ಹಾಗೂ ಪವಿತ್ರಾ ಬಳಸಿದ್ದ ಮೊಬೈಲ್ ಫೋನ್ಗಳಲ್ಲಿರುವ ಡೇಟಾ ರಿಟ್ರೀವ್ ಮಾಡಲು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನಾ ಸ್ಥಳದಲ್ಲಿ ಸಿಕ್ಕಿರುವ ಬೆರಳಮುದ್ರೆಗಳಿಗೂ ಆರೋಪಿಗಳಿಂದ ಸಂಗ್ರಹಿಸಲಾಗಿರುವ ಫಿಂಗರ್ ಪ್ರಿಂಟ್ಗಳು ತಾಳೆಯಾಗುತ್ತದೆಯೇ ಎಂಬುದನ್ನು ಅರಿಯಲು ನಗರ ಫಿಂಗರ್ ಪ್ರಿಂಟ್ ವಿಭಾಗಕ್ಕೆ ಪೊಲೀಸರು ಪತ್ರ ಬರೆದಿದ್ದಾರೆ.