• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

IAS ಅಧಿಕಾರಿ ನೇಮಿಸುವ ಹುದ್ದೆಗೆ KAS ಅಧಿಕಾರಿಗಳ ನೇಮಕ..! ಇದು ಹೇಗೆ ಸಾಧ್ಯ..?

ಕೃಷ್ಣ ಮಣಿ by ಕೃಷ್ಣ ಮಣಿ
July 5, 2023
in ಅಂಕಣ, ಅಭಿಮತ
0
IAS ಅಧಿಕಾರಿ ನೇಮಿಸುವ ಹುದ್ದೆಗೆ KAS ಅಧಿಕಾರಿಗಳ ನೇಮಕ..! ಇದು ಹೇಗೆ ಸಾಧ್ಯ..?
Share on WhatsAppShare on FacebookShare on Telegram

ರಾಜ್ಯ ಸರ್ಕಾರದಲ್ಲಿ ಆಡಳಿತ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸೋದು ಅಧಿಕಾರಿ ವರ್ಗ ಎನ್ನಬಹುದು. ಇದೇ ಕಾರಣಕ್ಕೆ ಐಎಎಸ್‌ ಅಧಿಕಾರಿಗಳು ಹಾಗು ಕೆಎಎಸ್‌ ಅಧಿಕಾರಿಗಳು ಎಂದು ವರ್ಗೀಕರಿಸಲಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗುವ ಅಧಿಕಾರಿಗಳು, ಭಾರತೀಯ ನಾಗರಿಕ ಸೇವೆಗೆ ಬರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗುವ ಅಧಿಕಾರಿಗಳು ಕರ್ನಾಟಕ ಸೇವೆಗೆ ಆಯ್ಕೆಯಾಗುತ್ತಾರೆ. ಭಾರತೀಯ ಲೋಕಸೇವಾ ಆಯೋಗದಲ್ಲಿ ಬರುವ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಮುಖ ಸಂಸ್ಥೆಗಳ ನಿರ್ದೇಶಕರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಆಗುತ್ತಾರೆ. ಆದರೆ ಕರ್ನಾಟಕ ಸೇವೆಗೆ ಬರುವ ಅಧಿಕಾರಿಗಳು ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ IAS, IPS ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡುತ್ತಾರೆ. ಇದು ನಿಯಮ. ಕೆಲವೊಮ್ಮೆ ರಾಜ್ಯ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗುವ ಅಧಿಕಾರಿಗಳಿಗೆ ಪ್ರಮೋಷನ್‌‌ ಮೂಲಕ IAS, IPS ಗ್ರೇಡ್‌‌ ಕೊಡುವ ಅವಕಾಶವಿದೆ. ಆದರೆ ಕರ್ನಾಟಕದಲ್ಲಿ ಪ್ರಮೋಷನ್‌‌ ಕೊಡದೆಯೂ IAS ಅಧಿಕಾರಿಗಳಿಗೆ ನೀಡುವ ಪೋಸ್ಟ್‌ ನೀಡಲಾಗಿದೆ.

ADVERTISEMENT

ಚಿದಾನಂದ ಸದಾಶಿವಾ ವಟಾರೆಗೆ IAS ಸಮನಾದ ಹುದ್ದೆ..!

ಕಾಂಗ್ರೆಸ್‌ ಸರ್ಕಾರದಲ್ಲಿ ಜೂನ್‌ 30ರಂದು ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗದ ಸ್ಮಾರ್ಟ್‌ ಸಿಟಿ ಲಿಮಿಟೆಡ್‌‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಚಿದಾನಂದ ಸದಾಶಿವ ವಟಾರೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಆದರೆ ಈ ಹಿಂದೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದು, ಕೇವಲ ಐಎಎಸ್‌ ಅಧಿಕಾರಿಗಳು. ಆದರೆ ಇದೀಗ ಕೆಎಎಸ್‌ ಅಧಿಕಾರಿ ಆಗಿರುವ‌ ಚಿದಾನಂದ ಸದಾಶಿವ ವಟಾರೆ ಅವರನ್ನು ನೇಮಕ ಮಾಡಲಾಗಿದೆ. ಇದು ಯಾವ ಉದ್ದೇಶ ಅಥವಾ ಏನು ಕಾರಣ ಅನ್ನೋದು ಸ್ವತಃ ಅಧಿಕಾರಿಗಳ ವರ್ಗಕ್ಕೂ ತಿಳಿಯದ ನಿಗೂಢ ಆಗಿದೆ. ಕೆಎಎಸ್‌ ಅಧಿಕಾರಿಗಳನ್ನು ನೇಮಿಸುವುದಾಗಿದ್ದರೂ ಸಾಕಷ್ಟು ಅಧಿಕಾರಿಗಳು ಇದ್ದರೂ ಎನ್ನುವ ಮಾತು ಅಧಿಕಾರಿಗಳ ವರ್ಗದಲ್ಲಿ ಕೇಳಿ ಬರುತ್ತಿದೆ.
‌

ಈ ಹಿಂದೆ ಯಾವೆಲ್ಲಾ ಅಧಿಕಾರಿಗಳು ನೇಮಕ ಆಗಿದ್ದರು..?

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಹಿಂದೆ ಮಂಜುಶ್ರೀ IAS, ಲತಾ ಕುಮಾರಿ IAS, ನಾಗರಾಜ್ IAS, ಸೋಮಶೇಖರ್‌ IAS, ರಂಗಪ್ಪ IAS ಸೇರಿದಂತೆ ಸಾಕಷ್ಟು ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆದರೆ ಇದೀಗ ಕೆಎಎಸ್‌ ಅಧಿಕಾರಿ ಚಿದಾನಂದ ಸದಾಶಿವಾ ವಟಾರೆ ನೇಮಿಸಿದ ಉದ್ದೇಶ ಏನು ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದ ಅಸ್ತಿತ್ವಕ್ಕೆ ಬಂದ ಬಳಿಕ ವರ್ಗಾವಣೆ ವ್ಯವಹಾರ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿರುವ ಹೊತ್ತಿನಲ್ಲಿ ಉನ್ನತ ಮಟ್ಟದ ಹುದ್ದೆಗೆ ಐಎಎಸ್‌ ಅಧಿಕಾರಿ ನೇಮಿಸುವ ಬದಲು ಕೆಎಎಸ್‌‌ ಅಧಿಕಾರಿ ನೇಮಿಸಿದ್ದು, ಸಾಕಷ್ಟು ಅನುಮಾನಗಳಿಗೂ ಕಾರಣ ಆಗುತ್ತಿದೆ. ಇದಕ್ಕೆ ಕಾರಣ ಏನು ಅನ್ನೋದನ್ನು ಬಲ್ಲವರೇ ಹೇಳಬೇಕು. ಕೆಎಎಸ್‌‌ ಅಧಿಕಾರಿ ನೇಮಿಸುವುದಾದರೆ ಪ್ರಮೋಷನ್‌ ಆದರೂ ಕೊಡಬೇಕಿತ್ತು ಅಲ್ಲವೇ..?

ಕೃಷ್ಣಮಣಿ

Tags: CMSiddaramaiahCongress GovernmentDKShivakumarIASKASKAS officer
Previous Post

ಮಣಿಪುರದ ಹಿಂಸಾಚಾರ ಮತ್ತು ಬಿಜೆಪಿಯ ಹುನ್ನಾರಗಳು

Next Post

ಒಂದು ಕಾಲದಲ್ಲಿ ಬೇಡವಾದ ನಾಯಕ ಈಗ ಬೇಕಾಗಿದ್ದು ಹೇಗೆ..? ಕಾಲಾಯ ತಸ್ಮೈ ನಮಃ

Related Posts

ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ
ಅಂಕಣ

ಶಿಕ್ಷಣೋದ್ಯಮಕ್ಕೆ ಶಿಕ್ಷಣಾರ್ಥಿಗಳೇ ಸರಕುಗಳು- ನಾ ದಿವಾಕರ ಲೇಖನ

by ಪ್ರತಿಧ್ವನಿ
April 12, 2026
0

-ನಾ ದಿವಾಕರ ( PUC ರಿಸಲ್ಟ್ ಬಂದಿದೆ. ಹೆಚ್ಚಿನ ಮಾರ್ಕ್ಸ್ ತೆಗೆದುಕೊಂಡು ಪಾಸ್ ಆದ ವಿದ್ಯಾರ್ಥಿಗಳನ್ನ ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿ, ಆ ಮೂಲಕ ಫೇಲಾದವರ, ಕಡಿಮೆ...

Read moreDetails
ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ-ನಾ ದಿವಾಕರ ಲೇಖನ

April 10, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ಮಹತ್ಮಾ ಗಾಂಧಿ ನರೇಗಾ ಅಸ್ತಮಯ, ವಿಬಿಜಿ-ರಾಮ್ ಜಿ ಉದಯ: ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಉದ್ಯೋಗದ ಬಿಕ್ಕಟ್ಟು

ಮಹತ್ಮಾ ಗಾಂಧಿ ನರೇಗಾ ಅಸ್ತಮಯ, ವಿಬಿಜಿ-ರಾಮ್ ಜಿ ಉದಯ: ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಉದ್ಯೋಗದ ಬಿಕ್ಕಟ್ಟು

April 7, 2026
ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು- ಭಾಗ 4

ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು- ಭಾಗ 4

April 6, 2026
Next Post
ಹೊಸ ಶತ್ರುಗಳನ್ನು ಸೋಲಿಸಲು ಒಂದಾದ ಹಳೇ ಶತ್ರುಗಳು..!

ಒಂದು ಕಾಲದಲ್ಲಿ ಬೇಡವಾದ ನಾಯಕ ಈಗ ಬೇಕಾಗಿದ್ದು ಹೇಗೆ..? ಕಾಲಾಯ ತಸ್ಮೈ ನಮಃ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada