ಚಿತ್ರದುರ್ಗದಲ್ಲಿ (Chitradurga) ರಾತ್ರೋ ರಾತ್ರಿ ರಸ್ತೆ ಮಧ್ಯೆ ಕಿತ್ತೂರು ಚನ್ನಮ್ಮ (Kittur channamma) ಮೂರ್ತಿ ತಲೆ ಎತ್ತಿದೆ. ರಾತ್ರಿ ಕಳೆದು ಬೆಳಗಾಗೋದ್ರಲ್ಲಿ ಈ ಮೂರ್ತಿ ಪ್ರತಿಷ್ಠಾಪನೆ ಕಂಡು ಸ್ಥಳಿಯರಲ್ಲಿ ಅಚ್ಚರಿ ಮನೆ ಮಾಡಿದೆ.ಇದೆ ವೇಳೆ ಗ್ರಾಮಸ್ಥರಿಂದ ಚನ್ನಮ್ಮ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಕೆ ಮಾಡಲಾಗಿದೆ.
ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಕ್ರಾಸ್ (Jolly katte cross) ನಲ್ಲಿ ಈ ರೀತಿ ಪುತ್ಥಳಿ ಸ್ಥಾಪನೆ ಮಾಡಲಾಗಿದೆ. ಚಿತ್ರದುರ್ಗ-ಭೀಮಸಮುದ್ರ ರಸ್ತೆಯ ಜಾಲಿಕಟ್ಟೆ ಕ್ರಾಸ್ ಬಳಿ ರಾಣಿ ಚನ್ನಮ್ಮ ಪುತ್ಥಳಿ ಪ್ರತಿಷ್ಠಾಪಿಸಿ ಗ್ರಾಮಸ್ಥರ ಸಂಭ್ರಮಪಟ್ಟಿದ್ದಾರೆ.

ಈ ಚನ್ನಮ್ಮ ಮೂರ್ತಿಗೆ ಪುಟ್ಟ ಮಕ್ಕಳ ಆದಿಯಾಗಿ ಗ್ರಾಮಸ್ಥರಿಂದ ಕ್ಷೀರಾಭಿಶೇಕ ನೆರವೇರಿಸಲಾಗಿದೆ.ಚನ್ನಮ್ಮ ಹಣೆಗೆ ಕುಂಕುಮ ಬೊಟ್ಟು, ಕೆನ್ನೆಗೆ ಅರಿಷಿಣ ಹಚ್ಚಿ ಗ್ರಾಮಸ್ಥರಿಂದ ಸಂಭ್ರಮ ನಡೆದಿದ್ದು,ಜಾಲಿಕಟ್ಟೆ ಗ್ರಾಮದ ಯುವಕರಿಂದ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗಿದೆ.
ದೇಶಕ್ಕಾಗಿ ಹೋರಾಡಿದ ವೀರಾಗ್ರಣಿ ಕಿತ್ತೂರು ಚನ್ನಮ್ಮಾಜಿ ನಮ್ಮ ಹೆಮ್ಮೆ. ಬಹಳ ಹಿಂದಿನಿಂದ ಮೂರ್ತಿ ಸ್ಥಾಪಿಸಲು ಯೋಚನೆ ಇತ್ತು. ಸಧ್ಯ ಮೂರ್ತಿ ಸ್ಥಾಪಿಸಿದೆ, ಇದಕ್ಕೆ ಯಾರ ವಿರೋಧವೂ ಇಲ್ಲ ಅಂತ ಗ್ರಾಮಸ್ಥರು ಹೇಳಿದ್ದಾರೆ.