![](https://pratidhvani.com/wp-content/uploads/2024/06/FB_IMG_1717815492736.jpg)
ರಾಮೋಜಿ ಫಿಲ್ಮ್ ಸಿಟಿಯ ಸ್ಥಾಪಕ ರಾಮೋಜಿ ರಾವ್ ಇಂದು ನಿಧನರಾಗಿದ್ದಾರೆ. 87 ವರ್ಷ ವಯಸ್ಸಿನ ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಗ್ಗೆ ಉಸಿರು ನಿಲ್ಲಿಸಿದ್ದಾರೆ.
ಪತ್ರಕರ್ತರಾಗಿ, ಶಿಕ್ಷಣ ಕ್ಷೇತ್ರ, ನಿರ್ಮಾಪಕರಾಗಿ ರಾಮೋಜಿ ರಾವ್ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ನಿನಗಾಗಿ, ಚಿತ್ರಾ, ಆನಂದ, ಸವಾರಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.ಇವರ ಸಾವಿಗೆ ಅನೇಕರು ಕಂಬನಿ ಸುರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಮೋಜಿ ರಾವ್ ಅವರ ಭಾವಚಿತ್ರವನ್ನು ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.ವಯೋಸಹಜ ಕಾಯಿಕೆಯಿಂದ ಬಳಲುತ್ತಿದ್ದ ರಾಮೋಜಿರಾವ್ ಅವರನ್ನು ಹೈದರಾಬಾದ್ನ ನಾನಾಕರಮ್ಗುಡದಲ್ಲಿ ಇರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಜ್ಙ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ರಾಮೋಜಿರಾವ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ರಾಮೋಜಿರಾವ್ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಖ್ಯಾತ ಫಿಲ್ಮ್ ಸ್ಟುಡಿಯೋ ರಾಮೋಜಿ ಫಿಲ್ಮ್ ಸಿಟಿ ವಿಶ್ವದಲ್ಲೇ ಅತಿ ದೊಡ್ಡ ಫಿಲ್ಮ್ ಸಿಟಿ ಎಂದು ಹೆಸರಾಗಿದೆ. ಪ್ರತಿದಿನ ಸಾವಿರಾರು ಜನರು ರಾಮೋಜಿ ಫಿಲ್ಮ್ ಸಿಟಿ ನೋಡಲು ದೂರದಿಂದ ಬರುತ್ತಾರೆ. ಅನೇಕ ಸಿನಿಮಾಗಳು, ಧಾರಾವಾಹಿಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಬಾಹುಬಲಿ, ಚೆನ್ನೈ ಎಕ್ಸ್ಪ್ರೆಸ್, ಕೆಜಿಎಫ್, ದಿ ಡರ್ಟಿ ಪಿಕ್ಚರ್, ಹೆಬ್ಬುಲಿ, ಜಾಗ್ವಾರ್, ಕುರುಕ್ಷೇತ್ರ, ಮಗಧೀರ, ಪುಷ್ಪ, ಆರ್ಆರ್ಆರ್, ಪೊಗರು ಸೇರಿದಂತೆ ವಿವಿಧ ಭಾಷೆಗಳ ಅನೇಕ ಸಿನಿಮಾಗಳು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವಾಗಿದೆ.