ಬೆಂಗಳೂರು (bengaluru): ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ವಹಿಸಿದ್ರೆ ಸೂಕ್ತ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ಹೇಳಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯ ಬಿಜೆಪಿ ಘಟಕ ಈಗಾಗಲೇ ಎನ್ಐಎ ತನಿಖೆಗೆ ಒತ್ತಾಯಿಸಿದೆ. ಘಟನೆ ಬಗ್ಗೆ ಎನ್ಐಎ ತನಿಖೆ ಆಗಬೇಕು ಎಂದಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ನಡೆದಿರೋ ಘಟನೆ ದುರ್ದೈವದ ಸಂಗತಿ. ಮೂವರು ಗಾಯಾಳುಗಳ ಪರಿಸ್ಥಿತಿ ನೋಡಿದ್ವಿ. ಒಬ್ಬರಿಗೆ ಗಾಯ ಸ್ವಲ್ಪ ಜಾಸ್ತಿ ಆಗಿದೆ. ಆಪರಷೇನ್ ಮಾಡಲಾಗ್ತಿದೆ. ಇನ್ನಿಬ್ಬರಿಗೂ ಟ್ರೀಟ್ಮೆಂಟ್ ನಡೀತಿದೆ. ಅವರು ಔಟ್ ಆಫ್ ಡೇಂಜರ್ ಇದಾರೆ ಅಂತಾ ಡಾಕ್ಟರ್ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನೀತಿ, ನಿಯತ್ತಿನಿಂದ ಈ ರೀತಿಯ ಕೃತ್ಯಗಳಿಗೆ ಕುಮ್ಮಕ್ಕು ಸಿಗ್ತಿದೆ ಎಂದಿದ್ದಾರೆ.
ನಾಲ್ಕು ದಿನದ ಹಿಂದೆ ಪಾಕಿಸ್ತಾನ್ ಜಿಂದಾಬಾದ್ ಅಂತಾ ಹೇಳಿದಾಗ ಅದನ್ನ ಕಾಂಗ್ರೆಸ್ ವಿರೋಧಿಸಿಲ್ಲ. ಪರೋಕ್ಷವಾಗಿ ದುಷ್ಕರ್ಮಿಗಳಿಗೆ ಕುಮ್ಮಕ್ಕು ಕೊಡುವ ರೀತಿಯಲ್ಲೇ ಹೇಳಿಕೆ ಕೊಟ್ಟಿದ್ರು. ಈ ಹಿಂದೆ ಪಿಎಫ್ಐ ಮೇಲಿನ ಕೇಸ್ಗಳನ್ನೂ ವಾಪಸ್ ತೆಗೆದುಕೊಂಡ್ರು. ಇದು ತುಷ್ಟೀಕರಣ ರಾಜಕಾರಣ.. ಇದ್ರಿಂದಲೇ ಈ ರೀತಿ ಘಟನೆ ನಡೆದಿದೆ ನಾವು ತನಿಖೆಗೆ ಸಹಕಾರ ಕೊಡ್ತೀವಿ. ಎನ್ಐಎ ವಿಚಾರವಾಗಿ ನಾವು ಸಹಕಾರ ಕೊಡ್ತೀವಿ ಎಂದಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರೋದು ನಿಜ. ಹರಿಪ್ರಸಾದ್ ಅವರ ಹೇಳಿಕೆ ನೋಡಿದ್ರೆ ಇದೊಂದು ಕುಮ್ಮಕ್ಕು ಎನಿಸುತ್ತದೆ. ಮುಂಬೈ ಬ್ಲಾಸ್ಟ್, ಸ್ವಾಮಿ ನಾರಾಯಣ್, ದೆಹಲಿ ಘಟನೆಯಿಂದ ಪಾಕಿಸ್ತಾನ ನಮಗೆ ಶತ್ರು ರಾಷ್ಟ್ರ. ಇದೆಲ್ಲಾ ಗೊತ್ತಿದ್ರೂ ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಬಿಜೆಪಿಗೆ ಶತ್ರು ದೇಶ ಅಂತಾರೆ. ಹೀಗೆ ಹೇಳಿಕೆ ಕೊಡ್ತಿದ್ರೆ ಏನ್ ಅಂತಾರೆ.. ಇದೆಲ್ಲವೂ ಕುಮ್ಮಕ್ಕು ಕೊಡುವ ಹೇಳಿಕೆಗಳು ಎಂದು ಪ್ರಹ್ಲಾದ್ ಜೋಷಿ ಕಿಡಿಕಾರಿದ್ದಾರೆ.
#karnataka #bengaluru #rameshwaramcafeblast #cafeblast #bengalurublast #blast #Pralhadjoshi