ರಾಜ್ಯ ರಾಜಕಾರಣದಲ್ಲಿ ಪಕ್ಷಾತೀತವಾಗಿ ಚರ್ಚೆಗೆ ಗ್ರಾಸವಾದ ಪ್ರಕರಣ ಅಂದ್ರೆ ಅದು ಸಚಿವ ಹನಿ ಟ್ರ್ಯಾಪ್ ಪ್ರಕರಣ (Honey trap). ಹೌದು ಸಚಿವ ರಾಜಣ್ಣ (KN Rajanna) ವಿರುದ್ಧದ ಹನಿಟ್ರ್ಯಾಪ್ಗೆ ಯತ್ನಿಸಿದ ಕೇಸ್ಗೆ ಟ್ವಿಸ್ಟ್ ಸಿಕ್ಕಿದೆ.ಸಚಿವ ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಸಿಎಂಗೆ ಭೇಟಿಯಾಗಿ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.

ಈ ಬಳಿಕ ಮಾತನಾಡಿದ ರಾಜೇಂದ್ರ, ಹನಿಟ್ರ್ಯಾಪ್ ಯತ್ನ ಸಂಬಂಧ ಎಲ್ಲಾ ಸಾಕ್ಷ್ಯಗಳನ್ನು ಸಿಎಂಗೆ ನೀಡಿದ್ದೇನೆ. ನಾಳೆ ಅಥವಾ ನಾಡಿದ್ದು ಡಿಜಿ & ಐಜಿಪಿಗೆ ದೂರು ಸಲ್ಲಿಸುತ್ತೇವೆ ಎಂದಿದ್ದಾರೆ. ನನಗೆ ಹನಿಟ್ರ್ಯಾಪ್ ನಡೆಸಲು ಕಳೆದ 3 ತಿಂಗಳಿಂದ ಯತ್ನ ನಡೆಸಿದ್ದರು. ಹನಿಟ್ರ್ಯಾಪ್ ನಡೆಸಲು ನಮ್ಮ ಮಧುಗಿರಿ ನಿವಾಸಕ್ಕೂ ಬಂದಿದ್ದರು ಎಂದಿದ್ದಾರೆ.

ಅಲ್ಲಿ ಸಾಧ್ಯವಾಗದಿದ್ದಾಗ ತಮ್ಮ ಬೆಂಗಳೂರಿನ ಸರ್ಕಾರಿ ನಿವಾಸಕ್ಕೂ ಬಂದು ಹನಿಟ್ರ್ಯಾಪ್ಗೆ ಯತ್ನಿಸಿದ್ದಾರೆ.ಆದ್ರೆ ಯಾವ ಕಾರಣಕ್ಕಾಗಿ ನನಗೆ ಹನಿಟ್ರ್ಯಾಪ್ಗೆ ಯತ್ನಿಸಿದ್ದರೆಂದು ಗೊತ್ತಿಲ್ಲ, ಇವರು ಯಾರೆಂದು ಹೇಗೆ ಹೇಳೋದು? ಹೀಗಾಗಿ ತನಿಖೆಯಾಗಲಿ, ಆಗ ಎಲ್ಲ ಹೊರಬರುತ್ತೆ ಎಂದಿದ್ದಾರೆ.












