ಮಳೆಗಾದಲ್ಲಿ ನಮ್ಮ ಮೇಲೆ ನಾವು ಎಷ್ಟು ಕಾಳಜಿ ವಹಿಸಿದ್ರು ಅದೂ ಕಡಿಮೆ.ಸಾಕಷ್ಟು ಜನಕ್ಕೆ ಶೀತ ಕೆಮ್ಮು ಹಾಗೂ ಜ್ವರ ಬರುವಂತದ್ದು ಸಾಮನ್ಯ. ಇದರ ಜೊತೆಗೆ ಹೆಚ್ಚು ಜನಕ್ಕೆ ಕೆಸರು ಗುಳ್ಳೆಗಳಾಗುತ್ತವೆ.ಅದು ಕೂಡಾ ಕಾಲಿನ ಬೆರಳುಗಳ ಮಧ್ಯದಲ್ಲಿ..ಈ ಕೆಸರು ಗುಳ್ಳೆ ಆಗುವುದು ಹೆಚ್ಚು ನಾವೂ ನೀರಿನಲ್ಲಿದ್ದಾಗ,ಅಥವ ಗದ್ದೆಗಳಲ್ಲಿ ಕೆಲಸ ಮಾಡಿದಾಗ,ಅಥವ ಕೊಳಕು ನೀರಿನಲ್ಲಿ ಓಡಾಡಿದ್ರೆ. ಇನ್ನು ಈ ಗುಳ್ಳೆಗಳಾದಾಗ ನೋವು,ತುರಿಕೆ ಹಾಗೂ ಗುಳ್ಳೆಗಳಲ್ಲಿ ನೀರು ತುಂಬುವಂತ ಚಾನ್ಸಸ್ ಇರುತ್ತದೆ.. ಹೆಚ್ಚು ಜನ ಇದನ್ನು ಇಗ್ನೋರ್ ಮಾಡ್ತಾರೆ. ಆದ್ರೆ ಈ ಮನೆಮದ್ದುಗಳನ್ನ ಬಳಸಿದ್ರೆ ಕೆಸರುಗಜ್ಜಿ ತಕ್ಷಣಕ್ಕೆ ನಿವಾರಣೆಯಾಗುತ್ತದೆ..
ತೆಂಗಿನ ಚಿಪ್ಪು
ತೆಂಗಿನ ಕಾಯನ್ನು ಬಳಸಿದ, ಕಾಲಿ ಚಿಪ್ಪಿಗೆ ಬೆಂಕಿಯನ್ನು ಹಚ್ಚಿ ಒಂದು ಸ್ಟೀಲ್ ಪ್ಲೇಟ್ ಅಥವ ಒಂದು ಕಬ್ಬಿಣದ ಹಾಳೆಯ ಮೇಲೆ ಇಡಬೇಕು..ಆ ತೆಂಗಿನ ಚಿಪ್ಪು ಬೆಂಕಿಯಿಂದ ಜೋರಾಗಿ ಉರುತ್ತಿರುವಾಗ ಅದರಿಂದ ಒಂದು ಕಪ್ಪು ಬಣ್ಣದ ಎಣ್ಣೆ ಬರುತ್ತದೆ..ಆ ಎಣ್ಣೆಯನ್ನು ಕೆಸರು ಗುಳ್ಳೆ ಆದ ಜಾಗದಲ್ಲಿ ಹಚ್ಚಿ ಹಾಗೆ ಬಿಡಬೇಕು.ನಂತರ ಅದನ್ನು ಒಂದು ಬಟ್ಟೆಯಿಂದ ಒರೆಸ ಬೇಕು.ಈ ಎಣ್ಣೆಯನ್ನು ದಿನಕ್ಕೆ ಎರಡು ಬಾರಿ ಮಾಡುವುದರಿಂದ, ತುರಿಕೆ ಹಾಗೂ ನೋವು ಕಡಿಮೆಯಾಗುತ್ತದೆ ಗುಳ್ಳೆಗಳು ಶಮನವಾಗುತ್ತದೆ..
ಅಲೋವೆರ
ಸಾಕಷ್ಟು ಚರ್ಮದ ತೊಂದರೆಗಳನ್ನು ನಿವಾರಣೆ ಮಾಡುವಲ್ಲಿ ಅಲೋವೆರ ತುಂಬಾನೆ ಉಪಕಾರಿ. ಕಾಲಿನಲ್ಲಿ ಕೆಸರು ಗುಳ್ಳೆಗಳಾದಾಗ ಅಲೋವೆರವನ್ನು ಹಚ್ಚು ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ..ಇದರಿಂದ ತುರಿಕೆ ಕಡಿಮೆಯಾಗುತ್ತದೆ.ಹಾಗೂ ಗುಳ್ಳೆಗಳು ಕಡಿಮೆಯಾಗುತ್ತದೆ..
ಅಳಲೆ ಕಾಯಿ
ಅಳಲೆಕಾಯಿ ಸಾಕಷ್ಟು ಕಾಯಿಲೆಗಳಿಗೆ ರಾಮಭಾಣ. ಒಂದು ಕಪ್ ಕೊಬ್ಬರಿ ಎಣ್ಣೆಗೆ 3 ರಿಂದ 5 ಅಳಲೆಕಾಯಿ ಹಾಕಿ ಕಾಯಿ ಒಡೆಯುವ ತನಕ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ಕೆಸರುಗುಳ್ಳೆಗಳಾದ ಜಾಗದಲ್ಲಿ ಹಚ್ಚಿದ್ರೆ ಗುಳ್ಳೆಗಳು ತಕ್ಷಣಕ್ಕೆ ನಿವಾರಣೆಯಾಗುತ್ತದೆ..ಈ ಅಳಲೆಕಾಯಿಂದ ಹೊಟ್ಟೆನೋವು, ಚರ್ಮದ ಅಲರ್ಜಿಯಾಗಿ ತುರಿಕೆ, ನೋವು, ಊತ ಇದ್ದರೆ ಅಳಲೆಕಾಯಿಯನ್ನು ಬಿಸಿ ನೀರಲ್ಲಿ ತೇದು ಚರ್ಮಕ್ಕೆ ಹಚ್ಚಿದರೆ ಪ್ರಯೋಜನವಿದೆ.
ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಗೆ ಚಿಟಿಕಿಯಷ್ಟು ಅರಿಶಿಣವನ್ನು ಬೆರಸಿ ಚನ್ನಾಗಿ ಕುದಿಸಿ, ನಂತ್ರ ತಣ್ಣಗಾದಮೇಲೆ ಕೆಸರುಗುಳ್ಳೆಗಳಿಗೆ ಹಚ್ಚಿ. ಇದೂ ಕೂಡಾ ತುಂಬಾನೆ ಒಳ್ಳೆಯ ಮದ್ದು. ಚರ್ಮದಲ್ಲಿ ಯಾವುದಾದ್ರು ಅಲರ್ಜಿ ಆದಾಗ ಕೊಬ್ಬರಿ ಎಣ್ಣೆ ಉತ್ತಮ ಮದ್ದು..