• Home
  • About Us
  • ಕರ್ನಾಟಕ
Sunday, October 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಮಗನಂತಹ ತಮ್ಮನ ಅಗಲಿಕೆಯಲ್ಲೂ ಧೃತಿಗೆಡದೆ ಸಂಯಮ ತಂದುಕೊಂಡ ರಾಘಣ್ಣ.!

Any Mind by Any Mind
October 29, 2021
in ಕರ್ನಾಟಕ
0
ಮಗನಂತಹ ತಮ್ಮನ ಅಗಲಿಕೆಯಲ್ಲೂ ಧೃತಿಗೆಡದೆ ಸಂಯಮ ತಂದುಕೊಂಡ ರಾಘಣ್ಣ.!
Share on WhatsAppShare on FacebookShare on Telegram

ವರನಟ ರಾಜ್‌ಕುಮಾರ್‌ ಕಿರಿಯ ಪುತ್ರ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಗಣ್ಯರು, ಸಿನಿಮಾ ಬಳಗದವರು ಕಂಬನಿ ಮಿಡಿದಿದ್ದಾರೆ. ವಿಶ್ವಾದ್ಯಂತ ಇರುವ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ.

ADVERTISEMENT

ಮನೆಮಗನನ್ನು ಕಳೆದುಕೊಂಡಂತೆ ಪ್ರತಿ ಮನೆಯ ಅಮ್ಮಂದಿರು ಶೋಕದಲ್ಲಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಆಗಿದ್ದ ಪುನೀತ್‌ ರಾಜ್‌ಕುಮಾರ್‌ ಅವರ ನಿಧನ ಕನ್ನಡ ಚಿತ್ರರಂಗಕ್ಕೊಂದು ಬಹುದೊಡ್ಡ ಆಘಾತವೇ ಸರಿ.

ರಾಜ್ಯಕ್ಕೆ ರಾಜ್ಯವೇ ಶೋಕದಲ್ಲಿದ್ದರೂ, ಪುನೀತ್‌ ಎರಡನೆ ಅಣ್ಣ ರಾಘವೇಂದ್ರ ರಾಜ್‌ಕುಮಾರ್‌ ಅವರು ಧೃತಿಗೆಡದೆ ಮಾಧ್ಯಮದ ಮುಂದೆ ಮಾತನಾಡಿರುವ ಮಾತುಗಳು ದುಖದ ನಡುವೆಯೂ ಮೆಚ್ಚುಗೆಗೆ ಒಳಗಾಗಿದೆ. ದೊಡ್ಡಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನದಂತೆ ರಾಘಣ್ಣಾ ಮಾತಾಡಿದ್ದಾರೆ ಎಂದು ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ.

ಹೌದು, ರಾಜ್‌ಕುಮಾರ್‌ ಕುಟುಂಬದ ಕಡೆ ಕುಡಿ ಕುಟುಂಬದ ಎಲ್ಲರ ಮುದ್ದಿನ ಮಗನಾಗಿದ್ದದು ಸತ್ಯ. ರಾಘವೇಂದ್ರ ಹಾಗೂ ಶಿವರಾಜ್‌ಕುಮಾರ್‌ ಅವರು ಪುನೀತ್‌ ರನ್ನು ತಮ್ಮ ಸಹೋದರನಿಗಿಂತಲೂ ಮಗನಂತೆ ಕಂಡವರು. ಮಗನಂತಹ ತಮ್ಮನನ್ನು ಕಳೆದುಕೊಂಡೂ ರಾಘಣ್ಣಾ ಸಂಯಮದಿಂದ ವರ್ತಿಸುವಂತೆ ಕೋರಿಕೊಂಡ ಸಂದೇಶ ಎಲ್ಲರ ಕಣ್ಣಂಚಲ್ಲಿ ನೀರು ತರುವಂತೆ ಮಾಡಿದೆ.

ನಮ್ಮ ಅಪ್ಪಾಜಿಯವರನ್ನು ಕಳಿಸಿಕೊಡುವಾಗ ಸಾಕಷ್ಟು ತೊಂದರೆಯಾಗಿದೆ. ನಮ್ಮ ಕುಟುಂಬದಿಂದ ಇನ್ನೊಂದು ಆತ್ಮ ನೋವುಣ್ಣಬಾರದು. ದಯವಿಟ್ಟು ಅಪ್ಪುವನ್ನು ಚೆನ್ನಾಗಿ ಕಳಿಸಿಕೊಡಬೇಕು ಎಂದು ಅಭಿಮಾನಿಗಳ ಪ್ರೀತಿಯ ರಾಘಣ್ಣಾ ಮನವಿ ಮಾಡಿಕೊಂಡಿದ್ದಾರೆ.

ಅವನಿಗಿಂತ (ಪುನೀತ್‌) ಮೊದಲು ನಾನು ಹೋಗಬೇಕಾಗಿತ್ತು, ಅವನೇ ನನ್ನನ್ನು ಎರಡೆರಡು ಬಾರಿ ಆಸ್ಪತ್ರೆಗಳಿಂದ ಬಚಾವ್‌ ಮಾಡಿ ಕರೆ ತಂದಿದ್ದ. ಆದರೆ, ನನಗೆ ಅವನನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಸಾಧ್ಯವಾಗಲಿಲ್ಲ ಎಂದು ನಿರ್ಭಾವುಕರಾಗಿ ತಮ್ಮ ಅಸಹಾಯಕತೆ ತೋರಿಸಿಕೊಂಡರು.

ನನಗಿಂತ ಮೊದಲು ಅವನು ಹೋಗಿದ್ದಾನೆ, ಅಪ್ಪಾಜಿ ಹಾಗೂ ಅಮ್ಮನನ್ನು ನೋಡಿಕೊಳ್ಳಲು ನಾನು ಹೋಗುತ್ತೇನೆ, ನೀನು ನನ್ನ ಮಕ್ಕಳನ್ನು ನೋಡಿಕೊಂಡು ಇಲ್ಲೇ ಇರು ಎಂದು ಹೇಳಿ ಹೋಗಿದ್ದಾನೆ ಎಂದು ಹೇಳುವಾಗ ರಾಘವೇಂದ್ರ ಅವರ ನೋವು ಬಹಿರಂಗಪಡಿಸದಿದ್ದರೂ ಅವರಲ್ಲಿ ತುಂಬಿದ್ದ ಅಗಾಧ ನೋವು ಎದ್ದು ಕಾಣುತ್ತಿತ್ತು.

ತಮ್ಮನ ಮರಣದ ಸುದ್ದಿ ಆಘಾತದಂತೆ ಎರಗಿದರೂ, ಸಮಾಜಕ್ಕೆ ಏನೂ ತೊಂದರೆಯಾಗಕೂಡದು, ಅಭಿಮಾನಿಗಳು ಅತಿರೇಕದಿಂದ ವರ್ತಿಸಬಾರದು ಎಂದು ಸಂಯಮದಿಂದ ಬಂದು ಮಾತನಾಡಿದ ರಾಘವೇಂದ್ರ ಅವರ ಗಟ್ಟಿತನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ.

https://m.facebook.com/story.php?story_fbid=6347883795284064&id=100001875187700

Tags: ಪುನೀತ್‌ ರಾಜ್‌ ಕುಮಾರ್ಮರಣರಾಘವೇಂದ್ರ ರಾಜ್‌ ಕುಮಾರ್ರಾಜ್‌ ಕುಮಾರ್ವರನಟ
Previous Post

ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ನಿಧನ: ಬೆಂಗಳೂರಿನಲ್ಲಿ ಹೆಚ್ಚಿದ ಪೊಲೀಸ್‌ ಬಂದೋಬಸ್ತ್‌!

Next Post

ಅಪ್ಪನ ಹಾದಿಯಲ್ಲೇ ಸಾಗಿದ ಅಪ್ಪು; ಪುನೀತ್ ರಾಜ್‌ಕುಮಾರ್‌ರಿಂದ ನೇತ್ರದಾನ

Related Posts

Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
0

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ 78 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಅವರು...

Read moreDetails

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

October 11, 2025

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

October 11, 2025

150ಕೋಟಿ ಹಣ ಎಗುರಿಸಿದ ಸೈಬರ್‌ ವಂಚಕರ ಅರೆಸ್ಟ್..!!

October 11, 2025
Next Post
ಅಪ್ಪನ ಹಾದಿಯಲ್ಲೇ ಸಾಗಿದ ಅಪ್ಪು; ಪುನೀತ್ ರಾಜ್‌ಕುಮಾರ್‌ರಿಂದ ನೇತ್ರದಾನ

ಅಪ್ಪನ ಹಾದಿಯಲ್ಲೇ ಸಾಗಿದ ಅಪ್ಪು; ಪುನೀತ್ ರಾಜ್‌ಕುಮಾರ್‌ರಿಂದ ನೇತ್ರದಾನ

Please login to join discussion

Recent News

Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
Top Story

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!
Top Story

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

by ಪ್ರತಿಧ್ವನಿ
October 11, 2025
Top Story

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

by ಪ್ರತಿಧ್ವನಿ
October 11, 2025
Top Story

150ಕೋಟಿ ಹಣ ಎಗುರಿಸಿದ ಸೈಬರ್‌ ವಂಚಕರ ಅರೆಸ್ಟ್..!!

by ಪ್ರತಿಧ್ವನಿ
October 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

October 11, 2025

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada