ಇಂದು ರಾಜ್ಯ ಬಿಜೆಪಿ (Bjp) ವತಿಯಿಂದ ಪಕ್ಷದ ಕೋರ್ ಕಮಿಟಿ ಸಭೆ ನಡೆಸಲಾಗಿದ್ದು,ಬಿಜೆಪಿ ಬಣ ಬಡಿದಾಟದ ಬಗ್ಗೆ ಎರಡು ಬಣದ ವಿರುದ್ದ ಗರಂ ರಾಜ್ಯ ಬಿಜೆಪಿ ಉಸ್ತುವಾರಿ ಮೋಹನ್ ದಾಸ್ ಅಗರವಾಲ್ (Mohan Das agarwal) ಗರಂ ಆಗಿದ್ದಾರೆ.

ಈ ವೇಳೆ ವಿಜಯೇಂದ್ರ (Vijayendra) ಪರ ಬಣದ ಸದಸ್ಯರಿಗೆ, ಅಂದ್ರೆ ರೇಣುಕಾಚಾರ್ಯ (Renukacharya) ಟೀಮ್ ಗೆ ಮೋಹನ್ ದಾಸ್ ಅಗರವಾಲಾ ಛಾಟಿ ಬೀಸಿದ್ದಾರೆ. ಬಸನ ಗೌಡ ಪಾಟೀಲ್ ಯತ್ನಾಳ್ (Basanagowda patil yatnal) ಮತ್ತು ಅವರ ಬಣ ಮಾಡತ್ತಿರೋದು ತಪ್ಪು ಎಂದಾದರೆ, ನೀವು ಮಾಡ್ತಿರೋದು ಏನು ಎಂದು ರಾಧಾಮೋಹನ್ ದಾಸ್ ಗರಂ ಆಗಿದ್ದಾರೆ.
ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯ ಮತ್ತು ಪ್ರೀತಂ ಗೌಡ (Preetham gowda) ಮಾಡಿದ್ದು ಏನು ಎಂದು ರಾಧಾ ಮೋಹನ್ ದಾಸ್ ಅಗರವಾಲಾ ಗರಂ ಆಗಿ ಪ್ರಶ್ನಿಸಿದ್ದಾರೆ.

ಇದುವರೆಗೂ ಏನೇನು ನಡೆದಿದೆ, ಇದೀಗ ಏನು ನಡೆಯುತ್ತಿದೆ..ಎಲ್ಲಾವೂ ಸಹ ಹೈಕಮಾಂಡ್ ಗಮನಕ್ಕೆ ಇದೆ. ಎಲ್ಲಾವೂ ಸದ್ಯದಲ್ಲೇ ಸರಿ ಹೋಗುತ್ತೆ.ಈ ಗುಂಪುಗಾರಿಕೆ ಮೊದಲು ಬಿಡಿ ಎಂದು ರಾಧಾ ಮೋಹನ್ ದಾಸ್ ಅಗರವಾಲಾ ಎರಡೂ ಬಣಕ್ಕೂ ಎಚ್ಚರಿಕೆ ನೀಡಿದ್ದಾರೆ.





