ಕಳೆದ ತಿಂಗಳು ಅಕ್ಟೋಬರ್ 29ರಂದು ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ಸಾವಿಗೆ ತುತ್ತಾದರು . ಅಭಿಮಾನಿಗಳು, ರಾಜಕೀಯ ನಾಯಕರು ಅವriಗೆ ಮರಣೋತ್ತರ “ಕರ್ನಾಟಕ ರತ್ನ” ಮತ್ತು “ಪದ್ಮಶ್ರೀ” ಪ್ರಶಸ್ತಿ ಕೊಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದರು.
ಪದ್ಮಶ್ರೀ ಕೊಡಲು ಅದರದ್ದೆ ಆದ ಕ್ರಮವಿದೆ ಎಂದಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಮಂಗಳವಾರ ಫಿಲಂ ಚೇಂಬರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ಣಾಟಕ ರತ್ನ ನೀಡುವುದಾಗಿ ಘೋಷಣೆ ಮಾಡಿದ್ಧಾರೆ.

ಹೌದು, ಇಂದು ಮಂಗಳವಾರ ಫಿಲಂ ಚೇಂಬರ್ ಆಯೋಜಿಸಿದ್ದ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿರವರು ಪುನೀತ್ ರಾಜ್ ಕುಮಾರ ಅವರಿಗೆ ಕರ್ಣಾಟಕ ರತ್ನ ನೀಡುವುದಾಗಿ ಘೋಷನೆ ಮಾಡಿದ್ದಾರೆ. ಈಗೆ ಘೋಷಣೆ ಮಾಡಿದ ಕೂಡಲೇ ಅವರ ಅಭಿಮಾನಿಗಳು ಮತ್ತು ಸಹ ನಟರು ಎದ್ದು ನಿಂತು ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಾಚಾರಣೆ ಮಾಡಿದ್ದಾರೆ.