ಅಂದು ಬೆಟ್ಟದ ಹೂವಾಗಿ ಅರಳಿ ಮದ್ಯದಲ್ಲಿ ದೊಡ್ಡಮನೆ ಹುಡುಗನಾಗಿ ಚಿತ್ರರಂಗವನ್ನೂ ಅಳಿದ ಅರಸು ಇಂದು ನೆನಪು ಮಾತ್ರ. ಈ ಪವರ್ ನೆನಪು ಮಾಸದಿರಲಿ ಅಂತ ಇಡೀ ಕರ್ನಾಟಕ್ಕೆವೇ ಒಕ್ಕೂರಳಿನಿಂದ ಅಜಾತಶತ್ರು ಯುವರತ್ನನ್ನಿಗೆ ಮಾರೆಯಾದ ಕಾಣಿಕೆ ನೀಡೋದಕ್ಕೆ ಮುಂದಾಗಿದ್ದಾರೆ. ಇದಕ್ಕೆ ಹಲವು ಕನ್ನಡಪರ ಸಂಘಟನೆಗಳು ಹಾಗೂ ಪಕ್ಷಾತೀತವಾಗಿ ರಾಜಕೀಯ ಪಕ್ಷದ ನಾಯಕರು ಕೈಜೋಡಿಸಿದ್ದಾರೆ. ಹೌದು, ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ದಿವಂಗತ ಪುನೀತ್ ರಾಜ್ ಕುಮಾರ್ ಹೆಸರಿಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಬಹುಶಃ ಇಡೀ ಕರ್ನಾಟಕವೇ ಒಂದು ಕ್ಷಣಕ್ಕೆ ದಂಗಾಗಿ ಸುದ್ದಿ ಸುಳ್ಳಾಗಲಿ ಎಂದು ಬೇಡಿಕೊಂಡಿತ್ತು. ಆದರೆ ವಿಧಿಯ ಕೈವಾಡ, ಕರುನಾಡ ಅಪ್ಪುವನ್ನು ಬಿಗಿದಪ್ಪಿ ಕೊಂಡೊಯ್ದು ಬಿಟ್ಟಿತು. ಪುನೀತ್ ರಾಜ್ ಕುಮಾರ್ ದೊಡ್ಮನೆ ಹುಡುಗನಾದರೂ ಬೇರೆಲ್ಲಾ ಹುಡುಗರೊಂದಿಗೆ ಮೈತ್ರಿಯಿಂದ ಇರುತ್ತಿದ್ದರು. ಹೀಗಾಗೇ ಪಂಥ ಬೇಧವಿಲ್ಲದೆ ಪುನೀತ್ ರಾಜ್ ಕುಮಾರ್ ಎಂದರೆ ಎಲ್ಲರಿಗೂ ಅಕ್ಕರೆ. ಅಂಥಾ ನಟ ಕಲೆಗಾರನ ಹೆಸರು ಅಜರಾಮರವಾಗಿಸಲು ಜನರು ಒತ್ತಾಯಮಾಡುತ್ತಿದ್ದಾರೆ.
ತಂದೆಯ ನೆರಳಿನಲ್ಲಿ ಬೆಳೆದು, ತಂದೆ ತಾಯಿ ಹೆಸರನ್ನು ಮತ್ತಷ್ಟು ಬೆಳೆಸಿದ ಪುನೀತ್ ರಾಜ್ ಕುಮಾರ್ ಇಂದು ನೆನಪು ಮಾತ್ರ. ಅಪ್ಪು ಮಾಡಿರುವ ಸಮಾಜ ಸೇವೆಗಳಿಗೆ ಲೆಕ್ಕವೇ ಇಲ್ಲ. ನೂರಾರು ಅಂಧರಿಗೆ, ವೃದ್ಧರಿಗೆ, ಅನಾಥ ಮಕ್ಕಳ ಬಾಳಿಗೆ ಬೆಳಕಾಗಿದ್ದ ಅಪ್ಪು ನಮ್ಮನ್ನೆಲ್ಲಾ ಅಗಲಿ ಇಂದಿಗೆ 6 ದಿನ ಕಳೆದಿದೆ. ಆದರೆ ಅವರ ನೆನಪು ಮಾತ್ರ ಶಾಶ್ವತವಾಗಿ ಕನ್ನಡಿಗರ ಹೃದಯದಲ್ಲಿ ಉಳಿಯುತ್ತೆ. ಹೀಗೆ ಶಾಸ್ವತವಾಗಿ ದೊಡ್ಡಮನೆ ಹುಡುಗನ್ನ ಹೆಸರು ಚಿರಸ್ಥಾಯಿಯಾಗಿಸಲೂ ರಾಜ್ಯದ ಅರೂವರೆ ಕೋಟಿ ಕನ್ನಡಿಗರು ಒಂದಾಗಿ ಸರ್ಕಾರಕ್ಕೆ ಮಾನವಿ ಮಾಡುತ್ತಿದೆ. ಕನ್ನಡದ ನೆಲ, ಜಲ, ಭಾಷೆಗಾಗಿ ಹೊರಾಟ ನಡೆಸಿ, ಚಿಕ್ಕ ವಯಸ್ಸಿನಲ್ಲೇ ಕೋಟ್ಯಾಂತರ ಕನ್ನಡಿಗರ ಮನ ಗೆದ್ದ ಅಭಿಯಾ ನೆನಪಿಗೆ ನಗರದ ಪ್ರತಿಷ್ಟಿತ ರಸ್ತೆಗಳಲ್ಲಿ ಒಂದಾದ ವೆಸ್ಟ್ ಅಫ್ ಕಾರ್ಡ್ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರು ಇಡುವಂತೆ ಅಭಿಯಾನ ಶುರುವಾಗಿದೆ. ಇದಕ್ಕೆ ಪಕ್ಷಾತೀತವಾಗಿ ರಾಜಕೀಯ ಮುಖಂಡರುಗಳು ಸಹ ಅಭಿಮತ ವ್ಯಾಕ್ತಪಡಿಸಿ, ಬಿಬಿಎಂಪಿಯ ಅಡಳಿತಾಧಿಕಾರಿಗೆ ಮನವಿ ಮಾಡಿದ್ದಾರೆ.
![](https://pratidhvani.com/wp-content/uploads/2021/11/121266284_puneeth_rajkumar_alamy.jpg)
ಪವರ್ ಸ್ಟಾರ್ ಪುನೀತ್ ಹೆಸರು ಶಾಶ್ವತವಾಗಿ ಉಳಿಸಲು ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕಾರಣ ಮಾಡಬೇಕು. ಅವರು ಸಾವನ್ನಪ್ಪಿದಾಗ ಸೇರಿದ ಜನಸ್ಥೋಮ ನೋಡಿದರೆ ಗೊತ್ತಾಗುತ್ತೆ. ಸಣ್ಣ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ಯುವರತ್ನನಿಗೆ ಈ ಕೂಡಲೇ ಬಿಬಿಎಂಪಿ ಈ ರಸ್ತೆಗೆ ನಾಮಕರಣ ಮಾಡಿ ಗೌರವ ಸೂಚಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಪಾಲಿಕೆಗೆ ಒತ್ತಾಯಿಸಿದೆ.
ಒಟ್ಟಾರೆಯಾಗಿ ಅಕಾಲಿಕವಾಗಿ ಅಗಲಿದ ಕನ್ನಡಿಗರ ಅಪ್ಪು ಇನ್ನಿಲ್ಲ ಎನ್ನುವುದೇ ಮನಕಲಕಿದ ಸಂಗತಿ. ನಟ ಸಾರ್ವಭೌಮ ಡಾ. ರಾಜ್ ಕುಮಾರ್ ರ ಕೊನೆಯ ಮಗನಾಗಿದ್ದ ಪುನೀತ್ ಇನ್ನೂ ಬಾಳುವುದಿತ್ತು. ಹಲವರ ಬಾಳು ಬೆಳಗುವುದಿತ್ತು. ಹೀಗಾಗಿ ಅಂಥಾ ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಗರದ ಎಂಟು ಕಿಲೋಮೀಟರ್ ಉದ್ದದ ವೆಸ್ಟ್ ಆಫ್ ಕಾರ್ಡ್ ರಸ್ತೆಗೆ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡಲು ಸಂಘಟನೆಗಳು ಮತ್ತು ಜನರು ಆಗ್ರಹಿಸುತ್ತಿದ್ದಾರೆ.
![](https://pratidhvani.com/wp-content/uploads/2021/11/WhatsApp-Image-2021-11-02-at-8.36.02-PM-877x1024.jpeg)