ನವದೆಹಲಿ:ದೆಹಲಿ ಬಿಜೆಪಿಯ BJP’s ಸಿಖ್ ಸೆಲ್ ಸದಸ್ಯರು ಬುಧವಾರ ಇಲ್ಲಿಯ ಅವರ 10 ಜನಪಥ್ ನಿವಾಸದ ಬಳಿ ರಾಹುಲ್ ಗಾಂಧಿ Rahul Gandhi ವಿರುದ್ಧ ಪ್ರತಿಭಟನೆ ನಡೆಸಿದರು, ಸಮುದಾಯಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಮಾಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಘೋಷಣೆಗಳನ್ನು ಕೂಗಿ ಮತ್ತು ಫಲಕಗಳನ್ನು ಹಿಡಿದು, ಮಹಿಳೆಯರು ಸೇರಿದಂತೆ ಪ್ರತಿಭಟನಾಕಾರರು ವಿಜ್ಞಾನ ಭವನದಿಂದ ಗಾಂಧಿ ನಿವಾಸದ ಬಳಿಗೆ ಹೋಗಲು ಪ್ರಯತ್ನಿಸಿದರು, ಆದರೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು.
ಸೋಮವಾರ ವಾಷಿಂಗ್ಟನ್ ಡಿಸಿಯಲ್ಲಿ ನೂರಾರು ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) RSS ಕೆಲವು ಧರ್ಮಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಇತರರಿಗಿಂತ ಕೀಳಾಗಿ ಪರಿಗಣಿಸುತ್ತಿದೆ ಎಂದು ಆರೋಪಿಸಿದರು ಮತ್ತು ಭಾರತದಲ್ಲಿ ಹೋರಾಟವು ರಾಜಕೀಯದ ಬಗ್ಗೆ ಅಲ್ಲ ಎಂದು ಹೇಳಿದರು. ಸಭೆಯಲ್ಲಿ ಪೇಟ ಧರಿಸಿದ ವ್ಯಕ್ತಿಯ ಹೆಸರನ್ನು ಕೇಳಿದ ಗಾಂಧಿ, “ಈ ಹೋರಾಟವು ಭಾರತದಲ್ಲಿ ಸಿಖ್ಗೆ ತನ್ನ ಪೇಟವನ್ನು ಧರಿಸಲು ಅವಕಾಶ ನೀಡುವುದೇ ಅಥವಾ ಭಾರತದಲ್ಲಿ ಕಡವನ್ನು ಧರಿಸಲು ಅನುಮತಿಸುವುದೇ ಎಂಬುದಾಗಿದೆ. ಅಥವಾ ಅವನು ಸಿಖ್ ಆಗಿ, ಗುರುದ್ವಾರಕ್ಕೆ ಹೋಗಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದ್ದರು.
ಪ್ರತಿಭಟನಕಾರರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ವಿರುದ್ಧ ಘೋಷಣೆಗಳನ್ನು ಎತ್ತಿದರು, ಸಿಖ್ಖರನ್ನು “ಅವಮಾನಿಸಿದಕ್ಕೆ ” ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಮತ್ತು ದೇಶದಲ್ಲಿ 1984 ರ ಸಿಖ್ ವಿರೋಧಿ ದಂಗೆಗಳಿಗೆ ಕಾಂಗ್ರೆಸ್ ಅನ್ನು ಹೊಣೆ ಎಂದರು. ಗಾಂಧಿಯವರು ತಮ್ಮ ಹೇಳಿಕೆಯ ಮೂಲಕ ಸಿಖ್ಖರನ್ನು ಅವಮಾನಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ವಕ್ತಾರ ಆರ್ ಪಿ ಸಿಂಗ್ ಆರೋಪಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಸಿಖ್ ಸಮುದಾಯವು ಪ್ರಗತಿಯನ್ನು ಕಾಣುತ್ತಿದೆ ಮತ್ತು ಸಮುದಾಯದ ಸದಸ್ಯರು ಭಾರತದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತಾರೆ. 1984 ರಲ್ಲಿ ಸಿಖ್ಖರನ್ನು ಹೊಡೆದು ಕೊಂದಿದ್ದ ಹತ್ಯಾಕಾಂಡವು ಕಾಂಗ್ರೆಸ್ ಆಡಳಿತದಲ್ಲಿ ಸಂಭವಿಸಿದೆ” ಎಂದು ಅವರು ಹೇಳಿದರು.
ದೆಹಲಿಯ ಬಿಜೆಪಿಯ ಸಿಖ್ ಸೆಲ್ ಸಂಚಾಲಕ ಚರಣ್ಜೀತ್ ಸಿಂಗ್ ಲವ್ಲಿ, “ಭಾರತದಲ್ಲಿ ಸಿಖ್ ಪೇಟಗಳು ಸುರಕ್ಷಿತವಲ್ಲ ಮತ್ತು ಸಿಖ್ಖರಿಗೆ ಧಾರ್ಮಿಕ ಸ್ವಾತಂತ್ರ್ಯದ ಕೊರತೆಯಿದೆ ಎಂದು ಹೇಳುವ ಅವರ ಹೇಳಿಕೆಯಿಂದ ಗಾಂಧಿಯವರ ಸಣ್ಣ ಬುದ್ದಿ ಬಹಿರಂಗವಾಗಿದೆ ” ಎಂದು ಹೇಳಿದರು. “ಕಾಂಗ್ರೆಸ್ ಐತಿಹಾಸಿಕವಾಗಿ ಸಿಖ್ಖರಿಗೆ ಹೆಚ್ಚು ಹಾನಿ ಮಾಡಿದ ರಾಜಕೀಯ ಪಕ್ಷವಾಗಿದೆ” ಎಂದು ಅವರು 1984 ರ ಗಲಭೆಗಳನ್ನು ಉಲ್ಲೇಖಿಸಿದರು. ದೆಹಲಿ ಬಿಜೆಪಿಯ ಸಿಖ್ ಸೆಲ್ ಉಸ್ತುವಾರಿ ತರ್ವಿಂದರ್ ಮರ್ವಾಹ್, ಗಾಂಧಿ ಅವರು ತಮ್ಮ ಕುಟುಂಬದ ಇತಿಹಾಸವನ್ನು ಕಲಿಯಬೇಕು ಮತ್ತು ಅವರ ಅಜ್ಜಿ ಮತ್ತು ತಂದೆಯಿಂದ ಸಿಖ್ಖರ ಮೇಲೆ ಮಾಡಿದ ದೌರ್ಜನ್ಯವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದರು. ಸಿಖ್ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದಷ್ಟು ಅನ್ಯಾಯ ಬೇರೆ ಯಾವ ರಾಜಕೀಯ ಪಕ್ಷವೂ ಮಾಡಿಲ್ಲ ಎಂದರು.