
ಗುತ್ತಿಗೆದಾರರ ಬಳಿಕ ಇದೀಗ ಕಿಯೋನಿಕ್ಸ್ ವೆಂಡರ್ಸ್ ಸರದಿ ವ್ಯಕ್ತವಾಗಿದೆ. ದಯಾಮರಣ ಕೋರಿ ಪತ್ರ ಬರೆದ ಕಿಯೋ ನಿಕ್ಸ್ ವೆಂಡರ್ಸ್ ಅಸೋಸಿಯೇಷನ್. ಬಾಕಿ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಸುಮಾರು 350 ಕೋಟಿ ಬಾಕಿ ಉಳಿಸಿಕೊಂಡಿರುವ ಕಿಯೋನಿಕ್ಸ್. ಕಳೆದ ಒಂದು ವರ್ಷದಿಂದ ಸರ್ಕಾರಕ್ಕೆ ಮನವಿ ಮಾಡಿರುವ ಕಿಯೋನಿಕ್ಸ್ ವೆಂಡರ್ಸ್. ಕಳೆದ ವರ್ಷ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಿದ್ದರು. ಸಾಕಷ್ಟು ವೆಂಡರ್ಸ್ಗಳು ಸಂಕಷ್ಟದಲ್ಲಿದ್ದಾರೆ. ಇದನ್ನೇ ನಂಬಿರುವ ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಎಷ್ಟೇ ಮನವಿ ಕೊಟ್ರು ಸಚಿವರು ನಮ್ಮ ಬೇಡಿಕೆ ಈಡೇರುಸುತ್ತಿಲ್ಲ. ನಾವು ಕಷ್ಟದಲ್ಲಿದ್ದೇವೆ ಎಂದಿದ್ದಾರೆ. ಯಾರು ಅಕ್ರಮ ಮಾಡಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಅದನ್ನ ಬಿಟ್ಟು ನಮ್ಮ ಬಿಲ್ಗಳನ್ನ ಬಾಕಿ ಉಳಿಸಿಕೊಂಡಿರೋದು ಸರಿಯಲ್ಲ. ಹೀಗಾಗಿ ನಾವು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ ಎಂದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ್ ಬಂಗೇರಾ ಮಾಹಿತಿ ನೀಡಿದ್ದಾರೆರ.
ದಯಾಮರಣಕ್ಕೆ ಕೋರಿ ಪತ್ರ ಬರೆದ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಶನ್, ಸಚಿವ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ವಿರುದ್ದ ಮತ್ತೊಂದು ಆರೋಪ ಮಾಡಿದ್ದಾರೆ. ವೆಂಡರ್ಗಳು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಪ್ರಿಯಾಂಕ್ ಖರ್ಗೆ ಸೇರಿ ನಾಲ್ವರು ಹೊಣೆ ಎಂದು ಪತ್ರ ಬರೆಯಲಾಗಿದೆ. ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಕೋರಿದ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್, ವೆಂಡರ್ಸ್ಗಳ ಬಾಕಿ ಬಿಲ್ ಪಾವತಿ ಮಾಡುತ್ತಿಲ್ಲ. ಒಂದು ವರ್ಷದಿಂದ ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ.
400 – 500 ವೆಂಡರ್ಸ್ಗಳಿಗೆ ಬಿಲ್ ಪಾವತಿ ಬಾಕಿ ಇಡಲಾಗಿದೆ. ನಮ್ಮ ಕಷ್ಟವನ್ನು ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಆಲಿಸುತ್ತಿಲ್ಲ. ಯಾರಾದರೂ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ನಾಲ್ವರು ಕಾರಣ. ಅದರಲ್ಲಿ ಒಬ್ಬರು ಪ್ರಿಯಾಂಕ್ ಖರ್ಗೆ, 2ನೇಯವರು ಶಾಸಕರೂ ಕಿಯೋನಿಕ್ಸ್ ಅಧ್ಯಕ್ಷರೂ ಆದ ಶರತ್ ಬಚ್ಚೇಗೌಡ,
ಕಿಯೋನಿಕ್ಸ್ ಸಿಇಓ ಪವನ್ ಕುಮಾರ್, ಕಿಯೋನಿಕ್ಸ್ ಹಣಕಾಸು ವಿಭಾಗದ ನಿಶ್ಚಿತ್ ಎಂದು ಪ್ಗರತ್ರದಲ್ಲಿ ದೂರಿದ್ದಾರೆ. ಬಾಕಿ ಪಾವತಿ ಮಾಡದಿದ್ರೆ ಸಾವಿರಾರು ಮಂದಿ ವೆಂಡರ್ಸ್ಗಳಿಗೆ ದಯಾಮರಣ ನೀಡಿ ಎಂದು ಪತ್ರ ಬರೆದಿದ್ದಾರೆ.



