ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವ ಬಿವೈ ವಿಜಯೇಂದ್ರ (BY Vijayendra) ಹೇಳಿಕೆಗೆ ಸಚಿವ ಪ್ರೀಯಾಂಕ್ ಖರ್ಗೆ (Priyank kharge) ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ದಿವಾಳಿಯಾಗಿರುವುದು ಸರ್ಕಾರ ಅಲ್ಲ , ಸ್ವತಃ ವಿಜಯೇಂದ್ರ (Vijayendra) ದಿವಾಳಿಯಾಗಿದ್ದಾರೆ.ಮೊದಲು ಅವರು ತಮ್ಮ ಪಕ್ಷದ ದಿವಾಳಿತನದ ಬಗ್ಗೆ ಮಾತನಾಡಲಿ ಎಂದು ಟೀಕಿಸಿದ್ದಾರೆ.

ಪ್ರತಿನಿತ್ಯ ಪಾಪರ್ ಸರ್ಕಾರ ಅಂತ ಸುಮ್ಮನೇ ಟಿಕಿಸೋದಲ್ಲ. ಮುಂದಿನ ಶನಿವಾರ ಕಲ್ಯಾಣ ಕರ್ನಾಟಕದಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದ ಕಲ್ಯಾಣ ಪಥ ಉದ್ಘಾಟನೆ ಮಾಡ್ತಿದ್ದೇವೆ.ಅವರಿಗೂ ಕರೆಯುತ್ತೇವೆ ಬರಲಿ, ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಪಾಪರ್ ಸರ್ಕಾರ, ಆ ಸರ್ಕಾರ, ಈ ಸರ್ಕಾರ ಅಂತ ಸುಮ್ಮನೇ ಟೀಕಿಸೋದಲ್ಲ. ಮೊದಲು ಅಂಕಿ ಅಂಶ ತೋರಿಸಿ ವಿಜಯೇಂದ್ರ ಮಾತನಾಡಲಿ.ಸಾಲ ಮಾಡಿ ತುಪ್ಪ ತಿಂದಿರೋರು ಅವರು.ಅವರ ಸಾಲದ ಬಡ್ಡಿ ಕಟ್ಟುತ್ತಿರೋರು ನಾವು ಎಂದಿದ್ದಾರೆ.