ಲೋಕಸಭಾ ಚುನಾವಣಾ Loksabha ಅಖಾಡ ದೇಶದಲ್ಲಿ ರಂಗು ಪಡೆದುಕೊಂಡಿದೆ. ಮೇ 7ರಂದು ಮೂರನೇ ಹಂತದ ಚುನಾವಣೆಗೆ ಇಡೀ ದೇಶವೇ ತಯಾರಾಗುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳಲ್ಲಿ ಸಂದರ್ಶನಗಳು ಪ್ರಸಾರ ಆಗುತ್ತಿವೆ. ಕರ್ನಾಟಕದಲ್ಲಿ ಏಷ್ಯಾ ನೆಟ್ ಸುವರ್ಣ ನ್ಯೂಸ್ Suvarna News, ವಿಜಯವಾಣಿ Vijayavani, ನ್ಯೂಸ್18 ಕನ್ನಡ News18 Kannadaದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂರ್ದಶನ ಪ್ರಸಾರ ಆಗಿದೆ. ಕಳೆದ ಎರಡು ಅವಧಿಯಲ್ಲಿ ಪ್ರಧಾನಿ ಆಗಿರುವ ಮೋದಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಯಾವುದೇ ಪ್ರಕರಣಗಳು ಇಲ್ಲದಿರುವಾಗ, ಈ ಬಾರಿ ಸಂದರ್ಶನ ನೀಡುತ್ತಿರುವ ಉದ್ದೇಶ ಆದರೂ ಏನು..? ಎನ್ನುವುದು ಸಾಕಷ್ಟು ಜನರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಮಾಧ್ಯಮಗಳನ್ನು ಎದುರಿಸಲಾಗದ ಪ್ರಧಾನಿ ಕಳಂಕ..!
ಪ್ರಧಾನಿ ನರೇಂದ್ರ ಮೋದಿ ಕಳೆದ ಎರಡು ಅವಧಿಗೆ ಪ್ರಧಾನಿ ಆಗಿದ್ದರೂ ಮಾಧ್ಯಮಗಳ ಎದುರು ಬಂದು ಸುದ್ಧಿಗೋಷ್ಟಿ ನಡೆಸಿಲ್ಲ, ಮಾಧ್ಯಮಗಳ ಪ್ರಶ್ನೆಗೆ ಉತ್ತರ ಕೊಡುವ ಧೈರ್ಯವಿಲ್ಲ ಎಂದು ವಿರೋಧ ಪಕ್ಷಗಳು Opposition Parties ಟೀಕೆ ಮಾಡಿದ್ದವು. ಈ ಟೀಕೆಯಿಂದ ಹೊರ ಬರಲು ಪ್ರಧಾನಿ ಮೋದಿ ಸಂದರ್ಶನ ನೀಡುತ್ತಿದ್ದಾರೆ. ಸಾಕಷ್ಟು ವಿಚಾರಗಳ ಬಗ್ಗೆ ಮೋದಿ ಮಾಧ್ಯಮಗಳ ಮೂಲಕ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಸಂದರ್ಶನ ನೋಡಿದಾಗ ಇದು ಸಾಮಾನ್ಯ ರೀತಿಯಲ್ಲಿ ನಡೆದಿರುವ ಸಂದರ್ಶನವೇ ಅನ್ನೋ ಅನುಮಾನ ಕೂಡ ಸಾಮಾನ್ಯ ಜನರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರವನ್ನು ನಿಮ್ಮ Pratidvani ಬಯಲು ಮಾಡುತ್ತಿದೆ.
ಮೋದಿ ಸಂದರ್ಶನದಲ್ಲಿ ನಡೆಯುವ ಸತ್ಯ ಸಂಗತಿ..!
ಸಂದರ್ಶನ Interview ಮಾಡಿರುವ ಮಾಧ್ಯಮ ಸಂಸ್ಥೆಗಳಲ್ಲಿ ಸಂಗ್ರಹ ಮಾಡಿರುವ ಮಾಹಿತಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಸಂದರ್ಶನಕ್ಕೆ ಮೊದಲೇ ಪ್ರಶ್ನೆಗಳನ್ನು ಕಳುಹಿಸಿಕೊಡಬೇಕು. ಪ್ರಶ್ನೆಗಳನ್ನು ಬಿಜೆಪಿ ಟೀಂ ಪರಿಶೀಲನೆ ಮಾಡಿದ ಬಳಿಕ ಬದಲಾವಣೆ ಇದ್ದರೆ ಸೂಚನೆ ಕೊಡ್ತಾರೆ. ಆ ಬಳಿಕ ಪ್ರಶ್ನೆಗಳನ್ನು ಬದಲಿಸಬೇಕು. ಇಲ್ಲದಿದ್ರೆ ಪ್ರಶ್ನೆಗಳಿಗೆ Questions ಮೋದಿ ಉತ್ತರ ಕೊಡುವುದು ಹೇಗೆ..? ಏನೆಲ್ಲಾ ಮಾಹಿತಿಗಳನ್ನು ಸೇರಿಸಿ ಉತ್ತರ ಕೊಡಬೇಕು ಅನ್ನೋ ಬಗ್ಗೆ ಟೀಂ BJP Team ಸಿದ್ಧಪಡಿಸುತ್ತದೆ, ಆ ಬಳಿಕ ಮೋದಿ ಉತ್ತರ ಕೊಡುತ್ತಾರೆ. ಒಂದು ಸರಳವಾದ ಪ್ರಶ್ನೆ ಕೇಳಿದರೂ ಮೋದಿ ಸುಧೀರ್ಘ ಉತ್ತರ ಕೊಡುತ್ತಾರೆ. ಮಧ್ಯೆ ಅಡೆತಡೆಯಿಲ್ಲ, ಉತ್ತರಕ್ಕೆ ಮರು ಪ್ರಶ್ನೆ ಮಾಡುವಂತಿಲ್ಲ. ಉತ್ತರ ಅಸಂಬದ್ಧ ಎನಿಸಿದರೂ ಮುಂದಿನ ಪ್ರಶ್ನೆಗೆ ಹೋಗಬೇಕು. ಇದು ನಿಯಮ.
ಮೀಟ್ ದಿ ಪ್ರೆಸ್.. ಪ್ರೆಸ್ ಮೀಟ್ ಅವಶ್ಯಕತೆ ಇದ್ಯಾ..?
ಯಾವುದೇ ಪ್ರಧಾನಿ Prime minister ಅಥವಾ ಮುಖ್ಯಮಂತ್ರಿ Chief Minister ತನ್ನ ಅಧಿಕಾರವಧಿ ಮುಗಿಸಿ ಮತ್ತೊಮ್ಮೆ ಚುನಾವಣೆಗೆ ಹೋಗುವ ಮೊದಲು ಮೀಟ್ ದಿ ಪ್ರೆಸ್ meet the press ಎಂದು ಎಲ್ಲಾ ಪತ್ರಕರ್ತರನ್ನು ಆಹ್ವಾನಿಸಿ, ತನ್ನ ಸರ್ಕಾರ ಮಾಡಿದ ಸಾಧನೆ ಹಾಗು ಇನ್ನೂ ಮಾಡಬೇಕಿರುವ ಸಾಧನೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಯಾವುದೇ ಪೂರ್ವ ನಿಯೋಜಿತ ಪ್ರಶ್ನೆಗಳು ಇಲ್ಲದೆ, ಸ್ಥಳದಲ್ಲೇ ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಈ ರೀತಿ ಮಾಧ್ಯಮ ಮಿತ್ರರನ್ನು Journalist ಕರೆದು ಮಾತನಾಡುವುದು ಬಿಟ್ಟು, ತನ್ನ ಪರವಾಗಿ ಇರುವ ಮಾಧ್ಯಮ ಸಂಸ್ಥೆಗಳಿಗೆ ಮಾತ್ರ, ಅದೂ ಕೂಡ ಮೊದಲೇ ನಿಗದಿ ಮಾಡಿದ ಪ್ರಶ್ನೆಗಳಿಗೆ ಉತ್ತರ ಕೊಡುವುದು ಎಷ್ಟು ಸರಿ..? ಎನ್ನುವುದು ಜನಸಾಮಾನ್ಯರ ಪ್ರಶ್ನೆ. ಮಾಧ್ಯಮಗಳಿಂದಲೇ ದೂರವಿದ್ದ ಪ್ರಧಾನಿ ಸದ್ಯ ಮ್ಯಾಚ್ ಫಿಕ್ಸಿಂಗ್ ಆದರೂ ಮಾಡಿಕೊಳ್ಳುವ ಮಟ್ಟಕ್ಕೆ ಬಂದಿದ್ದಾರೆ ಎನ್ನುವುದು ಸಮಾಧಾನಕರ ಅಲ್ಲವೇ..?