78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿಗಳ ಪದಕ ಘೋಷಿಸಿದೆ ಕೇಂದ್ರ ಸರ್ಕಾರ. ರಾಜ್ಯದ ಹಲವು ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಘೋಷಣೆ ಆಗಿದೆ. ರಾಜ್ಯದಿಂದ 20 ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಒಲಿದಿದೆ. ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಣೆ ಆಗಿದೆ.
Internal Security Division ಎಡಿಜಿಪಿ ಆಗಿರುವ ಎಂ. ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಸೀನಿಯರ್ ಕಮಾಂಡರ್ ಬಸವಲಿಂಗಪ್ಪನವರಿಗೆ ಅತ್ಯುತ್ತಮ ಸೇವಾ ಪದಕ ಘೋಷಣೆ ಮಾಡಲಾಗಿದೆ. ಇನ್ನುಳಿದ 18 ಮಂದಿ ಅಧಿಕಾರಿ, ಸಿಬ್ಬಂದಿಗೆ ಅರ್ಹ ಸೇವಾ ಪದಕ ಘೋಷಣೆ ಆಗಿದೆ.
ಶ್ರೀನಾಥ್ ಎಂ ಜೋಷಿ(Shrinath M Joshi), ಎಸ್ ಪಿ ಲೋಕಾಯುಕ್ತ(S P Lokayuktha), ಸಿ.ಕೆ ಬಾಬಾ(C K Baba), ಬೆಂಗಳೂರು ಗ್ರಾಮಾಂತರ ಎಸ್ಪಿ, ರಾಮಗೊಂಡ ಬೈರಪ್ಪ(Ramagonda Byrappa), ಎಎಸ್ಪಿ ಕರ್ನಾಟಕ, ಗಿರಿ ಕೃಷ್ಣಮೂರ್ತಿ(Giri KrishnaMurthy), ಡಿಎಸ್ಪಿ, ಪಿ ಮುರಳೀಧರ್(P Muralidhar), ಡಿಎಸ್ಪಿ, ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್, ಬಸವರಾಜು ಕಮ್ತಾನೆ, ಡಿಎಸ್ಪಿ, ರವೀಶ್ ನಾಯಕ್, ಎಸಿಪಿ, ಶರತ್ ದಾಸನಗೌಡ, ಎಸ್ಪಿ, ಪ್ರಭಾಕರ್ ಗೋವಿಂದಪ್ಪ, ಎಸಿಪಿ, ಗೋಪಾಲ್ ರೆಡ್ಡಿ, ಡಿಸಿಪಿ, ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್ಟೇಬಲ್, ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್ಪೆಕ್ಟರ್, ಹರೀಶ್ ಹೆಚ್ ಆರ್, ಅಸಿಸ್ಟೆಂಟ್ ಕಮಾಂಡೆಂಟ್, ಎಸ್ ಮಂಜುನಾಥ, ಇನ್ಸ್ಪೆಕ್ಟರ್, ಗೌರಮ್ಮ ಜಿ. ಎಎಸ್ಐ ಅರ್ಹ ಸೇವಾ ಪದಕ ಪಡೆದಿದ್ದಾರೆ.
1998ನೇ ಬ್ಯಾಚ್ನ IPS ಅಧಿಕಾರಿ ಆಗಿರುವ ಎಂ ಚಂದ್ರಶೇಖರ್ (M Chandrashekar), ಬೆಳಗಾವಿ ಕಮಿಷನರ್ (Belagavi Commissioner) ಆಗಿ, ಮಂಗಳೂರು(Mangalore) ಬೆಂಗಳೂರು(Bangalore) ಸೇರಿದಂತೆ ರಾಜ್ಯಾದ್ಯಂತ ಕೆಲಸ ಮಾಡಿದ್ದಾರೆ. ಸಾಕಷ್ಟು ಪ್ರಕರಣಗಳನ್ನು ಯಶಸ್ವಿಯಾಗಿ ತನಿಖೆ ನಡೆಸಿ ಸರ್ಕಾರಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಿದ್ದಾರೆ. ಇದೀಗ ಆಂತರಿಕ ಭದ್ರತಾ ದಳದ ADGP ಆಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ M Chandrashekar ಅವರಿಗೆ ರಾಷ್ಟ್ರಪತಿಗಳ ಪದಕ ಘೋಷಿಸಿದೆ ಕೇಂದ್ರ ಗೃಹ ಇಲಾಖೆ.