ಮಂಗಳೂರು : ಭಯೋತ್ಪಾದಕ ಚಟುವಟಿಕೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಇಂದು ಸುಳ್ಯದಲ್ಲಿರುವ ಪಿಎಫ್ಐ ಕಚೇರಿಯನ್ನು ಸೀಜ್ ಮಾಡಿದ್ದಾರೆ. ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೂ ಮುನ್ನ ಇದೇ ಪಿಎಫ್ಐ ಕಚೇರಿಯಲ್ಲಿ ಸಂಚು ರೂಪಿಸಲಾಗಿತ್ತು .
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರುವ ತಾಹಿರಾ ಕಾಂಪ್ಲೆಕ್ಸ್ನ ಫಸ್ಟ್ ಫ್ಲೋರ್ನಲ್ಲಿರುವ ಪಿಎಫ್ಐ ಕಚೇರಿಯನ್ನು ಎನ್ಐಎ ಅಧಿಕಾರಿಗಳು ಸೀಝ್ ಮಾಡಿದ್ದಾರೆ. ಹಾಲ್ನ ಮಾಲೀಕರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪಿಎಫ್ಐ ಕಚೇರಿಯನ್ನು ಸೀಝ್ ಮಾಡಿರುವ ಆರ್ಡರ್ ಕಾಪಿಯನ್ನು ಎನ್ಐಎ ಅಧಿಕಾರಿಗಳು ಕಳುಹಿಸಿಕೊಟ್ಟಿದ್ದಾರೆ.
ಎನ್ಐಎ ಅಧಿಕಾರಿಗಳು ಸೀಝ್ ಮಾಡಿದ ಬಳಿಕ ಈ ಕಚೇರಿಯನ್ನು ಇನ್ನು ಯಾರಿಗೂ ಪರಬಾರೆ ಮಾಡಬಾರದು. ಈ ಕಚೇರಿಯನ್ನು ಯಾರಿಗೂ ಬಾಡಿಗೆ ಕೊಡಬಾರದು.ಕಚೇರಿಯನ್ನು ನವೀಕರಣ ಮಾಡುವುದು ಅಥವಾ ಅಲ್ಲಿನ ಉಪಕರಣಗಳನ್ನು ಬೇರೆಡೆಗ ಸಾಗಿಸುವುದು ಸೇರಿದಂತೆ ಈ ತರ ಯಾವುದೇ ಕೆಲಸಗಳನ್ನು ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ .