ಮಂಗಳೂರು : ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದ ಹಿಂದೂ ಪರ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕನಸಿನ ಮನೆ ಕೊನೆಗೂ ಸಿದ್ಧಗೊಂಡಿದೆ. ಐದೇ ತಿಂಗಳ ಅವಧಿಯಲ್ಲಿ ನೂತನ ಮನೆ ನಿರ್ಮಾಣಗೊಂಡಿದ್ದು ನಾಳೆ ಪ್ರವೀಣ್ ಕನಸಿನ ಮನೆಯ ಗೃಹ ಪ್ರವೇಶ ಕಾರ್ಯ ನೆರವೇರಲಿದೆ.
![](https://pratidhvani.com/wp-content/uploads/2023/04/IMG-20230405-WA0038-1-1024x538.jpg)
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ನೆಟ್ಟಾರುವಿನಲ್ಲಿ ಈ ವಿಶಾಲವಾದ ಮನೆ ನಿರ್ಮಾಣಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮನೆ ನಿರ್ಮಾಣ ಮಾಡಿದೆ. 2800 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮನೆಗೆ ಪ್ರವೀಣ ಎಂದೇ ಹೆಸರಿಡಲಾಗಿದೆ .
ಪ್ರವೀಣ್ ನೆಟ್ಟಾರು ಹೊಸ ಮನೆಯನ್ನು ಕಟ್ಟುವ ಕನಸು ಹೊಂದಿದ್ದರು. ಆದರೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದು. ಇದೀಗ ಪ್ರವೀಣ್ ನೆಟ್ಟಾರು ಕೊನೆಯಾಸೆಯನ್ನು ಈಡೇರಿಸಿರುವ ಪ್ರವೀಣ್ ನೆಟ್ಟಾರು ಸಮಾಧಿ ಪಕ್ಕೆವೇ ಮನೆ ನಿರ್ಮಿಸಿದೆ. ನಾಳೆ ಗೃಹ ಪ್ರವೇಶ ಕಾರ್ಯ ನೆರವೇರಿಸಿ ಬಳಿಕ ಮನೆಯ ಕೀಯನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.