• Home
  • About Us
  • ಕರ್ನಾಟಕ
Saturday, June 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಂಸತ್ ಭವನಕ್ಕೆ ನುಗ್ಗಿದ್ದ ವ್ಯಕ್ತಿ ಪ್ರತಾಪ್ ಸಿಂಹನ ಐಟಿ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದ : ಎಂ ಲಕ್ಷ್ಮಣ್ ಆರೋಪ

Any Mind by Any Mind
December 15, 2023
in ಕರ್ನಾಟಕ
0
ಸಂಸತ್ ಭವನಕ್ಕೆ ನುಗ್ಗಿದ್ದ ವ್ಯಕ್ತಿ ಪ್ರತಾಪ್ ಸಿಂಹನ ಐಟಿ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದ : ಎಂ ಲಕ್ಷ್ಮಣ್ ಆರೋಪ
Share on WhatsAppShare on FacebookShare on Telegram

ADVERTISEMENT

:

ಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿ ಮನೋರಂಜನ್ ಪ್ರತಾಪ್ಸಿಂಹ ಅವರ ಐಟಿ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಈ ಕೂಡಲೇ ಪ್ರತಾಪ್ ಸಿಂಹ ಅವರ ಜಲದರ್ಶಿನಿ ಕಚೇರಿಯನ್ನು ಸೀಲ್ ಮಾಡಬೇಕು ಎಂದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದೇವೆ ಎಂದು ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳಾದ ಸಾಗರ್ ಶರ್ಮ, ಮನೋರಂಜನ್ ಮತ್ತು ಲಲಿತ್ ಝಾ, ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಅವರ ಜೊತೆಯೇ ಮೂರು ಬಾರಿ ಸಭೆ ನಡೆಸಿದ್ದಾರೆ. ಈ ಕೂಡಲೇ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕು.

ಸಂಸದ ಪ್ರತಾಪ್ ಸಿಂಹ ಅವರು ಕಿಡಿ ಹೊತ್ತಿಸುವುದರಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಎರಡು ಕೋಮುಗಳು, ಜನ ಸಾಮಾನ್ಯರ ನಡುವೆ ಕಿಡಿ ಹೊತ್ತಿಸುವುದಕ್ಕೆ ಅವರು ಆಯ್ಕೆಯಾಗಿದ್ದಾರೆ. ಮನೋರಂಜನ್ ಎನ್ನುವ ವ್ಯಕ್ತಿ ಗೊತ್ತಿಲ್ಲದೇ ಇದ್ದರೂ ಏಕೆ 3-4 ಬಾರಿ ಪಾಸ್ ನೀಡಿದ್ದಾದರೂ ಏಕೆ?. ಕ್ಷೇತ್ರದ ಹೊರಗಿನ ವ್ಯಕ್ತಿಗಳಾದ ಸಾಗರ್ ಶರ್ಮ, ಲಲಿತ್ ಝಾ ನಿಗೆ ಪಾಸ್ ನೀಡಿದ್ದಾದರೂ ಏಕೆ?

ರಾಜಕೀಯವಾಗಿ ಇಂತಹ ಘಟನೆಗಳಿಂದ ಲಾಭ ಪಡೆಯಲು ಬಿಜೆಪಿ ಹೊರಟಿದೆ. 2014, 2019 ರ ಚುನಾವಣೆಗಳನ್ನು ಹೇಗೆ ನಡೆಸಿದರು ಎನ್ನುವ ನಿದರ್ಶನ ನಮ್ಮ ಮುಂದಿದೆ. 2024 ರ ಚುನಾವಣೆ ಹೇಗೆ ನಡೆಸಬೇಕು ಎಂಬುದರ ತಾಲೀಮು ಇದಾಗಿದೆ.

6 ಮಂದಿ ಆರೋಪಿಗಳ ಮೇಲೆ ಘಟನೆ ನಡೆದ 35 ಗಂಟೆಗಳಾದ ನಂತರ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಬಹುದೇ? ಒಳಗೆ ಬಿಡಲು ಕಾರಣಕರ್ತರು ಯಾರು?

ಮೈಸೂರಿನ ವಿಜಯನಗರ 2 ನೇ ಹಂತದ ದೇವರಾಜೇಗೌಡ ಎಂಬುವರ ಮಗನಾದ ಮನೋರಂಜನ್. ಕಂಪ್ಯೂಟರ್ ಎಂಜಿನಿಯರಿಂಗ್ ಪೂರ್ಣಗೊಳಿಸಿಲ್ಲ. ಮನೋರಂಜನ್ ಅವರ ತಂದೆ ಮಾಧ್ಯಮಗಳ ಎದುರು ʼನಾನು ಪ್ರತಾಪ್ ಸಿಂಹ ಅವರ ಅನುಯಾಯಿʼ , ಪ್ರತಾಪ್ ಸಿಂಹ ಅವರ ಗೆಲುವಿಗೆ ಶ್ರಮ ಹಾಕಿದ್ದು, ಮೋದಿ ಅಭಿಮಾನಿ ಎಂದು ಹೇಳಿಕೆ ನೀಡಿದ್ದರು.

ಪ್ರತಾಪ್ ಸಿಂಹ ಅವರಿಗೆ ಹತ್ತು ಪ್ರಶ್ನೆಗಳು:

ಮನೋರಂಜನ್ ಮತ್ತು ಅವರ ತಂದೆ ಎಷ್ಟು ದಿನಗಳಿಂದ ಪರಿಚಯ? ನಿಮ್ಮ ಐಟಿ ಸೆಟ್ನಲ್ಲಿ ಕೆಲಸ ಮಾಡುತ್ತಿದ್ದರೆ? ನಮ್ಮ ತಂದೆಯವರು ಪ್ರತಾಪ್ ಸಿಂಹ ಪರವಾಗಿ ಕೆಲಸ ಮಾಡಿದ್ದಾರೆಯೇ? ಮನೋರಂಜನ್ ಅವರ ತಂದೆಗೂ ನಿಮಗೂ ಇರುವ ಸಂಬಂಧವೇನು?

ಮನೋರಂಜನ್ ಮತ್ತು ಸಾಗರ್ ಶರ್ಮ ಅವರನ್ನು ಅಮಿತ್ ಶಾ ಅವರಿಗೆ ಅಮಿತ್ ಶಾ ಅವರನ್ನು ಭೇಟಿಮಾಡಿಸಿದ್ದೀರಿ. ಆರ್ ಎಸ್ಎಸ್ ಮುಖಂಡರನ್ನು ಭೇಟಿ ಮಾಡಿಸಿದ್ದು ಏಕೆ? ಕೊಡಗಿನ ಯಾವ ರೆಸಾರ್ಟ್ನಲ್ಲಿ ಮೂರು ಜನ ಆರೋಪಿಗಳನ್ನು ಎಷ್ಟು ದಿನ ತಂಗಿಸಿದ್ದೀರಿ? ಕೊಡಗಿನ ಬಿಜೆಪಿ, ಆರ್ಎಸ್ಎಸ್ ಮುಖಂಡರ ಜೊತೆ ಎಷ್ಟು ಸಭೆಗಳನ್ನು ನಡೆಸಿದ್ದೀರಿ? ಮನೋರಂಜನ್ಗೆ ಡಿಜಿಟಲ್ ಪಾವತಿ ಮೂಲಕ ಹಣ ಕಳಿಸಿದ್ದೀರಿ ಎನ್ನುವ ಮಾತಿದೆ. ಕಳೆದ 4 ತಿಂಗಳಿನಲ್ಲಿ ನಡೆದ ಸಭೆಯ ಬಗ್ಗೆ ಉತ್ತರಿಸುವಿರಾ?

ಸಣ್ಣ ಘಟನೆ ನಡೆದರೆ ಸಾಕು ಟ್ವೀಟ್ , ಪೇಸ್ಬುಕ್ ಪೈವ್ ಮೂಲಕ ಬಂದು ಅರಚಿಕೊಳ್ಳುವ ನೀವು ಏಕೆ ಈ ಘಟನೆಯ ಸಂಬಂಧ ಹೇಳಿಕೆಯನ್ನೇ ನೀಡುತ್ತಿಲ್ಲ. ಸಾಗರ್ ಶರ್ಮ ಎನ್ನುವ ವ್ಯಕ್ತಿಗೆ ರೇಡಿಯೋ ತಯಾರಿಕಾ ತರಬೇತಿ ಕೊಡಿಸಿದ್ದೀರಿ ಎನ್ನುವ ಮಾಹಿತಿಯಿದ್ದು, ಕೂಡಲೇ ಜನರಿಗೆ ಉತ್ತರ ಕೊಡಬೇಕು.

ದೇಶದ ಅತ್ಯುಚ್ಚ ರಕ್ಷಣಾ ವ್ಯವಸ್ಥೆಗಳು ಇದ್ದರೂ ನಾಲ್ಕು ಜನ ಹೇಗೆ ಸಂಸತ್ ಒಳಗೆ ಪ್ರವೇಶ ಪಡೆದರು. ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ಸಾಗರ್ ಶರ್ಮ ಟೇಬಲ್ನಿಂದ ಟೇಬಲ್ಗೆ ಜಿಗಿಯುವ ವೇಳೆ ಕೈಯಲ್ಲಿ ಹಿಡಿದುಕೊಂಡಿದ್ದ ವಸ್ತು ಯಾವುದು? ಇಷ್ಟೊಂದು ದಾಂಧಲೆ ನಡೆದರೂ ವೈದ್ಯರು ಏಕೆ ಸ್ಥಳಕ್ಕೆ ಬರಲಿಲ್ಲ. ಅವರು ಹಾಕಿದ ಸ್ಮೋಕ್ ಬಾಂಬ್ನಿಂದ ಏನಾದರೂ ಅನಾಹುತ ಉಂಟಾಗಿದ್ದರೆ ಪರಿಣಾಮ ಏನಾಗುತ್ತಿತ್ತು.

ನೀಲಂ ಎನ್ನುವ ಆರೋಪಿಯನ್ನು ಮಹಿಳಾ ಪೊಲೀಸರು ಆರಾಮದಿಂದ ಎಳೆದುಕೊಂಡು ಹೋಗುತ್ತಿದ್ದಾರೆ. ಸಣ್ಣ ಭದ್ರತಾ ಲೋಪವಾದರೂ ಭದ್ರತಾ ಸಿಬ್ಬಂಧಿ ಎಲ್ಲಿ ಹೋಗಿದ್ದರು? ಈ ವ್ಯವಸ್ಥೆಯನ್ನು ಏನೆಂದು ಕರೆಯುವುದು.

ದಾಂಧಲೆ ನಡೆದ 10 ನಿಮಿಷದ ಒಳಗೆ ಸಮಾಚಾರ ಮಾಧ್ಯಮಗಳಿಗೆ ಹೇಗೆ ತಿಳಿಯಿತು. ಪೊಲೀಸರು ಸಣ್ಣ ಸಾಕ್ಷಿಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ಆದರೆ ಸ್ಮೋಕ್ ಬಾಂಬಿನ ತುಣುಕನ್ನು ಪಡೆಯಲು ಮಾಧ್ಯಮ ಪ್ರತಿನಿಧಿಗಳು ಕಿತ್ತಾಡುತ್ತಿದ್ದಾರೆ. ಈ ದಾಳಿಯ ಹಿಂದೆ ಬಿಜೆಪಿಯವರ ಕೈವಾಡವಿದೆ. ಇದು ಗುಪ್ತಚರ ಇಲಾಖೆಯ ವೈಫಲ್ಯವಲ್ಲವೇ?

ಬಿಜೆಪಿಯವರು 2024 ರ ಚುನಾವಣೆಗೆ ಭರ್ಜರಿ ಸಂಚನ್ನು ರೂಪಿಸಿದ್ದರು. ಆದರೆ ಇದು ಬಿಜೆಪಿಯವರಿಗೆ ತಿರುಗುಬಾಣವಾಗಿ ಮಾರ್ಪಟ್ಟಿದೆ. ಬಿಜೆಪಿಯವರು ದಾಂಧಲೇಕೋರರಿಗೆ ತರಬೇತಿ ನೀಡಿ ಕಳುಹಿಸಲಾಗಿದೆ. ಯಾವುದೇ ತನಿಖಾ ಸಂಸ್ಥೆಗೆ ನೀಡಿದರು, ಈ ಪ್ರಕರಣವನ್ನು ಮುಚ್ಚಿಹಾಕುತ್ತಾರೆ ಹಾಗೂ ವಿಪಕ್ಷದ ವಿರುದ್ದವಾಗಿ ಹೇಳಿಕೆ ನೀಡಿ ಇಡೀ ಪ್ರಕರಣದ ದಾರಿ ತಪ್ಪಿಸುತ್ತಾರೆ. ಆದ ಕಾರಣ ಮುಖ್ಯ ನ್ಯಾಯಾದೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು.

ನರೇಂದ್ರ ಮೋದಿಯವರು ಅಪಘಾತವಾಗಿ 4 ಜನ ಸತ್ತರೂ ಟ್ವೀಟ್ ಮಾಡುತ್ತಾರೆ. ದೇಶದ ಗೃಹ ಸಚಿವ ಅಮಿತ್ ಷಾ ಅವರೇ ಇದಕ್ಕೆ ನೇರ ಹೊಣೆ ಆದರೆ ಇವರ್ಯಾರು ಕೂಡ ಸಣ್ಣ ಪ್ರತಿಕ್ರಿಯೆ ನೀಡಿಲ್ಲ. ಕೇವಲ ಸುಳ್ಳುಗಳನ್ನೇ ಹಂಚುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯನೂ ಒಂದೂ ಟ್ವೀಟ್ ಮಾಡಿಲ್ಲ. ಆದರೆ ನೀಲಂ ಎನ್ನುವ ಮಹಿಳೆ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಪೋಟೊ ಹಾಕಿ ಮುಖ್ಯ ವಿಚಾರ ತಿರುಚುವ ಕೆಲಸ ಮಾಡುತ್ತಿದ್ದಾರೆ.

ಮನೋರಂಜನ್ ಅವರ ತಂದೆ ದೇವರಾಜೇಗೌಡ ಅವರು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದರು ಎಂದು ಬಿಂಬಿಸಲು ಹೊರಟಿದ್ದರು. ಸಣ್ಣ ಸುಳಿವು ಸಿಕ್ಕರೂ ಸಾಕು ಗಂಭೀರ ವಿಚಾರವನ್ನು ತಿರುಚುವ ಕೆಲಸಕ್ಕೆ ಬಿಜೆಪಿ ಸಿದ್ದವಾಗಿದೆ.

ಸಂಸತ್ ಒಳಗೆ ನುಗ್ಗಿದವರಲ್ಲಿ ಒಬ್ಬ ವ್ಯಕ್ತಿ ಮುಸ್ಲಿಂ ಆಗಿದ್ದರೆ ಅಥವಾ ಕಾಂಗ್ರೆಸ್ ಸಂಸದರು ಪಾಸ್ ನೀಡಿದ್ದರೇ ಇಡೀ ದೇಶದಲ್ಲೇ ದಾಂಧಲೆ ನಡೆಸಲು ಬಿಜೆಪಿಯವರು ಸಜ್ಜಾಗುತ್ತಿದ್ದರು. ಆದರೆ ಈಗ ಏಕೆ ಒಬ್ಬರೂ ಬಾಯಿ ಬಿಡುತ್ತಿಲ್ಲವಲ್ಲ? ಏಕೆ.

ಚೀನಾದವರು ಭಾರತದ ನೆಲವನ್ನು ಅತಿಕ್ರಮಿಸಿ ಹಳ್ಳಿಗಳನ್ನು ನಿರ್ಮಾಣ ಮಾಡಿ, ರೈಲ್ವೇ ಹಳಿಗಳನ್ನು ಹಾಕುತ್ತಿದ್ದರೂ ಪ್ರಧಾನಿಗಳು ಮಾತೇ ಆಡುತ್ತಿಲ್ಲ. ಇವರಿಂದ ಜನಸಾಮಾನ್ಯರ ರಕ್ಷಣೆ ಸಾಧ್ಯವೇ?

ಯಾವ ತನಿಖಾ ಸಂಸ್ಥೆಗಳ ಮೇಲೂ ನಂಬಿಕೆ ಇಲ್ಲವಾಗಿದ್ದು. ನೇರವಾಗಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಧೀಶರ ಎದುರೇ ಆರೋಪಿಗಳು ಮುಕ್ತವಾಗಿ ಹೇಳಿಕೆ ನೀಡಲು ಅವಕಾಶ ಕೊಡಬೇಕು. ತನಿಖಾ ಸಂಸ್ಥೆಗಳು ಅಮಿತ್ ಷಾ ಅಣತಿಯಂತೆ ಕೆಲಸ ಮಾಡುತ್ತಿವೆ. ಪ್ರತಾಪ್ ಸಿಂಹ ಅವರಿಗೆ ಕನಿಷ್ಠ ಪಕ್ಷ ನೋಟಿಸ್ ನೀಡುವ ಕೆಲಸವನ್ನೂ ಮಾಡಿಲ್ಲ.

ಸದನ ಮುಗಿದ ಬಳಿಕ ಸಿಎಂ, ಡಿಸಿಎಂ ಮತ್ತು ಪಕ್ಷ ನಾಯಕರ ಜೊತೆ ಚರ್ಚೆ ನಡೆಸಿ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗುವುದು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು

ಸಂಸತ್ ದಾಳಿಯ ಸಂಬಂಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆಯಲಾಗಿದೆ. ದೇಶದ ಪ್ರಜಾಪ್ರಭುತ್ವದ ಕರಾಳದಿನ ಎಂದು ನಾವು ಈ ಘಟನೆಯನ್ನು ಕರೆಯುತ್ತೇವೆ. ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಎಂದು ಮನವಿ ಮಾಡಿದ್ದೇವೆ.

ಪ್ರತಾಪ್ ಸಿಂಹ ಅವರು ಸಂಸತ್ ಪ್ರವೇಶಕ್ಕೆ ಈಗಾಗಲೇ 3 ಬಾರಿ ಪಾಸ್ ನೀಡಿದ್ದಾರೆ ಎನ್ನುವುದು ಆತಂಕಕಾರಿ ವಿಚಾರ. ಟ್ವೀಟ್ ಮೇಲೆ ಟ್ವೀಟ್ ಮಾಡುವ ಬಿಜೆಪಿಯವರು ಇದುವರೆಗೂ ಈ ವಿಚಾರದ ಬಗ್ಗೆ ದನಿ ಎತ್ತಿಲ್ಲ. ಟಿವಿ ಚರ್ಚೆಗೆ ಹೋಗಲು ನಿರಾಕರಿಸುತ್ತಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಸತ್ತಿನ ಭದ್ರತೆಯ ವಿಚಾರವಾಗಿ ಸ್ಪೀಕರ್ ಉತ್ತರ ನೀಡುತ್ತಾರೆ ಎಂದು ಬಾಲಿಶವಾದ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಲಾಯನವಾದ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಸಂಸತ್ ಒಳಗೆ ಆದಂತಹ ಘಟನೆಗೆ ಸ್ಪೀಕರ್ ಅವರು ಹೊಣೆಯಾದರೆ, ಸಂಸತ್ ಹೊರಗಡೆಯ ಘಟನೆಗೆ ಕೇಂದ್ರ ಸರ್ಕಾರ ಹೊಣೆ ಹೊತ್ತುಕೊಳ್ಳಬೇಕು.

ಇದೊಂದು ಪೂರ್ವನಿಯೋಜಿತ ಕೃತ್ಯ. ಏಕೆಂದರೆ ಘಟನೆ ನಡೆದ ಸಂದರ್ಭ ರಾಹುಲ್ ಗಾಂಧಿ ಅವರು ಸೇರಿದಂತೆ ಅನೇಕ ಪಕ್ಷಗಳ ಸದಸ್ಯರು ಸಂಸತ್ ಒಳಗೆ ಇರುತ್ತಾರೆ. ಆದರೆ ಪ್ರಧಾನಿ, ಗೃಹಸಚಿವರು, ಪ್ರಮುಖ ಸಚಿವರು ಯಾರೂ ಸಹ ಒಳಗೆ ಇರುವುದಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಆರೋಪಿ ಮನೋರಂಜನ್ ಅವರ ಮನೆ ವ್ಯಾಪ್ತಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಆದರೆ ಈ ಕೆಲಸ ನಡೆದಿಲ್ಲ. ಮೈಸೂರಿನಲ್ಲಿ ಷಡ್ಯಂತ್ರದ ಭಾಗವಾಗಿ ಸಭೆಗಳು ನಡೆದಿರುವ ಕಾರಣ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು.

ಮಾಜಿ ಮೇಯರ್ ರಾಮಚಂದ್ರಪ್ಪ

ಬಿಜೆಪಿಯವರ ಕುತಂತ್ರದ ಭಾಗವಾಗಿ ಇಂತಹ ಘಟನೆ ನಡೆದಿದೆ. ಇಂತಹ ಸಮಾಜಘಾತುಕ ಘಟನೆಗಳನ್ನು ಮತಗಳಾಗಿ ಪರಿವರ್ತನೆ ಮಾಡಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ.

ಜಮ್ಮು- ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದು ಮಾಡಿದ ನಂತರ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿವೆ. ಇಡಿ ದೇಶವೇ ಅಭದ್ರತೆಯ ನೆರಳಿನಲ್ಲಿ ಬದುಕುವಂತಾಗಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

UIICನಲ್ಲಿ ಭರ್ಜರಿ ಉದ್ಯೋಗವಕಾಶ : 300 ವಿವಿಧ ಸಹಾಯ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ!

Next Post

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯ ಬಗ್ಗೆ BBMP ಆಯುಕ್ತರ ಸಭೆ!

Related Posts

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
0

"ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಬೇಕು. ಪ್ರತಿ ವರ್ಷ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡಬೇಕು" ಎಂದು...

Read moreDetails

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

June 27, 2025

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

June 27, 2025

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

June 27, 2025
Next Post
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯ ಬಗ್ಗೆ BBMP ಆಯುಕ್ತರ ಸಭೆ!

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯ ಬಗ್ಗೆ BBMP ಆಯುಕ್ತರ ಸಭೆ!

Please login to join discussion

Recent News

Top Story

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

by ಪ್ರತಿಧ್ವನಿ
June 27, 2025
Top Story

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 27, 2025
Top Story

Rangitharanga: “ರಂಗಿತರಂಗ” ಮತ್ತೆ ತೆರೆಗೆ: ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಚಿತ್ರತಂಡ

by ಪ್ರತಿಧ್ವನಿ
June 27, 2025
Top Story

KJ George: ರಾಜ್ಯದ ಎಲ್ಲ ಸೌರ ವಿದ್ಯುತ್‌ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್‌ ವ್ಯವಸ್ಥೆ: ಜಾರ್ಜ್‌

by ಪ್ರತಿಧ್ವನಿ
June 27, 2025
Top Story

ರೈತ ಜಮೀನು ಕಿತ್ತು ತಿನ್ನುವ ಸರ್ಕಾರ

by ಪ್ರತಿಧ್ವನಿ
June 27, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar:ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಯೋಜನಾ ಪ್ರಾಧಿಕಾರ ಸೇರಿ ಕೆಂಪೇಗೌಡ ಪ್ರತಿಮೆ ಜಾಗ ಅಭಿವೃದ್ಧಿ ಪಡಿಸಿ

June 27, 2025

HD Kumarswamy: ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

June 27, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada