ಮೈಸೂರು ಸಂಸದ ಪ್ರತಾಪ್ ಸಿಂಹ ಕಾರಿಗೆ ಅಪಘಾತವಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಸುದ್ದಿ ಸುಳ್ಳಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಪ್ರತಾಪ್ ಸಿಂಹ ಹೋಗುತ್ತಿದ್ದರು. ಈ ವೇಳೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮುದೂರಿನ ಬಳಿ ಕಾರೊಂದು ಪಲ್ಟಿಯಾಗಿದೆ. ಕಾರಿನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದ ಪ್ರತಾಪ್ ಸಿಂಹ, ಪಲ್ಟಿಯಾದ ಕಾರಿನ ಬಳಿ ಆಗಮಿಸಿದ್ದರು. ಹೀಗಾಗಿ ಪಲ್ಟಿಯಾದ ಕಾರು ಪ್ರತಾಪ್ ಸಿಂಹನವರದ್ದು ಅಂತ ಸುದ್ದಿ ಹರಿದಾಡಿದೆ.