ಕೇಂದ್ರ ಸಚಿವ ಜೋಶಿ ಸಹೋದರನ ಮೇಲೆ FIR ದಾಖಲಾಗಿದೆ. ಎಂಪಿ ಎಲೆಕ್ಷನ್ಗೆ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಗೋಪಾಲ ಜೋಶಿ ಹಾಗೂ ವಿಜಯಲಕ್ಷ್ಮಿ ಎಂಬುವರ ವಿರುದ್ಧ FIR ದಾಖಲಾಗಿದೆ.
JDS ಮಾಜಿ MLA ದೇವಾನಂದ ಚವಾಣ್ ಬಳಿ ₹1. 75 ಕೋಟಿ ಪಡೆದು ವಂಚನೆ ಮಾಡಿದ್ದಾರೆ ಎಂದು ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಪ್ರಹ್ಲಾದ ಜೋಶಿ ಕಚೇರಿಯಲ್ಲೇ ಹಣಕ್ಕೆ ಡೀಲ್ ಮಾಡಿದ ಆರೋಪವಿದ್ದು, ಮೊದಲು ₹25 ಲಕ್ಷ ಪಡೆದು ಆಮೇಲೆ ₹1.75 ಕೋಟಿ ಹಣ ಪಡೆದು ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ವಿಜಯಪುರ ಲೋಕಸಭೆ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. 2 ಕೋಟಿಗೂ ಅಧಿಕ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ ಎಂದಿದ್ದಾರೆ.
ಪ್ರಹ್ಲಾದ್ ಜೋಶಿ ಸಹೋದರನ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಪೊಲೀಸರು ಕೇಸನ್ನು ಸೀರಿಯಸ್ಸಾಗಿ ತಗೊಂಡಿದ್ದಾರೆ. ಈಗಾಗಲೇ ಎರಡ್ಮೂರು ಜನರು ಅರೆಸ್ಟ್ ಆಗಿದ್ದಾರೆ. ಗೋಪಾಲ್ ಜೋಶಿ ಇನ್ನೂ ಸಿಕ್ಕಿಲ್ಲ, ಹುಡುಕುತ್ತಿದ್ದಾರೆ ಎಂದಿದ್ದಾರೆ.
ವಿಜಯಪುರ ಲೋಕಸಭಾ ಎಲೆಕ್ಷನ್ಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪವಿದ್ದು, ಗೋಪಾಲ ಜೋಷಿ ಪುತ್ರ ಅಜೇಯ್ ಜೋಷಿ ಹಾಗೂ ಜೋಶಿ ಸಹೋದರಿ ಎಂದು ಹೇಳಿಕೊಂಡಿರುವ ವಿಜಯಲಕ್ಷ್ಮೀ ಎಂಬುವರ ವಿರುದ್ಧವೂ FIR ಆಗಿದೆ. ನಾಗಠಾಣ ಮಾಜಿ ಎಂಎಲ್ ಎ ದೇವಾನಂದ್ ಚೌವಾಣ್ ಪತ್ನಿ ಸುನೀತಾ ಚವಾಣ್ ದೂರಿನ ಮೇಲೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ಕೂಡಾ ಆಗಿದೆ…