• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರದೀಪ್ ಈಶ್ವರ್​ ಮಾತಿಗೆ ಕಾಂಗ್ರೆಸ್​​ನಲ್ಲೇ ಸಿಗಲಿಲ್ಲ ಮನ್ನಣೆ..

ಕೃಷ್ಣ ಮಣಿ by ಕೃಷ್ಣ ಮಣಿ
March 16, 2025
in ಕರ್ನಾಟಕ, ರಾಜಕೀಯ
0
ಪ್ರದೀಪ್ ಈಶ್ವರ್​ ಮಾತಿಗೆ ಕಾಂಗ್ರೆಸ್​​ನಲ್ಲೇ ಸಿಗಲಿಲ್ಲ ಮನ್ನಣೆ..
Share on WhatsAppShare on FacebookShare on Telegram

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಆಕ್ಸೆಡೆಂಟ್ ಎಂಎಲ್ಎ ಎಂದು ಬಿಜೆಪಿ ಕಿಡಿಕಾರಿದೆ. ಆಕ್ಸಿಡೆಂಟಲ್ ಎಂಎಲ್​ಎ ಪ್ರದೀಪ್​ ಈಶ್ವರ್​ ಅವರೇ, ಅಲ್ಲಿ ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮವೂ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ. ಅಲ್ಲಿ ನಡೆಯುತ್ತಿರುವುದು ಪವಾಡ ಪುರುಷ ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ!!. ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಅಥವಾ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ!!. ನಿಮ್ಮ ಪ್ರಚಾರದ ಹಪಾಹಪಿಗಾಗಿ ಪೂಜನೀಯ ಕೈವಾರ ತಾತಯ್ಯ ಅವರ ವೇದಿಕೆಗೆ ಅವಮಾನಿಸಬೇಡಿ ಎಂದು ಚಾಟಿಬೀಸಿದೆ.

ADVERTISEMENT

ಸಂಸದ ಪಿಸಿ ಮೋಹನ್ ಮಾತನಾಡಿ, ಕೈವಾರ ತಾತಯ್ಯ ಅವರ ಜಯಂತಿ ಕಾರ್ಯಕ್ರಮ ರಾಜ್ಯ ಸರ್ಕಾರ ಮಾಡಿತ್ತು. ಈ ಹಿಂದೆ ಬಸವರಾಜ್ ಬೊಮ್ಮಾಯಿ ಸರ್ಕಾರ ಇದ್ದಾಗಲೇ ಈ ಜಯಂತಿ ಘೋಷಣೆ ಮಾಡಲಾಗಿತ್ತು. ಶುಕ್ರವಾರ ಸಂಜೆ ಜಯಂತಿ ನಡೆಯುವಾಗ ಪ್ರದೀಪ್ ಈಶ್ವರ್ ನನ್ನ ಸರ್ಕಾರ, ನನ್ನ ಕಾರ್ಯಕ್ರಮ ಅಂತಾ ಮಾತಾಡ್ತಿದ್ರು. ಯಾವಾಗ ಅವ್ರು ಲಕ್ಷ್ಮಣ ರೇಖೆ ದಾಟಿದ್ರೋ ಅವಾಗ ನಾನು ಪ್ರಶ್ನೆ ಮಾಡಿದೆ. ಹಿಂದಿನ ಸರ್ಕಾರದಿಂದ ಜಯಂತಿಯ ಕೊಡುಗೆ ಬಗ್ಗೆ ಮಾತಾಡಿದ್ರೆ, ಪ್ರದೀಪ್ ಈಶ್ವರ್ ಗೆ ಏನು ಹೊಟ್ಟೆ ಉರೀ..? ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ಪಕ್ಷದ ಕಾರ್ಯಕರ್ತರು ಯಾರು ಅವರನ್ನು ರೊಚ್ಚೆಗೇಳಿಸಿಲ್ಲ. ಅಲ್ಲಿನ ಸಭೀಕರು ನನಗೂ ಕೇಳಿದ್ರು. ಆದರೆ ಇದಕ್ಕೆ ಅಷ್ಟೊಂದು ತಲೆಕೆಡೆಸಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ಕಾರ್ಯಕ್ರಮ ಮಾಡಿದಾಗ ಪಕ್ಷತೀತವಾಗಿ ಎಲ್ಲರನ್ನೂ ಕರೆದಿದ್ವಿ. ಆದರೆ ಈ ಬಾರಿಯ ಕಾರ್ಯಕ್ರಮಕ್ಕೆ ಸಿಎಂ ಆಗಲಿ, ಒಬ್ಬ ಮಂತ್ರಿಯೂ ಬಂದಿಲ್ಲ. ಇವತ್ತು ಕಾಂಗ್ರೆಸ್ ಸರ್ಕಾರ ಏನು ಪರ್ಮನೆಂಟಾ..? ಇನ್ನೂ ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ಬಲಿಜ ಸಮಾಜವನ್ನು ಈ ಶಾಸಕ ಸೇರಿ ಇಡೀ ಕಾಂಗ್ರೆಸ್ ಕಡೆಗಣಿಸಿದೆ. ಪ್ರದೀಪ್ ಈಶ್ವರ್, ತಮ್ಮ ನಡವಳಿಕೆಯನ್ನು ಸರಿಪಡಿಸಿಕೊಂಡರೆ ಒಳ್ಳೆಯದು ಎಂದು ಆಗ್ರಹಿಸಿದ್ದಾರೆ.

ಶಾಸಕ ಪ್ರದೀಪ್​ ಈಶ್ವರ್​ ಅವರು ಏನು ಚಿಕ್ಕಮಗು ಅಲ್ಲ, ವಯಸ್ಸು ಆಗಿದೆ. ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅಂತು ನನಗೆ ಮೊದಲ ಅನುಭವ. ಅವರು ಮಾತನ್ನು ನೋಡೇ ನನಗೆ ಆಶ್ಚರ್ಯ ಆಯ್ತು. ಅವರು ಶಾಸಕರಾಗಿದ್ದಾರೆ ಅನ್ನೋದನ್ನು ಅರಿತುಕೊಳ್ಳಲಿ ಎಂದಿದ್ದಾರೆ ಸಂಸದ ಪಿಸಿ ಮೋಹನ್. ಕಾಂಗ್ರೆಸ್​ ಶಾಸಕನ ಮಾತಿಗೆ ಕಾಂಗ್ರೆಸ್​ ನಾಯಕರೇ ಅಸಮಧಾನ ಹೊರಹಾಕಿದ್ದಾರೆ. ಬಹುತೇಕ ಸಚಿವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತ, ರಾಜ್ಯದಲ್ಲಿ ಇರುವುದು ಸಿದ್ದರಾಮಯ್ಯನ ಸರ್ಕಾರವೇ ಆಗಿದ್ದರೂ ಬಳಸುವ ಭಾಷೆ ಸರಿಯಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಕೈವಾರ ತಾತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ – ಪಿ ಸಿ ಮೋಹನ್ ಜಟಾಪಟಿ ವಿಚಾರಕ್ಕೆ ಪ್ರಹ್ಲಾದ್​ ಜೋಶಿ ಮಾತನಾಡಿ, ಈ ತರದ ವ್ಯಕ್ತಿ ಮತ್ತು ಅಪ ಶಬ್ದಗಳ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಭಾರತ ಸರಕಾರ ಏನಾದರೂ ಕಾರ್ಯಕ್ರಮ ಮಾಡಿದರೆ ಮೋದಿ ಕೊಟ್ಟದ್ದು ಅಂತ ಹೇಳೋಕೆ ಆಗಲ್ಲ. ಭಾರತ ಸರಕಾರದ ಕಾರ್ಯಕ್ರಮ ಅಥವಾ ಕರ್ನಾಟಕ ಸರಕಾರದ ಕಾರ್ಯಕ್ರಮ ಅಂತ ಹೇಳಬೇಕು. ಸರಕಾರದ ದುಡ್ಡಿನಲ್ಲಿ ಮಾಡುವ ಕಾರ್ಯಕ್ರಮ. ನಿಮ್ಮ ಅಪ್ಪಂದಲ್ಲ ಅನ್ನುವ ಈ ರೀತಿಯ ಭಾಷೆ ಸದ್ಯ ರಾಜಕಾರಣಕ್ಕೆ ಶೋಭೆ ತರುವಂತದ್ದಲ್ಲ ಎಂದಿದ್ದಾರೆ.

ಕುಮಾರಸ್ವಾಮಿ ಮತ್ತು ಪತ್ನಿ ಶಂಕರಾಚಾರ್ಯ ಮಠ ವನ್ನು ಉದ್ಘಾಟನೆ ಮಾಡಿದರು #pratidhvani

ಉಡುಪಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಂತ್ರಿಗಳಾದವರು ತಮ್ಮ ಇಲಾಖೆಯ ಒತ್ತು ಕೊಡಬೇಕು ಅಲ್ಲೆಲ್ಲೋ ಸಮರ್ಥನೆ ಮಾಡಬೇಕಾಗುತ್ತದೆ. ರಾಜಕಾರಣಿಗಳು ವ್ಯವಸ್ಥೆ ಮತ್ತು ಮಿತಿಯನ್ನು ಬಿಟ್ಟು ಮಾತನಾಡಬಾರದು ಎಂಬುದು ನಿಯಮ. ಕೆಟ್ಟ ಶಬ್ದ ಬಳಸುವುದು, ಅಪ್ಪನ ಸರ್ಕಾರವಾ..? ಎಂದು ಕೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಮಾತುಗಳು ಸೌಜನ್ಯ ಮತ್ತು ಗೌರವವನ್ನು ತಂದುಕೊಡಲ್ಲ. ಪ್ರದೀಪ್ ಈಶ್ವರ್ ಶಬ್ದದ ಬಳಕೆ ನೋವಿನ ಸಂಗತಿ. ಪ್ರದೀಪ್ ಈಶ್ವರ ಅವರನ್ನು ಕರೆದು ಸಿದ್ದರಾಮಯ್ಯ ಬುದ್ಧಿ ಹೇಳುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಪ್ರದೀಪ್ ಈಶ್ವರ್​ನ ಸ್ವೇಚ್ಛಾಚಾರತನದ ಮಾತುಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

Tags: bjp slams pradeep eshwarbjp vs pradeep eshwarPC MohanPRADEEP ESHWARpradeep eshwar angry on bjppradeep eshwar chickkaballapura mlapradeep eshwar congress mlapradeep eshwar interviewpradeep eshwar latest newspradeep eshwar mla videospradeep eshwar newspradeep eshwar nimmondigepradeep eshwar speechpradeep eshwar today newspradeep eshwar vs pc mohanpradeep eshwar warning to bjp workers
Previous Post

ಕೇಂದ್ರದ ಪಾತ್ರವಿಲ್ಲದೆ ಗೋಲ್ಡ್​ ಸ್ಮಗ್ಲಿಂಗ್​ ಅಸಾಧ್ಯ.. ಲಾಡ್​ ಗರಂ

Next Post

ಸಿದ್ದಗಂಗಾ ಶ್ರೀಗಳ ಹೆಸರು ನಾಮಕರಣಕ್ಕೂ ಸರ್ಕಾರ ಬಿಡ್ತಿಲ್ಲ.. ಇದು ಸರೀನಾ..?

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ಸಿದ್ದಗಂಗಾ ಶ್ರೀಗಳ ಹೆಸರು ನಾಮಕರಣಕ್ಕೂ ಸರ್ಕಾರ ಬಿಡ್ತಿಲ್ಲ.. ಇದು ಸರೀನಾ..?

ಸಿದ್ದಗಂಗಾ ಶ್ರೀಗಳ ಹೆಸರು ನಾಮಕರಣಕ್ಕೂ ಸರ್ಕಾರ ಬಿಡ್ತಿಲ್ಲ.. ಇದು ಸರೀನಾ..?

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada