ನಟ ದರ್ಶನ್ ಅಂಡ್ ಗ್ಯಾಂಗ್ ಕೊಲೆ ಪ್ರಕರಣದಲ್ಲಿ ಬಂಧನ ಆಗಿದ್ದು, ಪೊಲೀಸ್ ಠಾಣೆಯಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗ್ತಿದೆ. ಅದಕ್ಕಾಗಿಯೇ ಇದೇ ಮೊದಲ ಬಾರಿಗೆ ಸ್ಟೇಷನ್ ಚಲನವಲನ ಕಾಣಿಸದಂತೆ ಶಾಮಿಯಾನ ಹಾಕಿಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಈ ಬೆಳವಣಿಗೆ ಬೆನ್ನಲ್ಲೇ ವಕೀಲರ ನಿಯೋಗ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಭೇಟಿ ನೀಡಿ ಸಿಸಿಟಿವಿ ಸಾಕ್ಷ್ಯಕ್ಕೆ ಮನವಿ ಸಲ್ಲಿಸಲಾಗಿದೆ.
![](https://pratidhvani.com/wp-content/uploads/2024/06/1303448587_black-gradient-minimalistic-future-technology-youtube-banner-18-1_202401-1.jpg)
ಸಾಕ್ಷಿ ನಾಶ ಹಾಗು ನಟ ದರ್ಶನ್ಗೆ ಸಿಗರೇಟ್ ಕೊಟ್ಟಿರೋ ಆರೋಪದ ಕೇಳಿಬಂದ ಹಿನ್ನಲೆಯಲ್ಲಿ ಠಾಣೆಗೆ ಆಗಮಿಸಿದ್ದ ವಕೀಲರು, ವಕೀಲ ನರಸಿಂಹಮೂರ್ತಿ, ದೊರೆಸ್ವಾಮಿ ಮಾಹಿತಿ ಹಕ್ಕು ಕಾಯ್ದೆ ಅಡಿ ಸಿಸಿಟಿವಿ ಒದಗಿಸುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಾಹಿತಿ ಹಕ್ಕು ಅಡಿ ನಮಗೆ ಠಾಣೆಯಲ್ಲಿ ಕಳೆದ 48 ಗಂಟೆ ಕಾಲ ರೆಕಾರ್ಡ್ ಆಗಿರುವ ಸಿಸಿಟಿವಿ ದೃಶ್ಯ ಒದಗಿಸುವಂತೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
![](https://pratidhvani.com/wp-content/uploads/2024/06/110943197-1024x576.webp)
ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಮನವಿ ಕೊಟ್ಟ ಬಳಿಕ ಮಾತನಾಡಿರುವ ವಕೀಲ ಉಮಾಪತಿ, ಆರೋಪಿ ದರ್ಶನ್ ಸೇರಿ ಉಳಿದ ಆರೋಪಿಗಳಿಗೆ ಸ್ಪೇಷಲ್ ಟ್ರೀಟ್ಮೆಂಟ್ ನೀಡುತ್ತಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಇವರ ಸತ್ಯಾಸತ್ಯತೆ ತಿಳಿಯಲು ನಾವು ಆರ್ಟಿಐ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದೀವಿ. ಸ್ಟೇಷನ್ ಸುತ್ತಮುತ್ತ 144 ಸೆಕ್ಷನ್ ಯಾಕೆ..? ನಿಷೇಧಾಜ್ಞೆ ಅವಶ್ಯಕತೆ ಏನಿದೆ..? ಶಾಮಿಯಾನ ಹಾಕಿರೋ ಉದ್ದೇಶ ಏನು ಅಂತ ವರದಿ ಕೊಡಲು ಮೂರು ರೀತಿಯ ಅರ್ಜಿಯಲ್ಲಿ ಕೇಳಿದ್ದೀವಿ ಎಂದಿದ್ದಾರೆ.
![](https://pratidhvani.com/wp-content/uploads/2024/06/1303448587_black-gradient-minimalistic-future-technology-youtube-banner-18-1_202401-2.jpg)
ಆರೋಪಿಗಳಾದ ದರ್ಶನ್ ಮತ್ತು ಉಳಿದ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್ಮೆಂಟ್ ಕೊಡ್ತಿದಾರೆ. ಇದ್ರ ಬಗ್ಗೆ ಎಲ್ಲಾ ಮಾಧ್ಯಮಗಳಲ್ಲಿ ಕೂಡ ವರದಿ ಆಗ್ತಿದೆ. ಇದ್ರ ಬಗ್ಗೆಯೂ ನಮಗೆ ಪೊಲೀಸರ ಮೇಲೆ ಅನುಮಾನ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಳಗಡೆ ಸಿಸಿಟಿವಿ ಅಳವಡಿಸರಬೇಕು. ಠಾಣೆಯೊಳಗಡೆ ಏನೆಲ್ಲಾ ನಡೆದಿದೆ ಎಲ್ಲಾ ಸಿಸಿಟಿವಿ ಕೇಳಿದ್ದೀವಿ. ಆರ್ಟಿಐ ಅರ್ಜಿ ಹಾಕಿ ನಾವು ಡೀಟೆಲ್ಸ್ ಕೇಳಿದ್ದೀವಿ ಅಂತಾನೂ ಹೇಳಿದ್ದಾರೆ.