ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಲಾಗಿದೆ ಎಂಬ ಆರೋಪ ಪ್ರಕರಣದಲ್ಲಿ ಇಂದು ತನಿಖೆಗೆ ತನಿಖಾಧಿಕಾರಿ ಪ್ರಥ್ವಿ ಎದುರು ಮಾಜಿ ಸಿಎಂ ಬಿಎಸ್ ವೈ (BSY) ಹಾಜರಾಗಲಿದ್ದಾರೆ.

ಆ ಮೂಲಕ ದೂರು ದಾಖಲಾದ ಮೂರು ತಿಂಗಳ ಬಳಿಕ ಬಿಎಸ್ ವೈ ತನಿಖೆಗೆ ಹಾಜರಾಗಲಿದ್ದಾರೆ. ಈ ಮುಂಚೆ ಪ್ರಕರಣದಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರ್ ಆಗಿ ವಾಯ್ಸ್ ಸ್ಯಾಂಪಲ್ (Voice sample) ಕೊಟ್ಟು ಹೋಗಿದ್ದ ಬಿಎಸ್ ಯಡಿಯೂರಪ್ಪ, ಇಂದು ಎರಡನೇ ಬಾರಿ ಹಾಜರಾಗುತ್ತಿದ್ದಾರೆ.
ಬಿಎಸ್ ಯಡಿಯೂರಪ್ಪ ವಿರುದ್ಧ ಮಾರ್ಚ್ 14 ರಂದು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಹೈಕೋರ್ಟ್ ನಲ್ಲಿ ಇತ್ತೀಚೆಗೆ, ಬಿಎಸ್ ವೈ ರನ್ನ ಬಂಧಿಸಬಾರದು ಎಂಬ ಆದೇಶ ಬಂದಿತ್ತು.