ಕಳೆದ ಎರಡು ವರ್ಷಗಳಿಂದ ಭೀಕರ ಕರೋನಾ ವೈರಸ್ ನಿಂದಾಗಿ ಉತ್ತರಾಖಂಡದ ಕೇದಾರನಾಥ ಚಾರ್ ಧಾಮ್ ಯಾತ್ರೆ ಸಂಪೂರ್ಣ ಸ್ಥಗಿತಗೊಂಡಿತ್ತು. ದೇಶದಲ್ಲಿ ಕರೋನಾ ವೈರಸ್ ಬಹುತೇಕ ಕಡಡಿಮೆಯಾದ ಕಾರಣ ಮತ್ತೆ ಯಾತ್ರಾರ್ಥಿಗಳಿಗೆ ಚಾರ್ ಧಾಮ್ ಯಾತ್ರೆ ಅವಕಾಶ ಕಲ್ಪಿಸಲಾಗಿದೆ. ಈಗೆ ಬಂದ ಯಾತ್ರಾರ್ಥಿಗಳಿಂದ ಪವಿತ್ರ ಕ್ಷೇತ್ರಗಳವಾದ ಕೇದಾರನಾಥ ಮಾರ್ಗಗಳು ಕಸದ ಸಮುದ್ರವಾಗಿದೆ. ಈ ಕುರಿತು ನಟಿ ರಮ್ಯಾ ಎಲ್ಲಿದೆ ಸ್ವಚ್ಛ ಭಾರತ ಎಂದು ಪ್ರಶ್ನಿಸಿರುವ ಮೂಲಕ ಮೋದಿ ಸರ್ಕಾರವನ್ನು ಕಾಲೆಳೆದಿದ್ದಾರೆ.
ಉತ್ತರಾಖಂಡದ ಚಾರ್ ಧಾಮ್ ಯಾತ್ರೆಗೆ ಈ ವರ್ಷ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಎರಡು ವರ್ಷಗಳ ನಂತರ ಯಾತ್ರಾರ್ಥಿಗಳಿಗೆ ಮತ್ತೆ ಚಾರ್ ಧಾಮ್ ತೆರೆಯಲಾಗಿದೆ. ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುವುದರಿಂದ ಪವಿತ್ರ ಕ್ಷೇತ್ರಗಳ ಮಾರ್ಗಗಳು ಕಸದ ಸಮುದ್ರವಾಗಿರು ಕುರಿತು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಭವ್ಯವಾದ ಹಿಮದಿಂದ ಆವೃತವಾದ ಪರ್ವತಗಳನ್ನು ಹೊಂದಿರುವ ದೊಡ್ಡ ಭೂಪ್ರದೇಶದಲ್ಲಿ ಹರಡಿರುವ ಕಸದ ರಾಶಿಯ ಫೋಟೋವನ್ನು ANI ಟ್ವೀಟ್ ಮಾಡಿದೆ. ಚಾರ್ ಧಾಮ್ ಯಾತ್ರೆಗೆ ಭಕ್ತರು ಹರಿದು ಬರುತ್ತಿರುವ ಕಾರಣ ಕೇದಾರನಾಥಕ್ಕೆ ತೆರಳುವ ರಸ್ತೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿ ರಾಶಿ ಬಿದ್ದಿದೆ ಎಂದು ಸುದ್ದಿಸಂಸ್ಥೆಯು ಫೋಟೋಗೆ ಶೀರ್ಷಿಕೆ ನೀಡಿದೆ.
ಗರ್ವಾಲ್ ಸೆಂಟ್ರಲ್ ಯೂನಿವರ್ಸಿಟಿಯ ಭೌಗೋಳಿಕ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಎಸ್.ನೇಗಿ ಅವರು ಎಎನ್ಐ ಜೊತೆ ಮಾತನಾಡಿದ್ದು, “ಕೇದಾರನಾಥದಂತಹ ಸೂಕ್ಷ್ಮ ಸ್ಥಳದಲ್ಲಿ ಪ್ಲಾಸ್ಟಿಕ್ ಕಸದ ರಾಶಿಯಿಂದ ನಮ್ಮ ಪರಿಸರಕ್ಕೆ ಅಪಾಯಕಾರಿ. ಇದು ಭೂಕುಸಿತ, ಸವೆತಕ್ಕೆ ಕಾರಣವಾಗುತ್ತದೆ. ನಾವು 2013 ರ ದುರಂತವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಜೂನ್ 2013 ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಗಳು ಮತ್ತು ಭೂಕುಸಿತಗಳನ್ನು ಉಂಟುಮಾಡಿದ ಮೇಘಸ್ಫೋಟವನ್ನು ಉಲ್ಲೇಖಿಸಿ ಪ್ರೊ.ನೇಗಿ ಅವರು, ಭಾರತದ ಅತ್ಯಂತ ಕೆಟ್ಟ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. HAPPRC ಯ ನಿರ್ದೇಶಕ ಪ್ರೊ.ಎಂಸಿ ನೌಟಿಯಾಲ್, ಪ್ರವಾಸಿಗರ ಹೆಚ್ಚಳದಿಂದಾಗಿ ಪ್ಲಾಸ್ಟಿಕ್ ಕಸವು ಹೆಚ್ಚಾಗಿದೆ, ನಮ್ಮಲ್ಲಿ ಸರಿಯಾದ ನೈರ್ಮಲ್ಯ ಸೌಲಭ್ಯಗಳಿಲ್ಲ” ಎಂದು ಹೇಳಿದ್ದಾರೆಂದು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
COVID-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಚಾರ್ ಧಾಮ್ ಯಾತ್ರೆ ನಡೆಯಲಿಲ್ಲ. ಈ ವರ್ಷ, ಮೇ 3 ರಂದು ಅಕ್ಷಯ ತೃತೀಯ ದಿನದಂದು ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಪೂಜಕರಿಗೆ ತೆರೆಯಲಾಯಿತು.