ಡಿಸಿಎಂ ಡಿಕೆಶಿ (Dk shivakumar) ವಿರುದ್ಧ ನೂರು ಕೋಟಿ ಆಫರ್ ಮಾಡಿದ ವಕೀಲ ದೇವರಾಜೇಗೌಡ (Devarajegowda) ವಿರುದ್ಧ ಸಚಿವ ಚೆಲುವರಾಯಸ್ವಾಮಿ (Cheluvaraya swamy) ವಾಗ್ದಾಳಿ ನಡೆಸಿದ್ದಾರೆ. ಜನರ ಗಮನ ಬೇರೆಡೆಗೆ ಸೆಳೆಯಲು ವಕೀಲ ದೇವರಾಜೇಗೌಡ ಸುಳ್ಳು ಆರೋಪ ಮಾಡಿದ್ದಾರೆಂದು ಎಂದು ಕಿಡಿಕಾರಿದ್ದಾರೆ.
![](https://pratidhvani.com/wp-content/uploads/2024/05/IMG_7745.jpeg)
ನನ್ನ ಹಾಗೂ ಡಿ.ಕೆ.ಶಿವಕುಮಾರ್, ಕೃಷ್ಣಭೈರೇಗೌಡ (Krishna bhiregowda), ಪ್ರಿಯಾಂಕ ಖರ್ಗೆ (Priyanka kharge) ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ. ದೇವರಾಜೇಗೌಡ ಮಾತುಗಳಿಗೆ ಮಾನ್ಯತೆ ಕೊಡುವ ಅಗತ್ಯವಿಲ್ಲ. ದೇವರಾಜೇಗೌಡ ವಿರುದ್ಧ ಮಾನ ನಷ್ಟ ಮೊಕ್ಕದ್ದಮೆ ದಾಖಲಿಸಲು ನಿರ್ಧಾರ ಮಾಡಿದ್ದೇನೆ. ಪ್ರಕರಣದ ಬಗ್ಗೆ ಎಸ್ಐಟಿ (SIT) ತನಿಖೆಯಿಂದ ಸತ್ಯತೆ ಹೊರ ಬರಲಿದೆ ಎಂದು ಹೇಳಿದ್ದಾರೆ.
ಪೆನ್ಡ್ರೈವ್ (Pendrive) ಪ್ರಕರಣದಲ್ಲಿ ಎಸ್ಐಟಿ ವಶದಲ್ಲಿರೋ ವಕೀಲ ದೇವರಾಜೇಗೌಡ, ಹೊಸ ಬಾಂಬ್ ಸಿಡಿಸಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನನ್ನು ಕರೆಸಿ ಮಾತನಾಡಿದ್ರು. ಪ್ರಕರಣದಲ್ಲಿ ನೀನು ಹೆಚ್ಡಿಕೆ (HDK) ವಿರುದ್ಧ ಆರೋಪ ಮಾಡು. ಪೆನ್ಡ್ರೈವ್ ಅನ್ನು ಕುಮಾರಸ್ವಾಮಿ (Kumaraswamy) ಹಂಚಿದ್ರು ಅಂತ ಹೇಳಲು 100 ಕೋಟಿ ರೂಪಾಯಿ ಆಫರ್ ಕೊಟ್ಟರು ಎಂದು ಹೇಳಿದ್ದರು.
ಡಿ.ಕೆ ಶಿವಕುಮಾರ್ ಸೇರಿ ಸಚಿವರು, ಶಾಸಕರ ಹೆಸ್ರು ಉಲ್ಲೇಖ ಮಾಡಿದ್ದ ದೇವರಾಜೇಗೌಡ, ಆ ಪೈಕಿ ಸಿವ ಚೆಲುವರಾಯಸ್ವಾಮಿ ಹೆಸರನ್ನೂ ಎಳೆದು ತಂದಿದ್ರು