![](https://pratidhvani.com/wp-content/uploads/2024/05/pro.webp)
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ತನಿಖಾ ತಂಡದ ಅಧಿಕಾರಿಗಳಿಗೆ ಎಸ್ಐಟಿ ಚೀಫ್ ಬಿ.ಕೆ.ಸಿಂಗ್ ಖಡಕ್ ವಾರ್ನಿಂಗ್ ಮಾಡಿದ್ದಾರೆ. ತನಿಖಾ ತಂಡಕ್ಕೆ ತನಿಖಾ ಮಾಹಿತಿ ಸೋರಿಕೆಯಾಗದಂತೆ ಕ್ರಮ ವಹಿಸಲು ಸೂಚನೆ ಕೊಟ್ಟಿದ್ದಾರೆ.
![](https://pratidhvani.com/wp-content/uploads/2024/05/mediaimgblog-1.jpg)
ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವ ಮುನ್ನ, ವಿಚಾರಣೆಯ ನಂತರ ಕೆಲ ಮಾಹಿತಿ ಸೋರಿಕೆಯಾದ ಹಿನ್ನಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಮಾಧ್ಯಮಗಳಲ್ಲಿ ತನಿಖೆಯ ಇಂಚಿಂಚು ಮಾಹಿತಿ ಪ್ರಸಾರ ಆಗ್ತಿದೆ. ಇದನ್ನು ನೀಡುತ್ತಿರುವವರು ಯಾರು ಎಂದು ಗರಂ ಆಗಿದ್ದಾರೆ ಎನ್ನಲಾಗಿದೆ.
![](https://pratidhvani.com/wp-content/uploads/2024/05/hqdefault-1.jpg)
ಇನ್ಮುಂದೆ ಮಾಧ್ಯಮಗಳಿಗೆ ಯಾವುದೇ ಕಾರಣಕ್ಕೂ ತನಿಖಾ ಮಾಹಿತಿ ಸೋರಿಕೆಯಾಗದಂತೆ ಕೆಲಸ ಮಾಡಿ ಎಂದಿರುವ ಬಿ.ಕೆ ಸಿಂಗ್, ಒಂದು ವೇಳೆ ತನಿಖಾ ಮಾಹಿತಿ ಸೋರಿಕೆಯಾದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರಂತೆ.
![](https://pratidhvani.com/wp-content/uploads/2024/05/prajwal-revanna-1714978996-1024x576.jpg)
ವಿಡಿಯೋ ವೈರಲ್ ಪ್ರಕರಣ ಸಂಬಂಧ ತನಿಖೆಗೆ 6 ಪ್ರತ್ಯೇಕ ತಂಡಗಳಾಗಿ ವಿಭಾಗ ಮಾಡಿದ್ದು, ಒಂದು ತಂಡದ ತನಿಖೆಯ ಮಾಹಿತಿಯನ್ನು ಮತ್ತೊಂದು ತನಿಖಾ ತಂಡದ ಜೊತೆ ಚರ್ಚಿಸುವಂತಿಲ್ಲ. ಏನೇ ಮಾಹಿತಿ ಇದ್ದರೂ ಸಹ ತನಿಖಾ ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದ್ದಾರೆ.