ಲೋಕಸಭೆಯಲ್ಲಿ ಆಗಿರುವ ಭದ್ರತಾ ಲೋಪ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 2001ರ ಡಿಸೆಂಬರ್ 13ರಂದು ಭಾರತದ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ನಡೆದ ದಿನವೇ ಈ ಕೃತ್ಯ ನಡೆದಿರುವುದು ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ.
‘ನಿರಂಕುಶವಾದ ನಡೆಯಲ್ಲ’ ಎಂದು ಆ ದುಷ್ಕರ್ಮಿಗಳು ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಕೃತ್ಯ ನಡೆದ ವೇಳೆ ಸದನದಲ್ಲಿ ಹಾಜರಿದ್ದ ಸಂಸದರು ಹೇಳಿದ್ದಾರೆ.
ಕೃತ್ಯ ಸಂಬಂಧ ಮಹಾರಾಷ್ಟ್ರದ ಲಾತೂರಿನ ಅಮೋಲ್ ಮತ್ತು ಹರಿಯಾಣದ ಹಿಸ್ಸಾರ್ನ ನೀಲಂ ಎಂಬ ಮಹಿಳೆಯನ್ನು, ಮತ್ತು ಸಾಗರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್ ಭವನದ ಪಕ್ಕದಲ್ಲಿರುವ ಸಾರಿಗೆ ಭವನದಲ್ಲಿ ಮತ್ತಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಲೋಕಸಭೆಯೊಳಗೆ ಕೃತ್ಯ ನಡೆಯುವ ವೇಳೆ ರಾಜೇಂದ್ರ ಅಗರ್ವಾಲ್ ಅವರು ಸ್ಪೀಕರ್ ಪೀಠದಲ್ಲಿ ಕುಳಿತಿದ್ದರು. ಕೃತ್ಯ ನಡೆಯುವ ವೇಳೆ ಪಶ್ಚಿಮ ಬಂಗಾಳದ ಬಿಜೆಪಿ ಸಂಸದರು ಭಾಷಣಕ್ಕೆ ಎದ್ದು ನಿಂತಿದ್ದರು.