ಭೀಮಾತೀರವೆಂದರೆ ಸಾಕು ರಕ್ತಪಾತಕ್ಕೆ ಕುಖ್ಯಾತಿಯನ್ನು ಪಡೆದಿರೋ ಪ್ರದೇಶ. ಇಂಥ ಪ್ರದೇಶದಲ್ಲಿ ಅದರಲ್ಲೂ ಒಂದು ಸರ್ಕಾರಿ ಶಾಲೆಯನ್ನು ಹಸಿರು ಶಾಲೆಯನ್ನಾಗಿ, ಪರಿಸರ ಸ್ನೇಹಿ ಶಾಲೆಯನ್ನಾಗಿ ನಿರ್ಮಾಣ ಮಾಡಿದ್ದು ಇಲ್ಲಿನ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರಿಶ್ರಮವಾಗಿದೆ. ಇಲ್ಲಿನ ಸುತ್ತಮುತ್ತಲ ಖಾಸಗಿ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡುವ ವಿದ್ಯಾರ್ಥಿಗಳು ಖಾಸಗಿ ಶಾಲೆ, ಆದರ್ಶ ವಿದ್ಯಾಲಯ ಸೇರಿದಂತೆ ಇತರೆ ಶಾಲೆಗಳನ್ನು ಬಿಟ್ಟು ನಾದ ಕೆಡಿ ಗ್ರಾಮದಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಪೋಷಕರು ಸಹ ತಮ್ಮ ಮಕ್ಕಳು ಇಲ್ಲಿಯೇ ವಿದ್ಯಾಬ್ಯಾಸ ಮಾಡುವಂತಾಗಲಿ ಎಂದು ದುಂಬಾಲು ಬಿದ್ದಿದ್ದಾರೆ. 2007 ರಲ್ಲಿ 30 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ ಈಗಾ ಒಂದೊಂದು ತರಗತಿಯಲ್ಲಿ 140 ಕ್ಕೂ ಆಧಿಕ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ
https://youtube.com/live/zK_8kusfh_Q
Read moreDetails