ರಾಜ್ಯದಲ್ಲಿ ಸಿಎಂ (Cm) ಬದಲಾವಣೆ ಕೂಗು ದಿನೇ ದಿನೇ ಹೆಚ್ಚಾಗುತ್ತಿರುವ ನಡುವೆ, ಗೃಹ ಸಚಿವ ಡಾ.ಜಿ ಪರಮೇಶ್ವರ್ (Dr G Parameshwar) ಬೆಂಬಲಿಗರು ಮುಂದಿನ ಸಿಎಂ ಪರಮೇಶ್ವರ್ ಎಂದು ಘೋಷಣೆ ಕೂಗಿದ್ದಾರೆ. ಪರಮೇಶ್ವರ್ ಅವರ ಸದಾಶಿವನಗರದ (Sadashiva nagar) ನಿವಾಸದ ಬಳಿ ಈ ಗಟನೆ ನಡೆದಿದೆ.
ಗೃಹಸಚಿವರ ನಿವಾಸದ ಬಳಿ ಜಮಾಯಿಸಿದ್ದ ಬೆಂಬಲಿಗರು, ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಸಾಹೇಬ್ರಿಗೆ ಜಯವಾಗಲಿ ಅಂತ ಘೋಷಣೆ ಕೂಗಿದ್ರು. ಈ ವೇಳೆ ಸುಮ್ಮನೆ ಇರಿ ಎಂದು ಪರಮೇಶ್ವರ್ ಬೆಂಬಲಿಗರನ್ನ ಸುಮ್ಮನಾಗಿಸಿದ್ರು.
ಇನ್ನೂ ಎಐಸಿಸಿ ಅಧ್ಯಕ್ಷರಿಗೆ (AICC president) ಕಾಂಗ್ರೆಸ್ ಹಿರಿಯ ನಾಯಕರು ಪತ್ರ ಬರೆದ ವಿಚಾರವಾಗಿ ಮಾತನಾಡ ಅವರು, ಈಗಿನ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆ ಚರ್ಚೆ ಅನಗತ್ಯ. ಈ ಸಂಬಂಧ ಹೇಳಿಕೆ ಕೊಟ್ಟವರ ಬಗ್ಗೆ ಅಧ್ಯಕ್ಷರು ಗಮನ ಹರಿಸ್ತಾರೆ ಎಂದು ಹೇಳಿದ್ರು