ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳಿಗೆ ವಾಟರ್ ಬೆಡ್, ವೀಲ್ ಚೇರ್,ಏರ್ ಬೆಡ್, ಎಂಆರ್ ಕಿಟ್ ಕ್ರಚಸ್ ಹಾಗೂ ಸಿಪಿ ಚೇರ್ ಗಳನ್ನು ವಿತರಿಸಲಾಯಿತು.
ಮೈಸೂರು :- ತಾಲ್ಲೂಕು ಆಡಳಿತ, ತಾಲೂಕು ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2022 ಡಿಸೆಂಬರ್ 25ರಂದು ಶ್ರೀರಾಂಪುರದ ಮಧುವನ ಲೇಔಟ್ ನಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ರವರು, ನಮ್ಮ ಕ್ಲಿನಿಕ್ ಇಂದು ಬಹಳ ವಿಶಾಲವಾಗಿ ಹಾಗೂ ವ್ಯವಸ್ಥಿತವಾಗಿದೆ, ಇತರೆ ಆರೋಗ್ಯ ಕೇಂದ್ರಗಳಂತೆ ನಮ್ಮ ಕ್ಲಿನಿಕ್ ಆಗುವುದು ಬೇಡ, ಈ ಮೂಲಕ ವಿಶೇಷ ಚೇತನ ಮಕ್ಕಳ ಮೇಲಿರುವ ಅನುಕಂಪ ಕಾಳಜಿ ಹೀಗೆ ಮುಂದುವರೆಯಲಿ ಎಂದರು.
ಕೃಷ್ಣರಾಜ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಎಸ್ಎ ರಾಮದಾಸ್ ರವರು ಮಾತನಾಡಿ ನಮ್ಮ ಕ್ಲಿನಿಕ್ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ ಇದು ವರ್ಷವಿಡೀ ಇರುವಂತದ್ದು, ಈ ಕಾರ್ಯಕ್ರಮವನ್ನು ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ರವರ ಹುಟ್ಟು ಹಬ್ಬದ ದಿನದಂದು ನಡೆಸುತ್ತಿರುವುದು ಬಹಳ ಅರ್ಥಪೂರ್ಣ. ಅಟಲ್ ಬಿಹಾರಿ ವಾಜಪೇಯಿ ರವರು ಸಾಂವಿಧಾನಿಕವಾಗಿ ವಿಶೇಷ ಚೇತನರಿಗೆ ಮೊದಲಿಗೆ ಸೌಲಭ್ಯ ತಂದರು, ೪೫ ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಮೊದಲಿಗೆ ನಿರ್ಮಿಸಿದರು, ಜೈ ವಿಜ್ಞಾನ್ ಎನ್ನುತ್ತಾ ದೇಶಕ್ಕೆ ತಂತ್ರಜ್ಞಾನವನ್ನು ಸ್ವಾಗತಿಸಿದರು ಎಂದು ಸಂತಸ ವ್ಯಕ್ತಪಡಿಸುತ್ತಾ, ಈ ಕ್ಲಿನಿಕ್ ನನ್ನ ಮನೆ ನನ್ನ ಡಾಕ್ಟರ್ ಎಂಬ ಭಾವನೆಯನ್ನು, ಔಷಧಿಗೂ ಮುನ್ನ ಆಪ್ತ ಸಮಾಲೋಚನೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳಿಗೆ ವಾಟರ್ ಬೆಡ್, ವೀಲ್ ಚೇರ್,ಏರ್ ಬೆಡ್, ಎಂಆರ್ ಕಿಟ್ ಕ್ರಚಸ್ ಹಾಗೂ ಸಿಪಿ ಚೇರ್ ಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ರವರನ್ನು ಒಳಗೊಂಡಂತೆ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.