• Home
  • About Us
  • ಕರ್ನಾಟಕ
Friday, November 21, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಸಾವಿನ ಬಳಿಕ ಕರುನಾಡಿನಲ್ಲಿ ಚರಿತ್ರೆ ಬರೆದ ಅಪ್ಪು : ಹೆಚ್ಚಿದ ನೇತ್ರದಾನ : ಸಾವಿನ ಬಳಿಕವೂ ಜಗತ್ತು ನೋಡಲಿರುವ ಅಪ್ಪು ಕಣ್ಣುಗಳು!

ಕರ್ಣ by ಕರ್ಣ
November 14, 2021
in ಕರ್ನಾಟಕ
0
ಸಾವಿನ ಬಳಿಕ ಕರುನಾಡಿನಲ್ಲಿ ಚರಿತ್ರೆ ಬರೆದ ಅಪ್ಪು : ಹೆಚ್ಚಿದ ನೇತ್ರದಾನ : ಸಾವಿನ ಬಳಿಕವೂ ಜಗತ್ತು ನೋಡಲಿರುವ ಅಪ್ಪು ಕಣ್ಣುಗಳು!
Share on WhatsAppShare on FacebookShare on Telegram

ಇನ್ನು ವಸಂತಗಳೆಷ್ಟು ದಾಟಿದರೂ ಅಪ್ಪು ಜೀವಂತವಾಗಿರಲಿದ್ದಾರೆ. ವಿಧಿಯ ಬರಹವನ್ನೇ ಯುವರತ್ನ ಪುನೀತ್ ರಾಜ್‌ ಕುಮಾರ್‌ ತನ್ನ ಸಾವಿನ ಬಳಿಕ ತಿದ್ದಿ ಬರೆದಂತಿದೆ. ಹೌದು, ಅಪ್ಪು ಸಾವಿನ ಬಳಿಕ ತನ್ನ ಕಣ್ಣು ನಾಲ್ಕು ಜನರ ಬದುಕಿಗೆ ಬೆಳಕಾಗಲಿ ಎಂದು ಕೊಟ್ಟು ಹೋದರು. ಆದರೀಗ ಅದೇ ಅಪ್ಪುವಿನ ಕಣ್ಣು ನಾಲ್ಕಲ್ಲ ಹತ್ತಕ್ಕೂ ಹೆಚ್ಚು ಜನರ ಬದುಕಿಗೆ ಬೆಳಕು ಸುರಿಯಲಿದೆ. ಅಂಥದ್ದೊಂದು ಅಪರೂಪದ ಪ್ರಯತ್ನಕ್ಕೆ ವೈದ್ಯ ಲೋಕ ಮುಂದಾಗಿದೆ.

ADVERTISEMENT

14 ಅಂಧರಿಗೆ ಬೆಳಕು ನೀಡಲಿವೆ ಅಪ್ಪು ಕಂಗಳು.!!

ಡಾ.ರಾಜ್ಕುಮಾರ್ ಅಂದರೆ ಕರುನಾಡ ಕಂಡ ಬಂಗಾರದ ಮನುಷ್ಯ. ತಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಚಿತ್ರಗಳು ಹಾಗೂ ಸರಳ ವ್ಯಕ್ತಿತ್ವದಿಂದಲೇ ಕರುನಾಡ ಕಣ್ಮಣಿಯಾದರು. ನಿಧನದ ಬಳಿಕ ಕಣ್ಣು ಕೊಟ್ಟು ಕಣ್ಣಪ್ಪನಾದರು. ಅಪ್ಪಾಜಿಯಂತೆ  ಅಪ್ಪು ಕೂಡ ಕಣ್ಣು ನೀಡಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ನಾಲ್ವರು ಅಂಧರ ಬಾಳಿಗೆ ಬೆಳಕಾದರು.

ಅಪ್ಪು ಅವರ ಎರಡು ಕಣ್ಣುಗಳು,4 ಜನ ಅಂಧರ ಬಾಳಿಗೆ ಬೆಳಕು ನೀಡಿದೆ ಅನ್ನೋ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ಅದಕ್ಕಿಂತ ದೊಡ್ಡ ಸುದ್ದಿಯೊಂದು ಬಂದಿದೆ. ಇದು ಅಪ್ಪು ಅಭಿಮಾನಿಗಳಷ್ಟೇ ಅಲ್ಲ, ಇಡೀ ಕರುನಾಡೇ ಹೆಮ್ಮೆಪಡಬೇಕಾದ ಸಂಗತಿ..

ದೇಶದಲ್ಲೇ ಮೊದಲ ಸಲ ವಿನೂತನ ಪ್ರಯೋಗಕ್ಕೆ ಮುನ್ನುಡಿ.!!

ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಂತಹದ್ದೊಂದು ವಿನೂತನ ಪ್ರಯತ್ನ ನಡೆಯುತ್ತಿದೆ. ಅದು ಕರುನಾಡಿನ ರಾಜಕುಮಾರ ಅಪ್ಪು ಅವರಿಂದಲೇ ಆರಂಭವಾಗುತ್ತಿದೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ.  ಒಂದೇ ಕಣ್ಣಿನ ವಿವಿಧ ಭಾಗಗಳನ್ನು ವಿವಿಧ ಮಂದಿಗೆ ನೀಡುವ ಹೊಸ ಪ್ರಯತ್ನ ಮಾಡಲು ನಾರಾಯಣ ನೇತ್ರಾಲಯದ ತಜ್ಞರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ಅವರ ಕಣ್ಣುಗಳಿಂದ ಇನ್ನೂ 10 ಅಂಧರಿಗೆ ದೃಷ್ಟಿ ಸಿಗಲಿದೆ. ಮುಂದಿನ‌10 ದಿನಗಳಲ್ಲಿ ಕನಿಷ್ಟ 10 ಅಂಧರಿಗೆ ದೃಷ್ಟಿ ನೀಡುವ ವಿನೂತನ ಆಪರೇಷನ್ ನಡೆಸಲು ಸಜ್ಜಾಗಿದ್ದಾರೆ ವೈದ್ಯರು. ಇದು ಯಶಸ್ವಿಯಾದರೆ ರಾಜರತ್ನ ಅಪ್ಪು ಮತ್ತೊಂದು ವಿನೂತನ ದಾಖಲೆಯ ಪುಟ ಸೇರಲಿದ್ದಾರೆ.

ಅಪ್ಪು ಸಾವಿನ ಬಳಿಕ 6 ಸಾವಿರ ನೋಂದಣೆ, 78 ಜನರಿಂದ ನೇತ್ರದಾನ !

ಪುನೀತ್ ಅವರು ಬರೀ ನಟರಾಗಿರಲಿಲ್ಲ. ಅವರ ಸಮಾಜ ಸೇವೆ, ಅವರ ಸರಳ ಆದರ್ಶ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅದನ್ನ ಇಡೀ ಕರುನಾಡು ಅನುಸರಿಸುತ್ತಿದ್ದು, ಈ ಮೂಲಕ ಅಪ್ಪು ಅವರನ್ನ ಜೀವಂತವಾಗಿಸಿದ್ದಾರೆ.

 

ಪುನೀತ್ ಅವರನ್ನೇ ಸ್ಫೂರ್ತಿಯಾಗಿಸಿಕೊಂಡು, ಯುವಕರು ನೇತ್ರದಾನ ಮಾಡಲು ಮುಂದೆ ಬರ್ತಿದ್ದಾರೆ. ಅಕ್ಟೋಬರ್ 29 ರಿಂದ ಇಲ್ಲಿಯವರೆಗೆ ದಾಖಲೆಯ 6 ಸಾವಿರ ಜನ ನೇತ್ರದಾನಕ್ಕೆ ನೋಂದಣಿ ಮಾಡಿದ್ರೆ, ಭರ್ತಿ 78 ಜನ ನೇತ್ರದಾನ ಮಾಡಿದ್ದಾರಂತೆ.

ತಮ್ಮ ಸಿನಿಮಾಗಳ ಮೂಲಕ ಯುವಪೀಳಿಗೆಗೆ ಸ್ಫೂರ್ತಿ ತುಂಬಿದ್ದ ಪುನೀತ್, ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಇಡೀ ಕರುನಾಡಿನ ಕಣ್ಮಣಿಯಾಗಿದ್ದಾರೆ. ಸಾವಿನ ಬಳಿಕ ಅಪ್ಪಾಜಿಯಂತೆ ಕಣ್ಣು ಕೊಟ್ಟು ಎಲ್ಲರಿಗೂ ಸ್ಫೂರ್ತಿಯಾಗಿದ್ದ ಅಪ್ಪು, 14 ಜನ ಅಂಧರ ಬಾಳಿಗೆ ಬೆಳಕಾಗುವ ಮೂಲಕ ಚಿರಸ್ಥಾಯಿಯಾಗಿದ್ದಾರೆ. ನಿಜಕ್ಕೂ ಅಪ್ಪು ಅಜರಾಮರ ಎನ್ನುವುದು ಸುಳ್ಳಲ್ಲ. ಅಭಿಮಾನಿಗಳ ಮೂಲಕ ಅಪ್ಪು ಮುಂದಕ್ಕೆ ಈ ಜಗತ್ತು ನೋಡಲಿದ್ದಾರೆ ಎಂಬುವುದು ವಾಸ್ತವ.

Tags: PuneethRajkumar #Death #RIPPowerstar #RAkshithaPrem #KFI #Karnataka #Pratidhvani
Previous Post

ಸಾವಿರಾರು ಕೋಟಿ ಮೊತ್ತದ ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ಸಿಸಿಬಿ ಮೌನ ವಹಿಸಿದ್ದು ಯಾಕೆ?

Next Post

471ಕ್ಕೆ ಏರಿದ ದೆಹಲಿಯ AQI ಮಟ್ಟ : ಪಟಾಕಿ, ಕೃಷಿ ತ್ಯಾಜ್ಯ ಸುಡುವಿಕೆಯೇ ಕಾರಣ

Related Posts

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
0

ಬೆಂಗಳೂರಿನ ಐತಿಹಾಸಿಕ ಕಡಲೇಕಾಯಿ ಪರಿಷೆ ಪ್ರತಿ ಬಾರಿಯಂತೆ ಈ ಸಲವೂ ಕೂಡ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಪರಿಷ ಹಿನ್ನೆಲೆಯಲ್ಲಿ ಬಸವನಗುಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ....

Read moreDetails
ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

November 21, 2025
ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

November 21, 2025
ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್

ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್

November 21, 2025
ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಕೇಸ್: ಆಂಧ್ರದಲ್ಲಿ 5 ಕೋಟಿ ವಶಕ್ಕೆ‌

ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಕೇಸ್: ಆಂಧ್ರದಲ್ಲಿ 5 ಕೋಟಿ ವಶಕ್ಕೆ‌

November 21, 2025
Next Post
471ಕ್ಕೆ ಏರಿದ ದೆಹಲಿಯ AQI ಮಟ್ಟ : ಪಟಾಕಿ, ಕೃಷಿ ತ್ಯಾಜ್ಯ ಸುಡುವಿಕೆಯೇ ಕಾರಣ

471ಕ್ಕೆ ಏರಿದ ದೆಹಲಿಯ AQI ಮಟ್ಟ : ಪಟಾಕಿ, ಕೃಷಿ ತ್ಯಾಜ್ಯ ಸುಡುವಿಕೆಯೇ ಕಾರಣ

Please login to join discussion

Recent News

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು
Top Story

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

by ಪ್ರತಿಧ್ವನಿ
November 21, 2025
ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ
Top Story

ಹೈಕಮಾಂಡ್‌ ಮಾತನ್ನು ನಾನೂ ಕೇಳಬೇಕು..ಡಿ.ಕೆ ಶಿವಕುಮಾರೂ ಕೇಳಬೇಕು-ಸಿದ್ದರಾಮಯ್ಯ

by ಪ್ರತಿಧ್ವನಿ
November 21, 2025
ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**
Top Story

ಮಹಿಷಾಸುರ ವೇಷ ಕಳಚುತ್ತಿದ್ದಂತೆ ಹೃದಯಾಘಾತ: ಯಕ್ಷಗಾನ ಕಲಾವಿದ ಸಾ**

by ಪ್ರತಿಧ್ವನಿ
November 21, 2025
ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್
Top Story

ನನಗೆ 5 ವರ್ಷ ಅವಕಾಶ ಕೊಟ್ಟಿದ್ದಾರೆ ಅಂತಾ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ: ಪರಮೇಶ್ವರ್

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

November 21, 2025
ನಟ, ನಿರೂಪಕ  ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

ನಟ, ನಿರೂಪಕ ಕಿಚ್ಚ ಸುದೀಪ್‌ ವಿರುದ್ಧ ದೂರು ದಾಖಲು

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada