
ಜಿಲ್ಲೆಯ ಕುಶಾಲನಗರ ಗೋಣಿಕೊಪ್ಪ ವಿರಾಜಪೇಟೆ ಕುಶಾಲನಗರದಲ್ಲಿ “ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಅಪರೇಟಿವ್ ಸೊಸೈಟಿ ಜಿಲ್ಲೆಯ ವಿವಿಧಡೆ ಶಾಖೆಗಳನ್ನು ತೆರೆದು ಗ್ರಹಕರಿಗೆ ವಂಚಿಸಿ ನಂತರ ಬಿಗಮುದ್ರೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಗ್ರಾಹಕರಿಂದ ವಿವಿಧ ಕಡೆ ದೂರು ದಾಖಲಾಗಿತ್ತು . ಮಲಬಾರ್ ಮಲ್ಟಿ ಸ್ಟೇಟ್ ಆಗೋ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ನ ಮುಖ್ಯಸ್ಥರಾದ ರಾಹುಲ್ ಚಕ್ರಪಾಣಿ ಹಾಗೂ ಸಿಇಓ ಆದ ಸನ್ನಿ ಅಬ್ರಹಾಂ & ಇತರರು ಸೇರಿ ವಂಚನೆ ಮಾಡಿರುವ ಕುರಿತು ಈಗಾಗಲೇ ಕುಶಾಲನಗರ, ಗೋಣಿಕೊಪ್ಪ ಹಾಗೂ ವಿರಾಜಪೇಟೆ ಠಾಣೆಗಳಲ್ಲಿ ದೂರು ದಾಖಲೆಗೊಂಡಿದ್ದು ಇದರ ಅನ್ವಯ ಗೋಣಿಕೊಪ್ಪಲು ಪೊಲೀಸರು ಆರೋಪಿಗಳ ಜಾಡನ್ನು ಹಿಡಿದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ತೆರಳಿ, ಸಂಸ್ಥೆಯ ಸಿ ಇ ಓ ಸನ್ನಿ ಅಬ್ರಹಾಂ (58)ರವರನ್ನು ಬಂಧಿಸಿ ಗೋಣಿಕೊಪ್ಪಲಿಗೆ ಕರೆ ತರಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಲಬಾರ್ ಮಲ್ಟಿಸ್ಟೇಟ್ ಆಗೋ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ಕಛೇರಿ ತೆರೆದು ಸುತ್ತಮುತ್ತಲಿನ ಹಲವು ಗ್ರಾಹಕರಿಂದ ಪಿಗ್ನಿ ಕಲೆಕ್ಷನ್, ಆರ್.ಡಿ. ಹಾಗೂ ಬಾಂಡ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹಣ ಹಿಂತಿರುಗಿಸದೆ ಕಛೇರಿಯನ್ನು ಮುಚ್ಚಿ ಸಾರ್ವಜನಿಕರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿದ್ದರು.
ಇತ್ತೀಚಿಗೆ ಕೊಡಗಿನ ಬೇರೆ ಬೇರೆ ಪಟ್ಟಣಗಳಲ್ಲಿ ಕೇರಳ ರಾಜ್ಯ ಮೂಲದ ವ್ಯಕ್ತಿಗಳು ಸಹಕಾರಿ ಸಂಸ್ಥೆಗಳ ಹೆಸರಿನಲ್ಲಿ ಫೈನಾನ್ಸ್ ಹಾಗೂ ಬ್ಯಾಂಕುಗಳನ್ನು ತೆರೆದು ಇಲ್ಲಿನ ಗ್ರಾಹಕರಿಗೆ ಭದ್ರತಾ ಠೇವಣಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಬಡ್ಡಿಯನ್ನು ನೀಡುವ ಆಮಿಷವೊಡ್ಡಿ, ಪಿಗ್ಮಿ ಸಾಲ, ಚಿನ್ನಾಭರಣ ಸಾಲಾಗಳನ್ನು ನೀಡಲಾಗುವುದು ಎಂದು ಘೋಷಿಸುವ ಮೂಲಕ ಸ್ಥಳೀಯರಿಗೆ ಬ್ಯಾಂಕಿನಲ್ಲಿ ಉದ್ಯೋಗವನ್ನು ಕಲ್ಪಿಸಿ ಒಂದೆರಡು ವರ್ಷಗಳಲ್ಲಿ ಬೀಗ ಮುದ್ರೆ ಜಡಿದು ಬ್ಯಾಂಕುಗಳನ್ನು ಮುಚ್ಚಿ ಹೋಗುವ ಲಕ್ಷಣಗಳು ಕಂಡುಬರುತ್ತವೆ.
ಜಿಲ್ಲೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಕೇರಳ ಮೂಲದ ಫೈನಾನ್ಸ್ ಕಂಪನಿಗಳ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ಪಡೆದುಕೊಂಡು ಸಂಸ್ಥೆಗಳ ಬಗೆ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುವುದು ಸೂಕ್ತವಾಗಿದೆ.