
ಬೀದರ್ನಲ್ಲಿ ಬಿಜೆಪಿ ಜನಾಕ್ರೋಶ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಶರಣು ಸಲಗರ್, ಸಿದ್ದು ಪಾಟೀಲ್, ಪ್ರಭು ಚೌಹಾಣ್, ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಹಲವರು ನಾಯಕರು ಭಾಗಿಯಾಗಿದ್ದರು. ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಷಣ ಮಾಡಿದ್ದು, ಬುದ್ಧ, ಬಸವ, ಅಂಬೇಡ್ಕರ್ ಅವರನ್ನ ಗೌರವಿಸುವ ನಾಡು ಇದು. ಬಹಳ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಇದ್ದಾರೆ. ದಲಿತರ ಉದ್ಧಾರ ಆಗಲಿಲ್ಲ, ಬಹಳ ಬಡವರಾಗಲಿಲ್ಲ ಅಂತಾ ಸಂಸತ್ನಲ್ಲಿ ಖರ್ಗೆ ಭಾಷಣ ಮಾಡ್ತಾರೆ. 60-70 ವರ್ಷಗಳಿಂದ ಕಾಂಗ್ರೆಸ್ ಅಧಿಕಾರ ಮಾಡಿದ್ದು ಅಲ್ವಾ..? ಅವರ ಬಡತನ, ಅಸ್ಪೃಶ್ಯತೆ ಹೋಗಲಾಡಿಸಿ ಆಸ್ತಿ ಮಾಡಿ ಕೊಟ್ರಾ..? ದಲಿತರ ಉದ್ಧಾರ ಆಗದೇ ಇರುವುದಕ್ಕೆ ದಲಿತರೇ ಕಾರಣ.

ರಾಜ್ಯಸಭಾ, ಎಂಪಿ, ಮಂತ್ರಿ ಆದ್ರೂ ಖರ್ಗೆ ಅವರ ಮಗನೇ ಆಗಬೇಕು. ಕಲ್ಯಾಣ ಕರ್ನಾಟಕದಲ್ಲಿ 8 ಜಿಲ್ಲೆಗಳಿಗೆ ರಿಸರ್ವೇಷನ್ ಇವೆ, ಯಾರಿಗಾದರೂ ಕೊಟ್ಟಿದ್ದೀರಾ..? ದಲಿತರು ಉದ್ದಾರ ಆಗ್ಬೇಕಂದ್ರೆ ಮೊದಲು ಖರ್ಗೆ ರಾಜೀನಾಮೆ ಕೊಡಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ ನಾರಾಯಣಸ್ವಾಮಿ. ಎಲ್ಲವೂ ನನ್ನ ಕುಟುಂಬಕ್ಕೆ ಅಂದ್ರೆ ದಲಿತರು ಉದ್ದಾರ ಯಾವಾಗ..? ಕಾಂಗ್ರೆಸ್ ಬಹಳ ಡೆಂಜರ್ ಆದ್ರೆ, ಇಲ್ಲಿನ ಶಾಸಕರು, ಮಂತ್ರಿ ಇನ್ನೂ ಡೇಂಜರ್. ಈ ದೇಶದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಬಿಜೆಪಿ ಮಾತ್ರ ಎಂದಿದ್ದಾರೆ ಛಲವಾದಿ. ಅಂಬೇಡ್ಕರ್ ಬದುಕಿದ್ದಾಗಿನಿಂದ ಅಪಮಾನ ಮಾಡಿ ಅಂಬೇಡ್ಕರ್ ವಾದಿಗಳ ರೀತಿ ಮಾತನಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ದಲಿತರ ಉದ್ಧಾರ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದಿರುವ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಸುಡುವ ಮನೆ ಅಂತಾ ಅಂಬೇಡ್ಕರ್ ಹೇಳಿದ್ದಾರೆ. ಆದರೆ ಯಾರದ್ದೋ ಮಾತು ಕೇಳಿ ಇನ್ನೂ ಜೋತು ಬಿದ್ದಿದ್ದಾರೆ. ದಲಿತರೆಲ್ಲಾ ನಾವು ಕುರಿಗಳಾಗಿದ್ರೆ ಅಧಿಕಾರ ಮಾಡುವವರೆಲ್ಲಾ ತೋಳಗಳಾಗಿದ್ದಾರೆ ಎಂದು ಬೀದರ್ನ ಜನಾಕ್ರೋಶ ಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ಅಭೂತಪೂರ್ವ ಕೊಡುಗೆ ಬೆಲೆ ಏರಿಕೆ. ನಿತ್ಯೋಪಯೋಗಿ ವಸ್ತುಗಳ 50 ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯದ್ರೋಹಿ ಸರ್ಕಾರ. ಜಮೀರ್, ರಹೀಂಖಾನ್ ಅವರ ಎಫೆಕ್ಟ್ ಸಿದ್ದರಾಮಯ್ಯ ಮೇಲೆ ಬಹಳ ಇದೆ. ಬೀದರ್ನಲ್ಲಿ ಜನಿವಾರ, ಶಿವದಾರ ಹಾಕಿಕೊಳ್ಳಬಾರದು. ಇಂತಹ ಸೆಕ್ಯೂಲರ್ ಸರ್ಕಾರ ಎಲ್ಲೂ ಇಲ್ಲ. ಜನಿವಾರ ಹಾಕಿದ್ರೆ ಎಕ್ಸಾಂ ಹಾಲ್ಗೆ ಬಿಡಲ್ಲ. ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇದೆಯಾ..? ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಿದ್ದಾರೆ. ಬೊಮ್ಮಾಯಿ ಅವರಿಗೆ ಪೇ ಸಿಎಂ ಅಂದ್ರಲ್ಲ ನಿಮ್ಮದು ಲೂಟ್ ಸಿಎಂ. ಇಲ್ಲಿ ಹೇಳೋರು ಕೇಳೋರಿಲ್ಲ. ಕರ್ನಾಟಕ ರೇಪ್ ರಾಜ್ಯವಾಗಿದೆ. ರಾಜ್ಯದಲ್ಲಿ ಬೆಲೆ ಏರಿಕೆ ಯುದ್ಧ ನಡೆಯುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.