• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕ್ರೀಡೆ

ಲಾಕ್ ಡೌನ್ ನಲ್ಲಿ ಆನ್ ಲೈನ್ ಸೈಕ್ಲಿಂಗ್ ಕೋಚಿಂಗ್…

Any Mind by Any Mind
June 24, 2021
in ಕ್ರೀಡೆ
0
ಲಾಕ್ ಡೌನ್ ನಲ್ಲಿ ಆನ್ ಲೈನ್ ಸೈಕ್ಲಿಂಗ್ ಕೋಚಿಂಗ್…
Share on WhatsAppShare on FacebookShare on Telegram

ಸಾಧನೆ ಮಾಡುವವರಿಗೆ ಅಡ್ಡಿ ಆತಂಕಗಳಿರಲ್ಲ. ಇದ್ದರೂ ಅವುಗಳನ್ನು ಮೀರಿ ಸಾಧನೆ ಮಾಡುವವರಿದ್ದಾರೆ. ಅಂಥವರಲ್ಲಿ ನಮ್ಮ ಗದುಗಿನ ಸೈಕ್ಲಿಂಗ್ ಕೋಚ್ ಅನಂತ್ ದೇಸಾಯಿ ಕೂಡ ಸೇರುತ್ತಾರೆ. ಕೋವಿಡ್, ಲಾಕ್ ಡೌನ್ ಇವ್ಯಾವವು ಇವರಿಗೆ ಅಡ್ಡಿಯಾಗಲೇ ಇಲ್ಲ.

ADVERTISEMENT

ಎಲ್ಲ ಕಡೆಗೆ ಲಾಕ್ ಡೌನ್ ಮಾಡಿದಾಗ ಇವರು ಕೈಯಲ್ಲೇ ಇರುವ ಮೊಬೈಲ್ ನಿಂದಲೆ ಆನ್ ಲೈನ್ ಸೈಕ್ಲಿಂಗ್ ಆರಂಭಿಸಿದರು.

ಇವರು ಇರುವುದು ಗದುಗಿನಲ್ಲಿ, ಸೈಕ್ಲಿಂಗ್ ಪಟುಗಳು ಬೇರೆ ಬೇರೆ ಊರು ಮತ್ತು ಹಳ್ಳಿಗಳಲ್ಲಿ. ಆದರೂ ಪ್ರತಿದಿನ ಸೈಕ್ಲಿಂಗ್ ಪಟುಗಳಿಗೆ ನಿರಂತರ ಅಭ್ಯಾಸದಲ್ಲಿ ತೊಡಗಿಸಿ ಅವರ ಮಾರ್ಗದರ್ಶನ ನೀಡುತ್ತಿದ್ದಾರೆ. ಈ ಕ್ರೀಡಾಪಟುಗಳು ನಿರಂತರ ಅಭ್ಯಾಸ ದಲ್ಲಿ ತೊಡಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದರು, ಅಷ್ಟರಲ್ಲೇ ಲಾಕ್ ಡೌನ್ ಘೋಷಣೆಯಾಯಿತು. ನಂತರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಆನ್ ಲೈನ್ ಅಂದರೆ ವಿಡಿಯೋ ಕಾಲಿಂಗ್ ಮೂಲಕ ವೇಗ ನಿರ್ವಹಣೆ ಹಾಗೂ ಗುಡ್ಡದಲ್ಲಿ ಸೈಕಲ್ ತುಳಿಯುವಾಗ ಎದುರಾಗುವ ಅಡ್ಡಿಗಳ ಬಗ್ಗೆ ವಿಡಿಯೋ ದಲ್ಲೇ ತಿಳಿಸಿಕೊಡಬಹುದು ಎಂದು ಕೋಚ್ ದೇಸಾಯಿ ಹೇಳಿದಾಗ ಅಧಿಕಾರಿಗಳು ಒಪ್ಪಿಗೆ ನೀಡಿದರು.

ಕಳೆದ ಎರಡು ತಿಂಗಳಿನಿಂದ ಆರಂಭವಾದ ಈ ಆನ್ ಲೈನ್ ಕೋಚಿಂಗ್ ಪ್ರತಿದಿನ 6.30 ಯಿಂದ 8.30 ವರೆಗೆ ಮತ್ತು ಸಂಜೆ 4.30 ಯಿಂದ 6.30 ವರೆಗೆ ನಡೆಯುತ್ತದೆ.

ಇವರ ಮಾರ್ಗದರ್ಶನದಲ್ಲಿ ಪಳಗಿದ ಖೇಲೋ ಇಂಡಿಯಾ ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ತಮ್ಮ ಆನ್ ಲೈನ್ ಕೋಚಿಂಗ್ ಬಗ್ಗೆ ಹೇಳಿದರು, “ಬೆಳಿಗ್ಗೆ ಮತ್ತು ಸಂಜೆ ನಡೆಯುವ ನಮ್ಮ ಆನ್ ಲೈನ್ ಕೋಚಿಂಗ್ ಸತತವಾಗಿ ನಡೆಯಿತು. ಗುರುಗಳ ಮಾರ್ಗದರ್ಶನದಲ್ಲಿ ಕೋವಿಡ್ ರೂಲ್ಸ್ ಪಾಲಿಸುತ್ತ ಜನರು ಇರದತ್ತ ರೋಡ್ ಗಳಲ್ಲಿ ನಮ್ಮ ಅಭ್ಯಾಸ ನಡೆಯುತ್ತಿದೆ. ಮೊದಮೊದಲು ಮೊಬೈಲ್ ಹಿಡಿದುಕೊಂಡು ಹೋಗುವುದ ಸ್ವಲ್ಪ ಕಷ್ಟವೆನಿಸಿದರೂ ನಂತರ ಸರಿಹೊಂದಿತು. ನಾನು ಹಾಗೂ ಇನ್ನಿತರ ಕ್ರೀಡಾಪಟುಗಳ ನಮ್ಮ ಅಭ್ಯಾಸ ನಿಲ್ಲಲಿಲ್ಲ ಎಂದು ಸಂತಸಪಟ್ಟೆವು. ನಮ್ಮ ಕುಟುಂಬದವರೂ ದೇಸಾಯಿ ಸರ್ ಐಡಿಯಾಕ್ಕೆ ಖುಷ್ ಆಗಿದ್ದಾರೆ”. ಪವಿತ್ರಾ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಹುಡುಗಿ. ಇವರು 10 ನೇ ತರಗತಿಯ ವಿದ್ಯಾರ್ಥಿ.

ಅನಂತ್ ದೇಸಾಯಿ ತಮ್ಮ ಆನ್ ಲೈನ್ ಕೋಚಿಂಗ್ ಬಗ್ಗೆ ತಿಳಿಸಿದರು, “ಏನೇ ಆಗಲಿ ಕೋಚಿಂಗ್ ನಿಲ್ಲಬಾರದು ಎಂದು ಯೋಚಿಸುತ್ತಿದ್ದೆ, ಕೊನೆಗೆ ಕೈಯಲ್ಲಿದ್ದ ಮೋಬೈಲ್ ಕೆಲಸಕ್ಕೆ ಬಂತು. ವಿಡಿಯೋ ಕಾಲ್ ಮುಖಾಂತರ ಈ ಕೋಚಿಂಗ್ ನಡೆಯುತ್ತಿದೆ. ನಮ್ಮ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸೈಕ್ಲಿಂಗ್ ನಲ್ಲಿ ಗದಗ್ ನಗರ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬೇಕು ಎಂಬುದು ನನ್ನ ಸದಾಶಯ”.

ಕ್ರೀಡಾ ಪ್ರೇಮಿಗಳು ಆನ್ ಲೈನ್ ಕೋಚಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಈ ತರಹದ ನೂತನ ಯೋಚನೆಗಳು ಕ್ರೀಡಾಪಟುಗಳ ಮನೋಬಲವನ್ನು ಹೆಚ್ಚಿಸುತ್ತವೆ ಹಾಗೂ ಇಂತಹ ಪ್ರಯತ್ನ ಗದುಗಿನಲ್ಲಿ ನಡೆದಿದ್ದು ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Previous Post

ಒಂದು ಕಾಫಿ ಮಗ್‌ನಷ್ಟಿರುವ ಡಿಎನ್ಎಯಲ್ಲಿ ಇಡೀ ಜಗತ್ತಿನ ಡಾಟಾ ಸಂಗ್ರಹಿಸಿಡಬಹುದು!

Next Post

ದೆಹಲಿಯಿಂದ ಬರುತ್ತಲೇ ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದರೇ ಡಿಕೆಶಿ?

Related Posts

WPL 2026 : ವಿಕೆಟ್‌ನಲ್ಲೂ ಹ್ಯಾಟ್ರಿಕ್‌ ; ಯಾರಿದು ನಂದನಿ ಶರ್ಮಾ? ಹಿನ್ನೆಲೆ ಏನು..?
ಇದೀಗ

WPL 2026 : ವಿಕೆಟ್‌ನಲ್ಲೂ ಹ್ಯಾಟ್ರಿಕ್‌ ; ಯಾರಿದು ನಂದನಿ ಶರ್ಮಾ? ಹಿನ್ನೆಲೆ ಏನು..?

by ಪ್ರತಿಧ್ವನಿ
January 12, 2026
0

ಬೆಂಗಳೂರು : ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ನಂದಿನಿ ಶರ್ಮಾ ಇತಿಹಾಸ ಸೃಷ್ಟಿಸಿದ್ದಾರೆ. ಮುಂಬೈನಲ್ಲಿ ನಡೆದ ಗುಜರಾತ್...

Read moreDetails
WPL2026 : ಮುಂಬೈ ವಿರುದ್ಧ ಭರ್ಜರಿ ಗೆಲುವು ; RCB ಗೆಲುವಿಗೆ ಕಾರಣವಾದ ಅಂಶಗಳು ಯಾವುವು..?

WPL2026 : ಮುಂಬೈ ವಿರುದ್ಧ ಭರ್ಜರಿ ಗೆಲುವು ; RCB ಗೆಲುವಿಗೆ ಕಾರಣವಾದ ಅಂಶಗಳು ಯಾವುವು..?

January 10, 2026
WPL 2026: ಮೊದಲ ಪಂದ್ಯದಲ್ಲೇ ಮುಂಬೈಗೆ ಟಕ್ಕರ್‌ ನೀಡಲು ಆರ್‌ಸಿಬಿ ವನಿತೆಯರು ಸಜ್ಜು..

WPL 2026: ಮೊದಲ ಪಂದ್ಯದಲ್ಲೇ ಮುಂಬೈಗೆ ಟಕ್ಕರ್‌ ನೀಡಲು ಆರ್‌ಸಿಬಿ ವನಿತೆಯರು ಸಜ್ಜು..

January 9, 2026

ಬಾಂಗ್ಲಾ ಆಟಗಾರರಿಗೆ ಐಪಿಎಲ್‌ನಲ್ಲಿ ಕೊಕ್‌ : ತನ್ನ ದೇಶದಲ್ಲಿ ಪಂದ್ಯ ಪ್ರಸಾರ ಬ್ಯಾನ್‌ ಮಾಡಿದ ಯೂನಸ್‌ ಸರ್ಕಾರ..

January 5, 2026

ಟಿ20 ವಿಶ್ವಕಪ್‌ ಪಂದ್ಯ : ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ..

January 1, 2026
Next Post
ದೆಹಲಿಯಿಂದ ಬರುತ್ತಲೇ ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದರೇ ಡಿಕೆಶಿ?

ದೆಹಲಿಯಿಂದ ಬರುತ್ತಲೇ ಸಿದ್ದರಾಮಯ್ಯ ವಿರುದ್ಧ ಗುಟುರು ಹಾಕಿದರೇ ಡಿಕೆಶಿ?

Please login to join discussion

Recent News

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?
Top Story

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?

by ಪ್ರತಿಧ್ವನಿ
January 13, 2026
10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?
Top Story

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

by ಪ್ರತಿಧ್ವನಿ
January 13, 2026
Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು
Top Story

Toxic Teaser: ಯಶ್ ‘ಟಾಕ್ಸಿಕ್’ ಟೀಸರ್ ವಿವಾದ: ಸಾಲು ಸಾಲು ದೂರು ದಾಖಲು

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ಪೊಲೀಸರ ಮೇಲಿನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

ಪೊಲೀಸರ ಮೇಲಿನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada