ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಕಿಯೋನಿಕ್ಸ್ನಲ್ಲಿ ಇದು ಹಳೆ ವಿಚಾರವೇ ಆಗಿದೆ. ಅಕೌಂಟೆಂಟ್ ಜನರಲ್ 300 ಕೋಟಿಯಷ್ಟು ಹಗರಣ ಆಗಿದೆ ಎಂದು ಹೇಳಿದ್ದಾರೆ.

ಮಹೇಶ್ವರ್ ರಾವ್ ಕಮೀಟಿ ರಚಿಸಿದ್ದೆವು. ಹೀಗಾಗಿ ಎಲ್ಲಾ ಬಿಲ್ಗಳನ್ನ ನಾವು ತಡೆ ಹಿಡಿದಿದ್ದೆವೆ. 500 ಕೋಟಿಯಷ್ಟು ಅಕ್ರಮವಾಗಿರೋದು ಕಂಡು ಬಂದಿದೆ. ಆಡಿಟ್ ಅಬ್ಜೆಕ್ಷನ್ ಆದಾಗ ಅವರ ನಿರ್ದೇಶನವನ್ನು ನಾವು ಕಾಪಾಡಬೇಕು. ತೆರಿಗೆದಾರರ ದುಡ್ಡು ಬಗ್ಗೆ ನಾವು ಪಾರದರ್ಶಕತೆ ಕಾಪಾಡಬೇಕು. ಅದಕ್ಕೆ ನಾನು ಅವರಿಗೆ ಮನವಿ ಮಾಡಿದ್ದೆವು. 4 ವರ್ಷದ್ದು ಇದೆ, ಹೀಗಾಗಿ ಕಮಿಟಿ ವರದಿ ಬರಲಿ. ಕಮಿಟಿ ವರದಿ ಬಂದ ಮೇಲೆ ನಾವು ಕೊಡ್ತೇವೆ ಎಂದಿದ್ದಾರೆ.

ಪ್ರಾಮಾಣಿಕವಾಗಿ ಕೆಲಸ ಮಾಡಿರೋದಕ್ಕೆ ಹೀಗೆ ಮಾಡಿದ್ರೆ ಹೇಗೆ ಎಂದಿರುವ ಸಚಿವ ಪ್ರಿಯಾಂಕ್ ಖರ್ಗೆ, ಈ ರೀತಿಯ ಬ್ಲಾಕ್ಮೇಲ್ ಮಾಡಿದ್ರೆ ಹೇಗೆ..? ಅವರೇನಾದರು ಕಮೀಷನ್ ವಿಚಾರ ಕೇಳಿರೋದನ್ನ ಉಲ್ಲೇಖಿಸಿದ್ದಾರ..? ಇಲ್ಲ. ನಿಯಮಾವಳಿ ಪಾಲನೆ ಮಾಡಬೇಡಿ ಎಂದರೆ ಹೇಗೆ..? ಕಾನೂನು ಮೀರಿ ಕೊಡೊದಕ್ಕೆ ಆಗುತ್ತಾ..? ಯಾರಾದರೂ ಕೋರ್ಟ್ಗೆ ಹೋದರೆ..! ಏನು ಮಾಡೋದು..? ಈ ಹಿಂದಿನ ಸರ್ಕಾರ ಮಾಡಿರೋ ತಪ್ಪಿಗೆ ನಾವು ಅನುಭವಿಸೋ ಹಾಗೆ ಆಗಿದೆ. ಸಿನಿಯಾರಿಟಿ ಮೀರಿ ಗುತ್ತಿಗೆದಾರರಿಗೆ ಬಿಲ್ ಕೊಟ್ಟಿರೋದನ್ನ ಪ್ರಶ್ನೆ ಮಾಡಿದ್ರು. ಗುತ್ತಿಗೆದಾರರು ಕೆಲವರು ಮನವಿ ಮಾಡಿಕೊಂಡಿದ್ದರು. ಕ್ಯಾನ್ಸರ್ ಇದೆ ಆಸ್ಪತ್ರೆ ಬಿಲ್ ಪಾವತಿಸ ಬೇಕು ಎಂದು ಕೇಳಿದಾಗ ಕೊಟ್ಟಿದ್ದೇವೆ. ಪ್ರಿಯಾಂಕ್ ಖರ್ಗೆ ಕರಪ್ಟ್ ಎಂದು ಯಾರಾದರೂ ಹೇಳಿದ್ದಾರ..? ಕಿಯೋನಿಕ್ಸ್ 4ಜಿ ವಿನಾಯಿತಿಯನ್ನ ನಾನೇ ವಿತ್ ಡ್ರಾ ಮಾಡಿದ್ದೇನೆ. ನಾವು ಪಾರದರ್ಶಕ ಸರ್ಕಾರ ಕೊಡ್ತಿದ್ದೇವೆ ಎಂದಿದ್ದಾರೆ.

ಪಾರದರ್ಶಕ ಆಡಳಿತದಲ್ಲಿ ಕೆಲವರಿಗೆ ತೊಂದರೆ ಯಾದರೆ ಏನ್ ಮಾಡೋಕಾಗಲ್ಲ ಎಂದಿರುವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ನಲ್ಲಿ ಹೀಗಾಗಿದೆ ಎಂದರೆ ಅಶ್ವಥ್ ನಾರಾಯಣ ಬಳಿ ಕೇಳಬೇಕು. ಅವರ ಅವಧಿಯಲ್ಲಿ ಹೀಗಾಗಿದ್ರೂ ನಾನೇ ಉತ್ತರ ಕೊಡಬೇಕಿದೆ. ನಾವು ಬಿಜೆಪಿ ಕಾಲದಲ್ಲಿನ ಬಿಲ್ ಪಾವತಿ ಮಾಡಿದ್ದೇವೆ. ಜೆಜೆಎಮ್ಗೂ ಕೂಡ ಕಡಿಮೆ ಅನುದಾನ ಕೊಟ್ಟಿದೆ ಕೇಂದ್ರ ಸರ್ಕಾರ. ಇದನೆಲ್ಲಾ ಬಿಜೆಪಿ ಅವರು ಮಾತಾಡ್ತಾರ..? ಕೆಕೆಆರ್ಡಿಬಿಯಲ್ಲಿ ಕಮಿಷನ್ ಆರೋಪವನ್ನ ಗುತ್ತಿಗೆದಾರರು ಮಾಡಿರೋ ವಿಚಾರದ ಬಗ್ಗೆ ಮಾತನಾಡಿ, ಗುತ್ತಿಗೆದಾರರ ಸಮಸ್ಯೆ ಇರೋದು ಬಿಲ್ ಪಾವತಿ ಆಗದಿರೋದಕ್ಕೆ. 2 ಲಕ್ಷದ 90ಸಾವಿರ ಕೋಟಿ ಹಣ ಇಲ್ಲದೇ ಟೆಂಡರ್ ಮಾಡಿದ್ರು. ಭ್ರಷ್ಟಾಚಾರ ಮಾಡಲು ಅವರು ಹೀಗೆ ಮಾಡಿರೋದು ಎಂದು ಆರೋಪಿಸಿದ್ದಾರೆ.

ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮಾತನಾಡಿ, ಅಕೌಂಟ್ ಜನರಲ್ ವರದಿಯಲ್ಲಿ ಸರ್ಕಾರದ ಖಜಾನೆಗೆ ನೂರಾರು ಕೋಟಿ ನಷ್ಟ ಆಗಿದೆ. ಮಹೇಶ್ವರ್ ರಾವ್ ವರದಿ ಪಡೆದು ಪರಿಶೀಲನೆ ಮಾಡ್ತೇವೆ. ಸಾರ್ವಜನಿಕರ ಹಣ ಬಳಸಿ ಅನುದಾನ ನೀಡ್ತಿದ್ದೇವೆ. ಬೆಲೆ ನಿಗದಿ ವಿಚಾರದಲ್ಲೂ ಮಾರ್ಕೆಟ್ ಬೆಲೆಗಿಂದ ಹೆಚ್ಚಿನ ಬೆಲೆಗೆ ಸಪ್ಲೈ ಮಾಡಿರುವ ಆರೋಪ ಇದೆ. ಶೀಘ್ರವಾಗಿ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದಿದ್ದಾರೆ. ಕಿಯೋನಿಕ್ಸ್ನಲ್ಲಿ ಹಗರಣದಲ್ಲಿ ಭಾಗಿಯಾದವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು. 2021, 22-23ನೇ ಸಾಲಿನಲ್ಲಿ ಮೂರು ವರ್ಷದ ಖರ್ಚು ವೆಚ್ಚಗಳ ಪರಿಶೀಲನೆ ನಡೆಯುತ್ತಿದೆ ಅಂತಾ ತಿಳಿಸಿದ್ದಾರೆ.