ಕರೋನಾ ವಿಚಾರದಲ್ಲಿ ಬೆಂಗಳೂರಿನ ಮಟ್ಟಿಗೆ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಸದ್ಯ ರಾಜಧಾನಿಯಲ್ಲಿ ಪಾಸಿಟಿವ್ ದರ ಶೇಕಡಾ 10ಕ್ಕಿಂತಲೂ ಹೆಚ್ಚಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕು ಏಕಾಏಕಿ 10ಕ್ಕೆ ಏರಿಕೆ ಹಿನ್ನೆಲೆಯಲ್ಲಿ ನಿಯಂತ್ರಣ ಬರುವುದು ಬಹಳ ಕಷ್ಟ ಸಾಧ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಪ್ರಕರಣಗಳ ಪೈಕಿ 80% ರಷ್ಟು ಅಧಿಕ ಪ್ರಮಾಣದ ಕೇಸ್ ಗಳು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿದೆ. ಕೋವಿಡ್ 3ನೇ ಅಲೆಯಲ್ಲಿ ಅತ್ಯಧಿಕ ಪಾಸಿಟಿವಿಟಿ ದರ ಪತ್ತೆಯಾಗಿದ್ದು ಕಳೆದ ಭಾನುವಾರ. ಈಗಾಗಲೇ ಯಾವ ಜಿಲ್ಲೆಯಲ್ಲಿ 5% ಪಾಸಿಟಿವಿಟಿ ದರ ಮೀರಿದಲ್ಲಿ ಲಾಕ್ ಡೌನ್ ಗೆ ತಜ್ಞರು ಸಲಹೆ ನೀಡಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಲಾಕ್ ಡೌನ್ ಮಾಡಲು ಕೇಂದ್ರ ಸರ್ಕಾರವೂ ಸೂಚಿಸಿತ್ತು. ಅದರಂತೆ ರಾಜ್ಯ ಸರ್ಕಾರ ಕೂಡ ಕಠಿಣ ನೈಟ್ ಕರ್ಪ್ಯೂ ಮತ್ತು ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿತ್ತು. ಇದರ ನಡುವೆ ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಬೆನ್ನಲ್ಲೇ ಅಧ್ಯಯನವೊಂದನ್ನು ನಡೆಸಿದೆ.
97% ಮಂದಿಗೆ ಲಸಿಕೆ ಪಡೆದವರಿಗೆ ಸೋಂಕು!
ಕೊರೋನಾ ಕೇಸ್ ಗಳು ಹೆಚ್ಚಳ ಬೆನ್ನಲ್ಲೇ ಆರೋಗ್ಯ ಇಲಾಖೆಯಿಂದ ಅಧ್ಯಯನ ನಡೆದಿದೆ. ಜನವರಿ 1 ರಿಂದ 7ರ ವರೆಗಿನ ಅವಧಿಯಲ್ಲಿ ನಡೆಸಲಾದ ಅಧ್ಯಯನ ಇದಾಗಿದ್ದು, ರಾಜ್ಯದ ಕೋವಿಡ್ ವಾರ್ ರೂಂ ಅಧಿಕಾರಿ ಮನೀಶ್ ಮೌದ್ಗಿಲ್ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ. 100 ಮಂದಿ ಲಸಿಕೆ ಪಡೆದವರು ಹಾಗೂ 100 ಮಂದಿ ಲಸಿಕೆ ಪಡೆಯವದರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ವೇಳೆ ಲಸಿಕೆ ಪಡೆದವರಿಗಿಂತ ಲಸಿಕೆ ಪಡೆಯದವರೇ ಹೆಚ್ಚು ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದು ಗೊತ್ತಾಗಿದೆ. ಹೌದು, ಲಸಿಕೆ ಪಡೆದವರಿಗಿಂತ 10 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯದವರೇ ಆಸ್ಪತ್ರೆಗೆ ದಾಖಲುಗಿರುವುದು ಇದೀಗ ಮತ್ತಷ್ಟು ಆತಂಕಕ್ಕೆ ದೂಡಿದೆ. ಲಸಿಕೆ ಪಡೆಯದ 100 ಮಂದಿಯ ಪೈಕಿ 30% ರಷ್ಟು ಮಂದಿಗೆ ಆಸ್ಪತ್ರೆಗೆ ದಾಖಲಾಗಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಇದೇ ವೇಳೆ ಲಸಿಕೆ ಪಡೆವದರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಕೇವಲ 3% ನಷ್ಟು ಸೋಂಕಿತರು ಮಾತ್ರ.

ಲಸಿಕೆ ಪಡೆಯದ 30% ಮಂದಿ ಆಸ್ಪತ್ರೆಗೆ ದಾಖಲು!
ಅಲ್ಲದೆ ಲಸಿಕೆ ಪಡೆದ 97% ರಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆದರೆ 97% ನಷ್ಟು ಮಂದಿಗೆ ಆಸ್ಪತ್ರೆ, ಆಕ್ಸಿಜನ್ ಅಗತ್ಯವಿರಲಿಲ್ಲ. ಎಲ್ಲರೂ ಕೂಡ ಹೋಮ್ ಐಸೋಲೇಷನ್ನಲ್ಲೇ ಗುಣಮುಖರಾಗಿದ್ದಾರೆ ಎಂಬ ಅಂಶ ಬಯಲಾಗಿದೆ. ಈ ಮೂಲಕ ಲಸಿಕೆ ಪಡೆಯುವುದು ಬಹಳ ಅನಿವಾರ್ಯವಾಗಿದೆ ಎಂದು ಸಾಬೀತಾಗಿದೆ. ಲಸಿಕೆ ಪಡೆದುಕೊಂಡವರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆದರೆ 97% ರಷ್ಟು ಸೋಂಕಿತರಿಗೆ ಆಸ್ಪತ್ರೆ ಸಹಾಯ ಅಥವಾ ಆಕ್ಸಿಜನ್ ಸಮಸ್ಯೆ ಎದುರಾಗಲಿಲ್ಲ. ಇದೆ ವೇಳೆ ಲಸಿಕೆ ಪಡೆಯದವರಲ್ಲಿ 30% ರಷ್ಟು ಜನರು ಆಸ್ಪತ್ರೆ ಸೇರಿದ್ದಾರೆ.