ಬೆಂಗಳೂರಿನಲ್ಲಿ ಎರಡನೇ ಏರ್ಪೋರ್ಟ್ ಗಾಗಿ (Bengaluru airport) ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ ವಿಚಾರವಾಗಿ ಬೆಂಗಳೂರಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (MB Patil) ಮಾತನಾಡಿದ್ದಾರೆ. ಅಧ್ಯಯನ ತಂಡದವರು ಮೂರು ದಿನ ಇಲ್ಲೇ ಇದ್ದು ಸ್ಥಳ ವೀಕ್ಷಣೆ ಮಾಡಿ ದೆಹಲಿಗೆ ಹೋಗ್ತಾರೆ.ಆ ಬಳಿಕ ಜಾಗಗಳ ಬಗ್ಗೆ ರಿಪೋರ್ಟ್ ಕೊಡ್ತಾರೆ. ಅಲ್ಲಿಂದ ನಮಗೆ ಬರಬೇಕು.ಆಮೇಲೆ ನಾವು ಡಿಪಿಆರ್ (DPR) ಮಾಡಬೇಕಾಗುತ್ತದೆ ಎಂದಿದ್ದಾರೆ.

ಆ ನಂತರ ನಾವು ಈ ಬಗ್ಗೆ ಕ್ಯಾಬಿನೆಟ್ ನಲ್ಲಿ (Cabinet) ಚರ್ಚಿಸಬೇಕು. ಕ್ಯಾಬಿನೆಟ್ ಅನುಮತಿಯ ನಂತರ ನಿರ್ಮಾಣನಕ್ಕೆ ಮುಂದುವರಿಯಬೇಕು ಎಂದಿದ್ದಾರೆ.ಇದೇ ವೇಳೆ ವಿಮಾನ ನಿಲ್ದಾಣಕ್ಕೆ ಬಿಡದಿ ಸೂಕ್ತವಲ್ಲ ಎಂದು ಟಿಕ್ನಿಕಲ್ ಟೀಂ ವರದಿ ನೀಡಿರುವ ವಿಚಾರವಾಗಿ ಎಂ.ಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ನಾವು ಬಿಡದಿಯಲ್ಲಿ ಎರಡನೆಯ ವಿಮಾನ ನಿಲ್ದಾಣ ಮಾಡ್ತಿಲ್ಲ.ಅಲ್ಲಿ ಡಿಕೆ ಶಿವಕುಮಾರ್ (Dk Shivakumar) ಲೇಔಟ್ ಮಾಡ್ತಿದ್ದಾರೆ.ಗ್ರೇಟರ್ ಬಿಡದಿ ಸೈಟ್ ಮಾಡ್ತಿದ್ದಾರೆ. ಆದ್ರೆ ಹಾರೋಹಳ್ಳಿ ಬಳಿ ಒಂದು ಜಾಗ ನೋಡಲಾಗಿದೆ. ಇನ್ನು ಕುಣಿಗಲ್ ರಸ್ತೆ (Kunigal road) ಬಳಿ ಒಂದು ಜಾಗ ನೋಡಿದ್ದೇವೆ. ವಿಧಾನಸೌಧಕ್ಕೆ 50 ಕಿ.ಮೀ ದೂರ ಇದೆ.ಅಲ್ಲಿ ಏರ್ಪೋರ್ಟ್ ಮಾಡುವ ತೀರ್ಮಾನ ಮಾಡಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.