ಡಾಬಾದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಸ್ನೇಹಿತರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.ಈ ವೇಳೆ ಓರ್ವ ಬಿಯರ್ ಬಾಟಲಿಯಿಂದ ನವೀನ್ ರೆಡ್ಡಿಗೆ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್
ಚಿಕ್ಕಬಳ್ಳಾಪುರ;ಹೊಸ ವರ್ಷದ ಪಾರ್ಟಿ ವೇಳೆ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿಂತಾಮಣಿಯ ಐಮರೆಡ್ಡಿಹಳ್ಳಿ ನಿವಾಸಿ ನವೀನ್ ರೆಡ್ಡಿ (28) ಕೊಲೆಯಾದ ಯುವಕ.
ಹೊಸ ವರ್ಷದ ಸಂಭ್ರಮಾಚರಣೆಗಾಗಿ ಗಂಜೂರು ಗ್ರಾಮದ ನವೀನ್ ರೆಡ್ಡಿ, ಬೈರೆಡ್ಡಿ, ಪುನೀತ್, ಕಿರಣ್ ಜೊತೆಗೂಡಿ ಪಾರ್ಟಿ ಮಾಡಲು ಐಮಾರೆಡ್ಡಿ ಹಳ್ಳಿ ಸಮೀಪದ ಡಾಬಾಕ್ಕೆ ಬಂದಿದ್ದಾರೆ.
ಡಾಬಾದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಸ್ನೇಹಿತರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ.ಈ ವೇಳೆ ಓರ್ವ ಬಿಯರ್ ಬಾಟಲಿಯಿಂದ ನವೀನ್ ರೆಡ್ಡಿಗೆ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ.
ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.