• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ನೆಹರು ದ್ವೇಷಿಗಳೆˌ ಇದನ್ನು ಓದಿ

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
February 18, 2023
in ಅಂಕಣ
0
ನೆಹರು ದ್ವೇಷಿಗಳೆˌ ಇದನ್ನು ಓದಿ
Share on WhatsAppShare on FacebookShare on Telegram

ನೆಹರು ಕಾಲವಾಗಿ ಈಗ ಸರಿಸುಮಾರು ೬೦ ವರ್ಷಗಳು ಕಳೆಯುತ್ತಿವೆ (೧೯೬೪). ಆದರೂˌ ನೆಹರು ಇಂದಿಗೂ ಈ ಜಗತ್ತಿನಲ್ಲಿ ಚರ್ಚೆಯ ವಸ್ತುವಾಗಿದ್ದಾರೆ ಹಾಗು ಅಭಿವೃದ್ಧಿ ವಿರೋಧಿಗಳಿಂದ ನಿರಂತರ ದ್ವೇಷಿಸಲ್ಪಡುತ್ತಿದ್ದಾರೆ. ನೆಹರು ತಮ್ಮ ಅಭಿವೃದ್ದಿಪರ ಕಾರ್ಯಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಪ್ರೀತಿಯ ಸ್ಥಾನ ಹೇಗೆ ಪಡೆದರೊ ಅದೇ ಕಾರಣಕ್ಕೆ ದೇಶದ್ರೋಹಿ ಮನಸ್ಸುಗಳಿಂದ ದ್ವೇಷಿಸಲ್ಪಡುತ್ತಿದ್ದಾರೆ. ಈ ದೇಶದ ಮೂಲ ಸ್ವರೂಪವನ್ನು ತಮ್ಮ ಹಿತಾಸಕ್ತಿಯಂತೆ ಪರಿವರ್ತಿಸಲು ಹೊಂಚು ಹಾಕಿ ಕುಳಿತಿದ್ದ ಧರ್ಮಾಂಧರಿಗೆ ನೆಹರು ಮಾಡಿರುವ ಪ್ರಗತಿಪರ ಕಾರ್ಯಗಳು ಅಪತ್ಯವಾಗುತ್ತವೆ.

ADVERTISEMENT

ನೆಹರು ಮತ್ತು ಗಾಂಧಿಯವರ ವ್ಯಕ್ತಿತ್ವವು ಎಂತಹದೆಂದರೆ ಅವರನ್ನು ಜನರ ಮನಸ್ಸಿನಿಂದ ಮರೆ ಮಾಡಬೇಕೆಂದಷ್ಟು ಅವರು ಪ್ರಸ್ತುತವಾಗುತ್ತಾ ಹೋಗುತ್ತಾರೆˌ ಹಾಗು ಮತ್ತಷ್ಟು ಜನಮಾನಸದಲ್ಲಿ ಬೇರೂರುತ್ತಾ ಸಾಗುತ್ತಾರೆ. ಜನರ ಮನಸ್ಸಿನಿಂದ ನೂಹರು-ಗಾಂಧಿಯ ಹೆಸರುಗಳು ಅಳಕಿಸಬೇಕೆಂದಷ್ಟು ಅವರ ಹೆಸರುಗಳು ಅಜರಾಮರವಾಗುತ್ತ ಹೋಗುತ್ತಿವೆ. ಜಾಗತಿಕ ಮನ್ನಣೆಯ ವ್ಯಕ್ತಿತ್ವಗಳನ್ನು ದ್ವೇಷಿಸುವˌ ಅವಮಾನಿಸುವ ಕೊಳೆತ ಮನಸ್ಸುಗಳಿಗೆ ಇದು ಅರ್ಥವಾಗದ ಸಂಗತಿ. ಸ್ವಾತಂತ್ರ ಪಡೆದ ಹೊಸದರಲ್ಲಿ ಭಾರತವು ಔದ್ಯೋಗಿಕ ವಿಕಾಸದಲ್ಲಿ ಭಯಂಕರ ಹಿಂದುಳಿದಿತ್ತು. ಅದಕ್ಕೆ ಕಾರಣ ನೆಹರು ದ್ವೇಷಿಗಳ ಪೂರ್ವಜರು ಬ್ರಿಟೀಷರು ಮತ್ತು ಮೊಘಲರೊಂದಿಗೆ ಸೇರಿ ಈ ದೇಶವನ್ನು ಅಪಾರವಾಗಿ ವಂಚಿಸಿದ್ದು. ನೆಹರು ಅವರ ದೂರದರ್ಶಿ ನಾಯಕತ್ವ ನೆಹರು ದ್ವೇಷಿಗಳ ಪೂರ್ವಜರು ಮಾಡಿದ್ದ ಎಲ್ಲ ಕೊಳಕನ್ನು ತೊಳೆದು ಈ ದೇಶವನ್ನು ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿಸಿತು. ಸ್ವಾತಂತ್ರ ನಂತರ ದೇಶದ ಅಭಿವೃದ್ಧಿಗೆ ಹಾಕಿದ ಭದ್ರ ಬುನಾದಿಯ ಶ್ರೇಯ ಯಾರಿಗೆ ಸಲ್ಲಬೇಕು?

ಅದರ ಶ್ರೇಯ ನೆಹರು ದ್ವೇಷಿಗಳ ಗುಂಪಿನ ಸದಸ್ಯರಿಗೆ ನೀಡಬೇಕೆಂದರೆ ಆಗಿನ್ನೂ ನರೇಂದ್ರ ಮೋದಿ ಹುಟ್ಟಿರಲಿಲ್ಲ. ಸರ್ದಾರ್ ಪಟೇಲರು ೧೯೫೦ ರಲ್ಲಿಯೆ ಮರಣಿಸಿದರು. ಗಾಂಧಿಯವರನ್ನು ೧೯೪೮ ರಲ್ಲಿಯೇ ಮತಾಂಧರ ಗುಂಪು ಬರ್ಬರ ಹತ್ಯೆ ಮಾಡಿತ್ತು. ಈ ದೇಶ ಧರ್ಮಾಧಾರದಲ್ಲಿ ನಿರ್ಮಾಣವಾಗಬೇಕು ಹಾಗು ಬ್ರಾಹ್ಮಣ ಯಜಮಾನಿಕೆಯ ಚಾತುರ್ವರ್ಣ ವ್ಯವಸ್ಥೆ ಮುಂದುವರೆಯಬೇಕು ಎನ್ನುತ್ತಿದ್ದ ಸಂಘಿ ಗೋಳ್ವಾಲ್ಕರ್ ಅವರಿಗೆ ಈ ದೇಶದ ಔದ್ಯೋಗಿಕ ವಿಕಾಸದ ಕುರಿತು ಯಾವುದೇ ಬಗೆಯ ಚಿಂತನೆ ಇರಲಿಲ್ಲ. ಹಾಗಾದರೆ ದೇಶದ ಕೈಗಾರೀಕರಣದ ಶ್ರೇಯ ನೆಹರುರಿಗಲ್ಲದೆ ಇನ್ನಾರಿಗೆ ಕೊಡಲು ಸಾಧ್ಯ?

ಅಂದು ಕೈಗಾರೀಕರಣದ ಅಭಿವೃದ್ಧಿಗಾಗಿ ವಿದ್ಯುತ್ ಮತ್ತು ಇಂಧನಗಳ ಅಗತ್ಯವಿತ್ತು. ಅದಕ್ಕಾಗಿ ಮ್ಯಾಥನ್ˌ ಪಂಚೆತ್, ತಿಲಯ್ಯ ಮುಂತಾದ ಆಣೆಕಟ್ಟುಗಳು ನಿರ್ಮಾಣವಾದವು. ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಾದ ಬಿಟಿಪಿಎಸ್, ಟಿಡಿಪಿಎಸ್ ಗಳು ಸ್ಥಾಪಿಸಲಾಯಿತು. ಇವುಗಳ ಸ್ಥಾಪನೆಯ ಶ್ರೇಯ ಯಾರಿಗೆ ಸಲ್ಲಬೇಕು?

೧೯೫೨ ಪಾಪˌ ಅಟಲ್ ಬಿಹಾರಿ ವಾಜಪೇಯಿ ಎಲ್ಲಿದ್ದರೊ ಏನೊ, ಶಾಮಾಪ್ರಸಾದ ಮುಖರ್ಜಿ ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕುಳಿತಿದ್ದರು. ಭಾರತದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ ಮತ್ತು ಶ್ರೇಣೀಕೃತ ಸಾಮಾಜಿಕ ವಿಕೃತಿಗಳ ವಿರುದ್ಧ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಿರಂತರ ಹೋರಾಡುತ್ತಿದ್ದರು. ಅವರಿಗೆ ಶೋಷಿತರ ಗೌರವ ಮತ್ತು ಬದುಕು ಹಸನುಗೊಳಿಸುವ ಮಹತ್ತರ ಜವಾಬ್ದಾರಿ ಹಾಗು ಚಿಂತೆ ಕಾಡುತ್ತಿತ್ತು. ಆಗ ದೇಶದ ಅಧಿಕಾರದ ಚುಕ್ಕಾಣಿ ನೆಹರು ಕೈಯಲ್ಲಿತ್ತು. ಅಂದರೆˌ ಔದ್ಯೋಗಿಕ ವಿಕಾಶದ ಶ್ರೇಯ ಕೂಡ ನೆಹರು ಅವರಿಗೆ ಸಲ್ಲಬೇಕು ಅಲ್ಲವೆ!

ಇನ್ನು ದೇಶದಲ್ಲಿ ವೈಜ್ಞಾನಿಕ ಬೆಳವಣಿಗೆಯ ಕುರಿತು ಯಾರು ಚಿಂತಿಸುತ್ತಿದ್ದರು ಎನ್ನುವ ಸಂಗತಿ ಕೂಡ ಮಹತ್ವದ್ದಾಗಿದೆ. ನಾವು ವೈಜ್ಞಾನಿಕ ವಿಕಾಸದ ಶ್ರೇಯವನ್ನು ಸಾವರಕರ್ ಅವರಿಗೆ ನೀಡಲಾದೀತೆ? ಸದಾ ಹಿಂದೂ-ಮುಸ್ಲಿಮ್ ಎನ್ನುವ ಸಿಮಿತ ಹಾಗು ಅಲ್ಪ ವಿಷಯದ ಸುತ್ತಲು ಚಿಂತಿಸುತ್ತಿದ್ದ ಸಾವರಕರ್ ದೇಶದ ಬಹುತ್ವ ತತ್ವಾಧಾರಿತ ಸರ್ವತೋಮುಖ ಬೆಳವಣಿಗೆಯ ಕುರಿತು ಮಾತನಾಡಿದ್ದು ನಾವು ಕಾಣೆವು. ಧರ್ಮ ಮತ್ತು ಮೌಢ್ಯಗಳನ್ನೆ ಬಂಡವಾಳ ಮಾಡಿಕೊಂಡಿರುವ ಸಾವರಕರ್ ಸಂತತಿ ಇಂದು ದೇಶದಲ್ಲಿ ವೈಜ್ಞಾನಿಕ ಚಿಂತನೆಯನ್ನೆ ನಾಶಮಾಡುತ್ತಿರುವ ಸಂದಿಗ್ಧ ಕಾಲದಲ್ಲಿ ನಾವಿದ್ದೇವೆ. ಆದರೆ ದೇಶದ ವೈಜ್ಞಾನಿಕ ಬೆಳವಣಿಗೆಗೆ ನೆಹರುರವರ ದೂರದರ್ಶಿತ್ವವನ್ನು ನಾವು ಮರೆಯಲಾದೀತೆ?

ಭಾರತವು ಜನತಂತ್ರದ ತವರು ಎಂದು ಇಂದು ಮೋದಿಯವರು ಹೋದಲ್ಲಿ ಬಂದಲ್ಲಿ ಭಾಷಣ ಮಾಡುತ್ತಾರೆ. ಆ ಜನತಂತ್ರದ ಬೀಜವನ್ನು ಭಾರತದಲ್ಲಿ ಬಿತ್ತಿದವರು ಬುದ್ಧ-ಬಸವಣ್ಣ ಮುಂತಾದ ದಾರ್ಶನಿಕರೆ ಹೊರತು ಮೋದಿಯವರ ಪಕ್ಷ ನಂಬುವ ಸನಾತನ ಧರ್ಮದವರಲ್ಲ ಎನ್ನುವುದು ನಾವು ಅರಿಯಬೇಕಿದೆ. ಬುದ್ದ-ಬಸವಣ್ಣನವರು ನೆಟ್ಟ ಆ ಪ್ರಾಚೀನ ಜನತಂತ್ರದ ಬೇರುಗಳನ್ನು ಗಟ್ಟಿಗೊಳಿಸಿದವರು ನೆಹರು-ಗಾಂಧಿ-ಅಂಬೇಡ್ಕರ್ ಮುಂತಾದವರು. ಆದರೆ ಇಂದು ದೇಶದ್ರೋಹಿಗಳು ಇವರನ್ನು ದ್ವೇಷಿಸುತ್ತಾ ತಾವೇ ರಾಷ್ಟ್ರಭಕ್ತರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಜೆ ಬಿ ಕೃಪಾಲಿನಿˌ ರಾಮಮನೋಹರ್ ಲೋಹಿಯಾ, ದೀನ್ ದಯಾಳ್ ಉಪದ್ಯಾಯ ಈ ಮೂವರು ನಾಯಕರ ವಿರುದ್ಧ ಸಂಸತ್ತಿನ ಮಧ್ಯಾವಧಿ ಚುನಾವಣೆಯಲ್ಲಿ ಅಂದು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸದೆ ಅವರನ್ನು ಸಂಸತ್ತಿಗೆ ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿತು. ಇದು ನಿಜವಾದ ಜನತಂತ್ರದ ಮಾರ್ಗ. ಇಂದು ತನ್ನ ಹತ್ತು ವರ್ಷಗಳ ಆಡಳಿತದಲ್ಲಿ ಮೋದಿಯವರು ಕನಿಷ್ಟ ವಿರೋಧ ಪಕ್ಷದ ನಾಯಕ ಇರದಂತೆ ನೋಡಿಕೊಂಡರು. ಆದರೂ ಅವರು ನೆಹರುರವರನ್ನು ದೂಷಿಸುತ್ತ ತಮ್ಮ ಆಡಳಿತದ ವಿಫಲತೆಯನ್ನು ಮರೆಮಾಚಿಕೊಳ್ಳುತ್ತಿದ್ದಾರೆ.

ಇಂದು ನೆಹರು ಈ ದೇಶಕ್ಕೆ ಅನ್ಯಾಯ ಮಾಡಿದರು ಎಂದು ಸುಳ್ಳು ಕತೆಗಳನ್ನು ಹೇಳಿಕೊಂಡು ಓಡಾಡುತ್ತಿರುವವರು ಭಾರತದ ಸ್ವಾತಂತ್ರ್ಯಕ್ಕಾಗಿ ನೆಹರು ೯ ವರ್ಷ ಜೈಲಿನಲ್ಲಿ ಕಳೆದದ್ದನ್ನು ಮರೆತ್ತಂತೆ ನಟಿಸುತ್ತಿದ್ದಾರೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿರುವಾಗ ಬ್ರಿಟೀಷರಿಗೆ ನೆರವಾಗುತ್ತ ಸ್ವಾತಂತ್ರ ಚಳುವಳಿಯನ್ನು ಹತ್ತಿಕ್ಕುತ್ತಿದ್ದವರು ಇಂದು ದೇಶಭಕ್ತಿಯ ಮಾತನಾಡುತ್ತಿರುವುದು ವಿಪರ್ಯಾಸವಾಗಿದೆ.

Tags: ಜವಾಹರ್ ಲಾಲ್ ನೆಹರು
Previous Post

ರಾಜ್ಯ ಬಜೆಟ್​ನಲ್ಲಿ ಸಿಎಂ ಕೊಟ್ಟ ವಿಶೇಷ ಕೊಡುಗೆಗಳ ವಿಶ್ಲೇಷಣೆ..!

Next Post

ಬಸವರಾಜ ಬೊಮ್ಮಾಯಿಗೆ ನಾಯಿ ಮೇಲೆ ಈ ಪ್ರೀತಿ ಬಂದಿದ್ದು ಯಾಕೆ..?

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

CM Siddaramaiah: ಗ್ರೇಟರ್ ಮೈಸೂರು ಆಗಬೇಕು, ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು..!!

November 3, 2025

N Cheluva Narayanaswamy: ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ನೀಡಿದ ಸಚಿವ ಎನ್ ಚೆಲುವರಾಯಸ್ವಾಮಿ..!!

November 3, 2025
Next Post
ಬಸವರಾಜ ಬೊಮ್ಮಾಯಿಗೆ ನಾಯಿ ಮೇಲೆ ಈ ಪ್ರೀತಿ ಬಂದಿದ್ದು ಯಾಕೆ..?

ಬಸವರಾಜ ಬೊಮ್ಮಾಯಿಗೆ ನಾಯಿ ಮೇಲೆ ಈ ಪ್ರೀತಿ ಬಂದಿದ್ದು ಯಾಕೆ..?

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada