ಮೈಸೂರು : ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿಂದು ದಿಶಾ ಸಭೆ ನಡೆಯಿತು. ಸಭೆಯ ಆರಂಭದಲ್ಲಿಯೇ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ .

ಆಯುಷ್ಮಾನ್ ಕಾರ್ಡ್ ವಿತರಣೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಪರವಾಗಿ ಆಗಮಿಸಿದ್ದ ಅಧಿಕಾರಿ ಜಯಂತ್ರಿಗೆ ಪ್ರತಾಪ್ ಸಿಂಹ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು ದಿಶಾ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹಗೆ ಶಾಸಕರಾದ ಶ್ರೀವತ್ಸ,ಕೆ.ಹರೀಶ್ ಗೌಡ,ದರ್ಶನ್ ಧೃವನಾರಾಯಣ್,ಡಿಸಿ ಕೆವಿ ರಾಜೇಂದ್ರ,ಜಿಪಂ ಸಿಇಒ ಗಾಯತ್ರಿ,ಪಾಲಿಕೆ ಆಯುಕ್ತರು ಲಕ್ಷ್ಮಿಕಾಂತರೆಡ್ಡಿ ಸಾಥ್ ನೀಡಿದ್ರು .