ಇತ್ತೀಚೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R ashok) ನೀಡಿದ್ದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬೆಂಗಳೂರಿನಲ್ಲಿ (Bangalore) ಆರ್..ಅಶೋಕ್ ಭವಿಷ್ಯ ನುಡಿದಿದ್ದರು. ಇದೀಗ ಮಾಜಿ ಸಚಿವ ಅಶ್ವಥ್ ನಾರಾಯಣ (Ashwath narayana) ಕೂಡ ಈ ಹೇಳಿಕೆಯನ್ನ ಪುನರಾವರ್ತಿಸಿದ್ದಾರೆ.
![](https://pratidhvani.com/wp-content/uploads/2024/05/IMG_7647.jpeg)
ಮಹಾರಾಷ್ಟ್ರ (Maharashtra) ಮಾದರಿಯಲ್ಲಿಯೇ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ (Congress government) ಪತನವಾಗಲಿದೆ ಎಂಬ ಏಕನಾಥ್ ಶಿಂಧೆ (Eknath shindhe) ಹೇಳಿಕೆಯ ವಿಚಾರ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಪ್ರತಿಕ್ರಿಯಿಸಿದ್ರು.ನಾವ್ಯಾರು ಇಲ್ಲಿನ ಸರ್ಕಾರ ಬೀಳಿಸುವುದಿಲ್ಲ.ನಮಗೆ ಸರ್ಕಾರ ಬೀಳಿಸುವ ಕೆಲಸವು ಇಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್ಸಿಗರೇ ಸರ್ಕಾರ ಕೆಡವಲಿದ್ದಾರೆ ಎಂದ್ರು.
![](https://pratidhvani.com/wp-content/uploads/2024/05/IMG_7646.jpeg)
ಈ ಕಾಂಗ್ರೆಸ್ಸಿಗರ ಅಧಿಕಾರದ ದಾಹದಿಂದಲೇ ಸರ್ಕಾರ ಪತನವಾಗಲಿದೆ.ನಮ್ಮ ಪಕ್ಷಕ್ಕೆ ಯಾವುದೇ ಇಂತಹ ಆಸೆ ಇಲ್ಲ.ನಾನು ಮುಖ್ಯಮಂತ್ರಿ (CM), ಉಪ-ಮುಖ್ಯಮಂತ್ರಿ (Dcm), ಸಚಿವ (Minister), ಶಾಸಕ (Mia) ಅಂತಾ ಅಧಿಕಾರದ ದಾಹ ಕಾಂಗ್ರೆಸ್ನಲ್ಲಿ ಬಹಳ ಇದೆ.ಅವರ ಆಡಳಿತ ವ್ಯವಸ್ಥೆ, ಭ್ರಷ್ಟಾಚಾರ, ಕರ್ಮಕಾಂಡದಿಂದಲೇ ಸರ್ಕಾರ ಹೋಗುತ್ತದೆ ಎಂದು ಹೇಳಿದ್ದು.