ಕಿರುತೆರೆ (small screen) ಮತ್ತು ಸಿನಿಮಾಗಳ (cinema) ಮೂಲಕ ಕಲಾವಿದನಾಗಿ ಗುರುತಿಸಿಕೊಂಡಿರುವ ನಟ ಚೇತನ್ ಚಂದ್ರ (Chethan chandra) ಮೇಲೆ ಕೆಲ ಕಿಡಿಗೇಡಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಮುಖ-ಕೈಕಾಲು ಭಾಗವೆಲ್ಲಾ ರಕ್ತಸಿಕ್ತ ಆಗುವಷ್ಟರ ಮಟ್ಟಿಗೆ ಹಲ್ಲೆ ನಡೆಸಲಾಗಿದ್ದು, ಚೇತನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕನಕಪುರದ (kanakapura) ಬಳಿ ದೇವಸ್ಥಾನಕ್ಕೆ ಹೋಗಿ ಬರ್ತಿದ್ದ ನಟ ಚೇತನ್ ಚಂದ್ರ ಮೇಲೆ ಕೆಲ ಪುಂಡರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಓರ್ವ ಯುವಕ ವೀಲ್ಡಿಂಗ್ ಮಾಡುತ್ತಾ ಬಂದು ಚೇತನ್ ಕಾರನ್ನ ಅಡ್ಡಗಟ್ಟಿ ಮೊದಲಿಗೆ ಕಾರಿಗೆ ಕಬ್ಬಿಣದ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ.

ಆಗ ಚೇತನ್ ಕಾರು (car) ನಿಲ್ಲಿಸಿ ಇಳಿತಾ ಇದ್ದಂತೆ ಬೈಕ್ನಲ್ಲಿ (Bike) ಹಿಂದೆ ಕೂತಿದ್ದ ಯುವತಿ ಏನು ಮಾಡಬೇಡಿ ಆತ ಕುಡಿದಿದ್ದಾನೆ ಅಂತಾ ಹೇಳಿದ್ದಾಳೆ. ನಂತರ ಆ ಸ್ಥಳಕ್ಕೆ ಬಂದ 15 ರಿಂದ 20 ಯುವಕರು ಏಕಾಏಕಿ ಹಲ್ಲೆ ಮಾಡಿದ್ದಾರೆ. ಬಳಿಕ ಒಂದು ಚೈನ್, ಹಣ ಹಾಗೂ ಇನ್ನೆಲ್ಲಾ ವಿಡಿಯೋ (Video) ಮಾಡ್ತಿದ್ದ ಮೊಬೈಲ್ನ (Mobile) | ಕದ್ದು ಪರಾರಿ ಆಗಿದ್ದಾರೆ. ಇನ್ನೂ ಚೇತನ್ ದೇಹ ಹಾಗೂ ತಲೆ ಭಾಗಕ್ಕೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ. ಅತ್ತ ತನಗಾದ ಹಲ್ಲೆ ಬಗ್ಗೆ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.