• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಕಳೆದ ಆರು ತಿಂಗಳಲ್ಲಿ ೮೭ˌ೦೦೦ ಜನರು ಭಾರತೀಯ ನಾಗರಿಕತೆ ತೊರೆದಿದ್ದಾರೆ

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
July 24, 2023
in ಅಂಕಣ, ಅಭಿಮತ
0
ಕಳೆದ ಆರು ತಿಂಗಳಲ್ಲಿ ೮೭ˌ೦೦೦ ಜನರು ಭಾರತೀಯ ನಾಗರಿಕತೆ ತೊರೆದಿದ್ದಾರೆ
Share on WhatsAppShare on FacebookShare on Telegram

ಈ ವರ್ಷದ ಅಂದರೆ ೨೦೨೩ ಜನೆವರಿಯಿಂದ ಜೂನ್ ತಿಂಗಳ ಕೊನೆಯ ತನಕ ಒಟ್ಟು ೮೭ˌ೦೦೦ ಜನರು ಭಾರತದ ನಾಗರಿಕತೆಯನ್ನು ತ್ಯಜಿಸಿರುವುದಾಗಿ ಶುಕ್ರವಾರ ಸಂಸತ್ತಿನ ಸದನದಲ್ಲಿ ಮೋದಿ ಸರಕಾರ ಹೇಳಿಕೆ ನೀಡಿದೆ. ಕಾಂಗ್ರೆಸ್ ಸಂಸದ ಕೆ ಚಿದಂಬರಮ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜಯಶಂಕರ್ ಅವರು ಈ ಕುರಿತ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಸಚಿವರು ತಮಗೆ ಕೇಳಲಾದ ಪ್ರಶ್ನೆಗೆ ಸುದೀರ್ಘವಾದ ಉತ್ತರವನ್ನು ಅಂಕಿಅಂಶಗಳ ಸಮೇತ ನೀಡಿದ್ದಾರೆ.

ADVERTISEMENT

ಸಂಸತ್ತಿನಲ್ಲಿ ತಮಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಜಯಶಂಕರ ಅವರು ೨೦೨೨ ರಲ್ಲಿ ೨.೧೫ ಲಕ್ಷ ˌ ೨೦೨೧ ರಲ್ಲಿ ೧.೬೩ ಲಕ್ಷ ˌ ಮತ್ತು ೨೦೨೦ ರಲ್ಲಿ ೮೫ˌ೨೫೬ ಜನರು ತನ್ನ ಭಾರತೀಯ ನಾಗರಿಕತೆಯನ್ನು ತ್ಯಜಿಸಿರುವುದಾಗಿ ಹೇಳಿದ್ದಾರೆ. ಮುಂದುವರೆದ ಸಚಿವರು ೨೦೧೯ ರಲ್ಲಿ ೧.೪೪ ಲಕ್ಷ ˌ ೨೦೧೮ ರಲ್ಲಿ ೧.೩೪ ಲಕ್ಷ ˌ ೨೦೧೭ ರಲ್ಲಿ ೧.೩೩ ಲಕ್ಷ ˌ ೨೦೧೬ ರಲ್ಲಿ ೧.೪೧ˌ ೨೦೧೫ ರಲ್ಲಿ ೧.೩೧ ಮತ್ತು ೨೦೧೪ ರಲ್ಲಿ ೧.೨೯ ಲಕ್ಷ ಜನರು ಭಾರತಿಯ ಪೌರತ್ವ ಬಿಟ್ಟುಕೊಟ್ಟಿರುವುದಾಗಿ ತಿಳಿಸಿದ್ದಾರೆ. ಅಂದರೆ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ೨೦೧೪ ರಿಂದ ಒಟ್ಟು ೧೩.೭೫ ಲಕ್ಷ ಜನರು ಭಾರತದ ಪೌರತ್ವ ಬಿಟ್ಟಂತಾಗಿದೆ.

ಕಾನೂನಿನ ಪ್ರಕಾರ ಭಾರತೀಯರಿಗೆ ದ್ವಿಪೌರತ್ವ ನಿಷೇಧಿಸಲಾಗಿದೆ. ಪಾಸಪೋರ್ಟ್ ಅಧಿನಿಯಮದ ಅನ್ವಯ ವಿದೇಶದಲ್ಲಿ ನೆಲೆಸಿರುವ ಭಾರತಿಯರು ತಮ್ಮ ಭಾರತದ ಪೌರತ್ವವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಪಾಪಸ್ಸು ಮಾಡಬೇಕು. ಶುಕ್ರವಾರ ಸಂಸತ್ತಿನ ಸದನದಲ್ಲಿ ಉತ್ತರಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ ಅವರು ಕಳೆದ ಎರಡು ದಶಕಗಳಲ್ಲಿ ಭಾರತಿಯರ ವಿದೇಶ ಪಲಾಯನ ಅಧಿಕಗೊಂಡಿದೆ. ಭಾರತದಲ್ಲಿ ತಮಗೆ ಉತ್ತಮ ಭವಿಷ್ಯವಿಲ್ಲದ ಕಾರಣವನ್ನು ನಾವು ಊಹಿಸಬಹುದಾಗಿದೆ. ಸಚಿವರು ಭಾರತೀಯರ ಈ ವಿದೇಶ ಪಲಾಯನವನ್ನು ಸಮರ್ಥಿಸಿ ˌತಮ್ಮ ಉತ್ತಮ ಭವಿಷ್ಯದ ದೃಷ್ಟಿಯಿಂದ ಅಲ್ಲಿಯೆ ನೆಲೆಸಲು ಇಷ್ಟಪಡುತ್ತಾರೆ ಎಂದಿದ್ದಾರೆ.

ಅನಿವಾಸಿ ಭಾರತೀಯರು ತಾವು ಉದ್ಯೋಗಿಗಳಾಗಿರುವ ದೇಶಗಳ ಪೌರತ್ವ ಪಡೆಯುತ್ತಿದ್ದು ಭಾರತೀಯ ಪೌರತ್ವವನ್ನು ಬಿಟ್ಟುಕೊಡುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಹೀಗೆ ವಿದೇಶಗಳಲ್ಲಿ ತಮ್ಮ ಭವಿಷ್ಯವನ್ನು ಸುಧಾರಿಸಿಕೊಂಡಿರುವ ಅನಿವಾಸಿ ಭಾರತೀಯ ಸಮುದಾಯದಿಂದ ಭಾರತಕ್ಕೆ ಒಳ್ಳೆಯ ನೆರವು ದೊರೆಯಲಿದೆ ಎಂದು ಸಚಿವರು ಅಸಂಬದ್ಧವಾಗಿ ಈ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮೋದಿಯ ಅಸಮರ್ಥ ಆಡಳಿತ ಭಾರತೀಯರು ಪೌರತ್ವ ತೊರೆಯಲು ಕಾರಣ ಎನ್ನುವುದನ್ನು ಸಚಿವರು ಮರೆಮಾಚಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

~ಡಾ. ಜೆ ಎಸ್ ಪಾಟೀಲ.

Tags: BJPCentral GovernmentIndiaIndian citizenIndian citizenship
Previous Post

ರಾಜ್ಯದ 11 ಜಿಲ್ಲೆಗಳಿಗೆ ಮಳೆ ಅಲರ್ಟ್‌.. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..

Next Post

ಲಿಂಗ ಸೂಕ್ಷ್ಮತೆ ಇಲ್ಲದ ಪುರುಷಾಧಿಪತ್ಯದ ನಡುವೆ- ಭಾಗ 2

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧಿಕ ಅವಕಾಶಗಳು

April 27, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 25, 2026
ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

ಸಂವಿಧಾನ ಸಮಾನತೆ ಮತ್ತು ಮಹಿಳಾ ಮೀಸಲಾತಿ

April 24, 2026
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
Next Post
ಲಿಂಗ ಸೂಕ್ಷ್ಮತೆ ಇಲ್ಲದ ಪುರುಷಾಧಿಪತ್ಯದ ನಡುವೆ- ಭಾಗ 1

ಲಿಂಗ ಸೂಕ್ಷ್ಮತೆ ಇಲ್ಲದ ಪುರುಷಾಧಿಪತ್ಯದ ನಡುವೆ- ಭಾಗ 2

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada