
ಸ್ಯಾಂಡಲ್ ವುಡ್(Sandalwood) ನಟಿಯೊಬ್ಬಳು ಕೊಲೆಯಾದ ಘಟನೆ ಮೈಸೂರು ಜಿಲ್ಲೆಯ ತಿ. ನರಸೀಪುರ(T Narasipura) ತಾಲ್ಲೂಕು ತುರಗನೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪತಿಯಿಂದಲೇ ಆಕೆ ಕೊಲೆಯಾಗಿದ್ದಾಳೆ. ವಿದ್ಯಾ ಕೊಲೆಯಾದ ನಟಿ. ಕೌಟುಂಬಿಕ ಕಲಹ ಹಿನ್ನೆಲೆ ವಿದ್ಯಾಳನ್ನ ಕೈಯ್ಯಾರೆ ತನ್ನ ಪತಿಯೇ ಕೊಂದು ಹಾಕಿದ್ದಾನೆ. ಪತಿ ನಂದೀಶ್ ಎಂಬಾತ ಆಕೆಯನ್ನು ಕೊಲೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು ಕೊನೆಗೆ ವಿದ್ಯಾ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ವಿದ್ಯಾ ಮೈಸೂರು ನಗರ ಕಾಂಗ್ರೆಸ್(Congress) ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚಿರಂಜೀವಿ ಸರ್ಜಾ(Chiranjivi Sarja) ಜೊತೆ ಅಜಿತ್(Ajith), ಶಿವಣ್ಣನ(Shivana) ಜೊತೆ ವೇದಾ , ಭಜರಂಗಿ(Bajarangi) ಚಿತ್ರದಲ್ಲಿ ವಿದ್ಯಾ ನಟಿಸಿದ್ದಾರೆ.

ಪೋಷಕ ಪಾತ್ರದಲ್ಲಿ ಮಿಂಚಿದ್ದ ನಾಯಕ ನಟಿಯಾಗಿ ಮಿಂಚಿದ್ದಾರೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾ ಅವರಿಗೆ ನಂದೀಶ್(Nandesh) ಎಂಬಾತನ ಜೊತೆಗೆ 2018ರಲ್ಲಿ ವಿವಾಹವಾಗಿತ್ತು. ಆದರೆ ದಂಪತಿಗಳ ನಡುವೆ ಸಾಮರಸ್ಯದ ಕೊರತೆ ಇತ್ತು. ಹಾಗಾಗಿ, ವಿದ್ಯಾ ಮತ್ತು ನಂದೀಶ್ ನಡುವೆ ಹಲವು ದಿನಗಳಿಂದ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. ಮೇ 20ರಂದು ಕೂಡ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಈ ಕೃತ್ಯ ನಡೆದಿದೆ. ವಿದ್ಯಾ ತನ್ನ ತವರುಮನೆಯಾದ ಶ್ರೀರಾಂಪುರಕ್ಕೆ(Srirampur) ಹೋಗಿದ್ದರು. ಮೇ 20ರ ರಾತ್ರಿ ಪತಿಯೊಂದಿಗೆ ಫೋನ್ನಲ್ಲಿ(Phone) ವಿದ್ಯಾ ಮಾತನಾಡುವಾಗ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಹಾಗಾಗಿ, ರಾತ್ರಿಯೇ ಮೈಸೂರಿನಿಂದ ಹೊರಟು ಗಂಡನ ಮನೆ ಇರುವ ತುರುಗನೂರಿಗೆ ವಿದ್ಯಾ ತೆರಳಿದ್ದರು. ತುರುಗನೂರಿಗೆ ಹೋದಮೇಲೆ ವಿದ್ಯಾ ಮತ್ತು ನಂದೀಶ್ ನಡುವೆ ಜಗಳ(Fight) ಇನ್ನಷ್ಟು ತಾರಕಕ್ಕೇರಿದೆ. ಈ ವೇಳೆ ಗಂಡ- ಹೆಂಡತಿ(Husband-Wife) ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಪತಿ ನಂದೀಶ್ ಸುತ್ತಿಗೆಯಿಂದ ವಿದ್ಯಾ ಮೇಲೆ ಹಲ್ಲೆ(Attack) ಮಾಡಿದ್ದು, ತಲೆಗೆ ಬಲವಾದ ಪೆಟ್ಟುಬಿದ್ದ ಪರಿಣಾಮವಾಗಿ ಸ್ಥಳದಲ್ಲೇ ಕುಸಿದು ಬಿದ್ದ ವಿದ್ಯಾ ಸಾವನ್ನಪ್ಪಿದ್ದಾರೆ(Died).